ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಹಾರರ್, ಸಸ್ಪೆನ್ಸ್ ಚಿತ್ರ ಇದು. ನಟ ರಮೇಶ್ ಅರವಿಂದ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಉಳಿದಂತೆ ಸ್ಕಂದ ಅಶೋಕ್, ಶಿವರಾಂ, ರಂಗಾಯಣ ರಘು ಮತ್ತು ಅನು ಪ್ರಭಾಕರ್ ತಾರಾಗಣದಲ್ಲಿದ್ದಾರೆ. ರವಿಶಂಕರ್ ಅವರದು ದ್ವಿಪಾತ್ರ. ಅಘೋರಿ ಪಾತ್ರದಲ್ಲಿ ನಟಿಸಿರುವ ಅವರು ಹಾಡೊಂದಕ್ಕೆ ಹಿನ್ನೆಲೆ ಗಾಯನವನ್ನೂ ನೀಡಿದ್ದಾರೆ.