ಈ ಸರಣಿಯಲ್ಲಿ ಕಾಣುವ ದಾಳಿಗಳು ನೈಜ. ಆದರೆ ಹೆಣೆದಿರುವ ಕಥೆ ಕಾಲ್ಪನಿಕ. ಮುಂಬೈ, ಕಾಶ್ಮೀರದಲ್ಲಿ ನಡೆಯುವ ದಾಳಿಗಳೂ ಈ ಕಥೆಯ ಭಾಗ. ‘ಭಾರತದ ಅತ್ಯಂತ ಅಪಾಯಕಾರಿ ಶತ್ರುವಿಗಾಗಿ ದೇಶದ ಗುಪ್ತದಳ ನಡೆಸುವ ಅತ್ಯಂತ ಸುದೀರ್ಘ ಅವಧಿಯ ಹುಡುಕಾಟದ ಕಥೆ ಇದು’ ಎಂಬುದು ಹಾಟ್ಸ್ಟಾರ್ ನೀಡಿರುವ ವಿವರಣೆ. ಈ ಸರಣಿಯ ಕಥೆ ನೀರಜ್ ಪಾಂಡೆ, ದೀಪಕ್ ಕಿಂಗ್ರಾನಿ ಮತ್ತು ಬೆನಜೀರ್ ಅಲಿ ಫಿದಾ ಅವರದ್ದು. ಇವರು ಭಾರತದ ಗುಪ್ತದಳದ ಕಾರ್ಯವನ್ನು ವರ್ಷಗಳ ಕಾಲ ಅಧ್ಯಯನ ಮಾಡಿದ್ದಾರಂತೆ. ಈ ಸರಣಿಯು ವೀಕ್ಷಕರಿಗೆ ಸಿಕ್ಕಾಪಟ್ಟೆ ಥ್ರಿಲ್ ನೀಡಲಿದೆ ಎಂದೂ ಹಾಟ್ಸ್ಟಾರ್ ಹೇಳಿದೆ. ಸರಣಿಯನ್ನು ಟರ್ಕಿ, ಅಜಬೈಜಾನ್, ಜೋರ್ಡಾನ್ನಲ್ಲಿ ಕೂಡ ಚಿತ್ರೀಕರಿಸಲಾಗಿದೆ.