ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗ ಚೈತನ್ಯರಿಂದ ಬೇರೆಯಾದ ನಂತರ ಸಾಯುತ್ತೇನೆಂದು ಭಾವಿಸಿದ್ದೆ: ಸಮಂತಾ ಹೇಳಿಕೆ

Last Updated 8 ಡಿಸೆಂಬರ್ 2021, 6:03 IST
ಅಕ್ಷರ ಗಾತ್ರ

ಮುಂಬೈ: ಟಾಲಿವುಡ್‌ ನಟ ನಾಗ ಚೈತನ್ಯರಿಂದ ಬೇರೆಯಾದ ನಂತರ ಕುಸಿದುಬಿದ್ದು ಸಾಯುತ್ತೇನೆಂದು ಭಾವಿಸಿದ್ದೆ ಎಂಬುದಾಗಿ ನಟಿ ಸಮಂತಾ ತಿಳಿಸಿದ್ದಾರೆ.

ಈ ಕುರಿತು ಖಾಸಗಿ ವಾಹಿನಿಯೊಂದಿಗೆ ಮಾತನಾಡಿರುವ ಅವರು, ‘ಬದುಕಿನಲ್ಲಿ ಬರುತ್ತಿರುವ ಎಲ್ಲಾ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸುತ್ತೇನೆ. ನಾನಿಷ್ಟು ಬಲಶಾಲಿಯಾಗಿದ್ದೇನೆ ಎಂಬುದನ್ನು ತಿಳಿದು ನನಗೇಆಶ್ಚರ್ಯವಾಗಿದೆ‘ ಎಂದು ಹೇಳಿದ್ದಾರೆ.

ನಾಗ ಚೈತನ್ಯರಿಂದ ಬೇರೆಯಾದ ನಂತರ ಕುಸಿದುಬಿದ್ದು ಸಾಯುತ್ತೇನೆಂದು ಭಾವಿಸಿದ್ದೆ. ನನ್ನದು ದುರ್ಬಲ ವ್ಯಕ್ತಿತ್ವವೆಂದು ತಿಳಿದುಕೊಂಡಿದ್ದೆ. ಆದರೆ, ನಾನು ಇಷ್ಟೊಂದು ಬಲಶಾಲಿಯಾಗಿರುವುದರ ಬಗ್ಗೆ ನನಗೆ ಹೆಮ್ಮೆ ಇದೆ‘ ಎಂದು ಸಮಂತಾ ತಿಳಿಸಿದ್ದಾರೆ.

ನಾಗ ಚೈತನ್ಯ ಹಾಗೂ ಸಮಂತಾ ಅವರ ದಾಂಪತ್ಯ ಜೀವನ ವಿಚ್ಚೇದನದಲ್ಲಿ ಅಂತ್ಯಗೊಂಡಿದೆ.2017 ರಲ್ಲಿ ಅವರಿಬ್ಬರು ಮದುವೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT