‘ಚೈತ್ರದ ಪ್ರೇಮಾಂಜಲಿ’ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡ ಎಸ್.ನಾರಾಯಣ್ ಸುಮಾರು 50 ಚಲನಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. 21 ಚಿತ್ರಗಳನ್ನು ನಿರ್ಮಿಸಿರುವ ಇವರು 30 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ‘ನಂಜುಂಡ’, ‘ಅನುರಾಗದ ಅಲೆಗಳು’, ‘ಬೇವು ಬೆಲ್ಲ’, ‘ಕಲ್ಯಾಣಿ’, ‘ಭಾಮಾ ಸತ್ಯಭಾಮಾ’, ‘ವೀರಪ್ಪ ನಾಯಕ’, ‘ಸೂರ್ಯವಂಶ’, ‘ಗಲಾಟೆ ಅಳಿಯಂದಿರು’, ‘ಸಿಂಹಾದ್ರಿಯ ಸಿಂಹ’, ‘ಚಂದ್ರ ಚಕೋರಿ’, ‘ಚೆಲುವಿನ ಚಿತ್ತಾರ’ ಇವರ ನಿರ್ದೇಶನದ ಪ್ರಮುಖ ಚಿತ್ರಗಳು. 1999ರಲ್ಲಿ ಇವರು ನಿರ್ಮಿಸಿದ ‘ಶಬ್ದವೇದಿ’ ಚಿತ್ರ ‘ವಿಶೇಷ ಸಾಮಾಜಿಕ ಪರಿಣಾಮ ಬೀರುವ ಚಿತ್ರ’ ಪ್ರಶಸ್ತಿಗೆ ಆಯ್ಕೆಯಾಗಿತ್ತು.