ಚಿತ್ರದಲ್ಲಿ ಮಾಟ, ಮಂತ್ರದ ಸುತ್ತ ಕಥೆ ಹೆಣೆಯಲಾಗಿದೆ. ಅದಕ್ಕೆ ಹದವಾಗಿ ಹಾಸ್ಯದ ಲೇಪನ ಹಚ್ಚಲಾಗಿದೆ. ಇದೊಂದು ಪಕ್ಕಾ ಹಾರರ್, ಕಾಮಿಡಿ ಕಥೆವಂತೆ. ಶರಣ್ ಅವರದ್ದು ಇದರಲ್ಲಿ ಜೂನಿಯರ್ ಕಲಾವಿದನ ಪಾತ್ರ. ಹಾಗಾಗಿ, ವಿಭಿನ್ನ ಅವತಾರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಆಶಿಕಾ ರಂಗನಾಥ್ ಅವರದ್ದು ಎನ್ಆರ್ಐ ಪಾತ್ರ. ಶರಣ್ ಅವರ ಪುತ್ರಿ ಪುಣ್ಯಾ ಈ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸುತ್ತಿರುವ ಖುಷಿಯಲ್ಲಿದ್ದಾರೆ.