ಧೀರೆನ್ ನಟನೆಯ ಮೊದಲ ಚಿತ್ರ ಇದಾಗಿದ್ದು, ಆ.26 ರಾಜ್ಯದಾದ್ಯಂತ ತೆರೆ ಕಾಣಲಿದೆ. ಧೀರೆನ್ ತಾಯಿ ಪೂರ್ಣಿಮಾ, ಸಹೋದರಿ, ನಟಿ ಧನ್ಯ ರಾಮ್ಕುಮಾರ್, ಬಿಜೆಪಿ ನಾಯಕಿ ಕವಿತಾ ಸಿಂಗ್ ಹಾಗೂ ಚಿತ್ರ ತಂಡದ ಇತರೆ ಸದಸ್ಯರು ನಗರದಲ್ಲಿ ತೆರೆದ ವಾಹನದಲ್ಲಿ ಪ್ರಚಾರ ಕೈಗೊಂಡರು. ವಡಕರಾಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಪುನೀತ್ ರಾಜಕುಮಾರ್ ವೃತ್ತಕ್ಕೆ ಬಂದರು. ಅಲ್ಲಿ ಪುನೀತ್ ರಾಜಕುಮಾರ್ ಪುತ್ಥಳಿಗೆ ಮಾಲಾರ್ಪಣೆ, ಸೇಬಿನ ಹಾರ ಹಾಕಿ, ಪುತ್ಥಳಿಯನ್ನು ತಬ್ಬಿಕೊಂಡು ಅಭಿಮಾನ ತೋರಿದರು. ಈ ವೇಳೆ ಅಭಿಮಾನಿಗಳು ಘೋಷಣೆ ಹಾಕಿದರು.