<p>‘ಜೀವನದಲ್ಲಿ ಪ್ರೀತಿ, ನಂಬಿಕೆ ಮುಖ್ಯವಲ್ಲ. ಪ್ರೀತಿ ಪಡೆಯಲು, ನಂಬಿಕೆ ಉಳಿಯಲು ಸ್ವಾತಂತ್ರ್ಯ ಬೇಕು’ ಎಂದು ಬದುಕಿನ ಪಾಠ ಹೇಳಿದರು ನಟ ಆರ್ಯವರ್ಧನ್.</p>.<p>ಎಸ್. ನಲಿಗೆ ಪ್ರೊಡಕ್ಷನ್ನಡಿ ನಿರ್ಮಾಣವಾಗಿರುವ ‘ಖನನ’ ಚಿತ್ರ ಇದೇ ಶುಕ್ರವಾರ ಮೂರು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.ತಮಿಳಿನಲ್ಲಿ ಇದಕ್ಕೆ ‘ದಗನಂ’ ಎಂದು ಹೆಸರಿಟ್ಟರೆ, ತೆಲುಗಿನಲ್ಲಿ ‘ಖನನಂ’ ಎಂದು ಹೆಸರಿಡಲಾಗಿದೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಆಗಮಿಸಿತ್ತು.</p>.<p>ಐದು ಶೇಡ್ಗಳಿರುವ ಪಾತ್ರಕ್ಕೆ ಬಣ್ಣ ಹಚ್ಚಿರುವ ಆರ್ಯವರ್ಧನ್ ಈ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸುತ್ತಿರುವ ಖುಷಿಯಲ್ಲಿದ್ದರು. ‘ನಾವೆಲ್ಲರೂ ಹಣದ ಹಿಂದೆ ಬಿದ್ದಿದ್ದೇವೆ. ನೆಮ್ಮದಿಯಿಂದ ಬದುಕುವುದನ್ನು ಮರೆತಿದ್ದೇವೆ’ ಎಂದು ಅವರು ಮಾತು ವಿಸ್ತರಿಸಿದರು.</p>.<p>ಪಾಪ ಮಾಡುವಾಗ ಆನಂದ ಇರುತ್ತದೆ. ಆದರೆ, ಅದರ ಪರಿಣಾಮ ಭೀಕರವಾಗಿರುತ್ತದೆ. ಪಾಪ ಶಾಪವಾಗಿ ನಮ್ಮನ್ನು ಹಿಂಬಾಲಿಸುತ್ತದೆ ಎನ್ನುವುದೇ ಈ ಚಿತ್ರದ ಕಥಾಹಂದರ.</p>.<p>ನಿರ್ದೇಶಕ ರಾಧ ಅವರಿಗೆ ಇದು ಮೊದಲ ಚಿತ್ರ. ‘ಚಿತ್ರದ ಸನ್ನಿವೇಶಗಳು ವಿಭಿನ್ನವಾಗಿವೆ. ಅರ್ಧಗಂಟೆ ಕಾಲ ಕ್ಲೈಮ್ಯಾಕ್ಸ್ ಇರಲಿದೆ. ನೋಡುಗರಿಗೆ ಹೊಸತನ ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇವೆ’ ಎನ್ನುವ ವಿಶ್ವಾಸ ಅವರ ಮಾತಿನಲ್ಲಿತ್ತು.</p>.<p>ನಿರ್ಮಾಪಕ ಬಿ. ಶ್ರೀನಿವಾಸ್ ರಾವ್ ಬಾಲ್ಯದಲ್ಲಿ ಸಿನಿಮಾದ ಹುಚ್ಚು ಹಿಡಿಸಿಕೊಂಡು ಚೆನ್ನೈಗೆ ಹೋಗಿ ಮೋಸ ಹೋಗಿದ್ದನ್ನು ನೆನಪಿಸಿಕೊಂಡರು. ತನ್ನ ನಟನೆಯ ಕನಸನ್ನು ಮಗ ಆರ್ಯವರ್ಧನ್ ಮೂಲಕ ಈಡೇರಿಸಿಕೊಳ್ಳುವ ತವಕ ಅವರಲ್ಲಿತ್ತು.</p>.<p>ಪ್ರಸ್ತುತ ಹೊಸಬರ ಸಿನಿಮಾಗಳು ಜನರಿಗೆ ತಲುಪಲು ಚಿತ್ರಮಂದಿರದಲ್ಲಿ ಕನಿಷ್ಠ ಎರಡು ವಾರಗಳ ಕಾಲ ಪ್ರದರ್ಶನ ಕಾಣುವುದು ಅನಿವಾರ್ಯ. ಅದಕ್ಕಾಗಿಯೇ ಅವರು ಚಿತ್ರಮಂದಿರಕ್ಕೆ ಮುಂಗಡವಾಗಿ ಎರಡು ವಾರದ ಬಾಡಿಗೆಯನ್ನೂ ಪಾವತಿಸಿದ್ದಾರಂತೆ.</p>.<p>‘ಪ್ರತಿ ಹಳ್ಳಿಯಲ್ಲೂ ಖನನದ ಬಗ್ಗೆ ತಿಳಿಸಲು ಪ್ರಚಾರ ವ್ಯವಸ್ಥೆ ಕೈಗೊಂಡಿದ್ದೇನೆ. ಉಚಿತವಾಗಿ 5 ಸಾವಿರ ಟಿಕೆಟ್ ಹಂಚುವ ವ್ಯವಸ್ಥೆಯನ್ನೂ ಮಾಡಿದ್ದೇನೆ’ ಎಂದು ಮಾಹಿತಿ ನೀಡಿದರು.</p>.<p>ಕರಿಷ್ಮಾ ಬರೂಹ ಈ ಚಿತ್ರದ ನಾಯಕಿ. ಯುವಕಿಶೋರ್, ಅವಿನಾಶ್, ಓಂಪ್ರಕಾಶ್ ರಾವ್, ಬ್ಯಾಂಕ್ ಜನಾರ್ಧನ್, ವಿನಯಾಪ್ರಸಾದ್ ತಾರಾಗಣದಲ್ಲಿದ್ದಾರೆ. ಕುನ್ನಿ ಗುಡಿಪತಿ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ರಮೇಶ್ ತಿರುಪತಿ ಅವರದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಜೀವನದಲ್ಲಿ ಪ್ರೀತಿ, ನಂಬಿಕೆ ಮುಖ್ಯವಲ್ಲ. ಪ್ರೀತಿ ಪಡೆಯಲು, ನಂಬಿಕೆ ಉಳಿಯಲು ಸ್ವಾತಂತ್ರ್ಯ ಬೇಕು’ ಎಂದು ಬದುಕಿನ ಪಾಠ ಹೇಳಿದರು ನಟ ಆರ್ಯವರ್ಧನ್.</p>.<p>ಎಸ್. ನಲಿಗೆ ಪ್ರೊಡಕ್ಷನ್ನಡಿ ನಿರ್ಮಾಣವಾಗಿರುವ ‘ಖನನ’ ಚಿತ್ರ ಇದೇ ಶುಕ್ರವಾರ ಮೂರು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.ತಮಿಳಿನಲ್ಲಿ ಇದಕ್ಕೆ ‘ದಗನಂ’ ಎಂದು ಹೆಸರಿಟ್ಟರೆ, ತೆಲುಗಿನಲ್ಲಿ ‘ಖನನಂ’ ಎಂದು ಹೆಸರಿಡಲಾಗಿದೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಆಗಮಿಸಿತ್ತು.</p>.<p>ಐದು ಶೇಡ್ಗಳಿರುವ ಪಾತ್ರಕ್ಕೆ ಬಣ್ಣ ಹಚ್ಚಿರುವ ಆರ್ಯವರ್ಧನ್ ಈ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸುತ್ತಿರುವ ಖುಷಿಯಲ್ಲಿದ್ದರು. ‘ನಾವೆಲ್ಲರೂ ಹಣದ ಹಿಂದೆ ಬಿದ್ದಿದ್ದೇವೆ. ನೆಮ್ಮದಿಯಿಂದ ಬದುಕುವುದನ್ನು ಮರೆತಿದ್ದೇವೆ’ ಎಂದು ಅವರು ಮಾತು ವಿಸ್ತರಿಸಿದರು.</p>.<p>ಪಾಪ ಮಾಡುವಾಗ ಆನಂದ ಇರುತ್ತದೆ. ಆದರೆ, ಅದರ ಪರಿಣಾಮ ಭೀಕರವಾಗಿರುತ್ತದೆ. ಪಾಪ ಶಾಪವಾಗಿ ನಮ್ಮನ್ನು ಹಿಂಬಾಲಿಸುತ್ತದೆ ಎನ್ನುವುದೇ ಈ ಚಿತ್ರದ ಕಥಾಹಂದರ.</p>.<p>ನಿರ್ದೇಶಕ ರಾಧ ಅವರಿಗೆ ಇದು ಮೊದಲ ಚಿತ್ರ. ‘ಚಿತ್ರದ ಸನ್ನಿವೇಶಗಳು ವಿಭಿನ್ನವಾಗಿವೆ. ಅರ್ಧಗಂಟೆ ಕಾಲ ಕ್ಲೈಮ್ಯಾಕ್ಸ್ ಇರಲಿದೆ. ನೋಡುಗರಿಗೆ ಹೊಸತನ ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇವೆ’ ಎನ್ನುವ ವಿಶ್ವಾಸ ಅವರ ಮಾತಿನಲ್ಲಿತ್ತು.</p>.<p>ನಿರ್ಮಾಪಕ ಬಿ. ಶ್ರೀನಿವಾಸ್ ರಾವ್ ಬಾಲ್ಯದಲ್ಲಿ ಸಿನಿಮಾದ ಹುಚ್ಚು ಹಿಡಿಸಿಕೊಂಡು ಚೆನ್ನೈಗೆ ಹೋಗಿ ಮೋಸ ಹೋಗಿದ್ದನ್ನು ನೆನಪಿಸಿಕೊಂಡರು. ತನ್ನ ನಟನೆಯ ಕನಸನ್ನು ಮಗ ಆರ್ಯವರ್ಧನ್ ಮೂಲಕ ಈಡೇರಿಸಿಕೊಳ್ಳುವ ತವಕ ಅವರಲ್ಲಿತ್ತು.</p>.<p>ಪ್ರಸ್ತುತ ಹೊಸಬರ ಸಿನಿಮಾಗಳು ಜನರಿಗೆ ತಲುಪಲು ಚಿತ್ರಮಂದಿರದಲ್ಲಿ ಕನಿಷ್ಠ ಎರಡು ವಾರಗಳ ಕಾಲ ಪ್ರದರ್ಶನ ಕಾಣುವುದು ಅನಿವಾರ್ಯ. ಅದಕ್ಕಾಗಿಯೇ ಅವರು ಚಿತ್ರಮಂದಿರಕ್ಕೆ ಮುಂಗಡವಾಗಿ ಎರಡು ವಾರದ ಬಾಡಿಗೆಯನ್ನೂ ಪಾವತಿಸಿದ್ದಾರಂತೆ.</p>.<p>‘ಪ್ರತಿ ಹಳ್ಳಿಯಲ್ಲೂ ಖನನದ ಬಗ್ಗೆ ತಿಳಿಸಲು ಪ್ರಚಾರ ವ್ಯವಸ್ಥೆ ಕೈಗೊಂಡಿದ್ದೇನೆ. ಉಚಿತವಾಗಿ 5 ಸಾವಿರ ಟಿಕೆಟ್ ಹಂಚುವ ವ್ಯವಸ್ಥೆಯನ್ನೂ ಮಾಡಿದ್ದೇನೆ’ ಎಂದು ಮಾಹಿತಿ ನೀಡಿದರು.</p>.<p>ಕರಿಷ್ಮಾ ಬರೂಹ ಈ ಚಿತ್ರದ ನಾಯಕಿ. ಯುವಕಿಶೋರ್, ಅವಿನಾಶ್, ಓಂಪ್ರಕಾಶ್ ರಾವ್, ಬ್ಯಾಂಕ್ ಜನಾರ್ಧನ್, ವಿನಯಾಪ್ರಸಾದ್ ತಾರಾಗಣದಲ್ಲಿದ್ದಾರೆ. ಕುನ್ನಿ ಗುಡಿಪತಿ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ರಮೇಶ್ ತಿರುಪತಿ ಅವರದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>