1988ರಲ್ಲಿ ರಾಷ್ಟ್ರೀಯ ಚಲನಚಿತ್ರಗಳ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿ ಪೃಥ್ವಿರಾಜ್ ಕಪರ್, ರಾಜ್ ಕಪೂರ್, ದಿಲೀಪ್ ಕುಮಾರ್, ದೇವ್ ಆನಂದ್, ಅಮಿತಾಭ್ ಬಚ್ಚನ್, ರಾಜೇಶ್ ಖನ್ನಾ ಮತ್ತು ಧರ್ಮೇಂದ್ರ ಅವರ ಚಿತ್ರಗಳನ್ನು ಅಳವಡಿಸಲಾಗಿತ್ತು. ಅಲ್ಲದೆ ಬಾಲಿವುಡ್ ನಿರ್ದೇಶಕರು ಮತ್ತು ನಟಿಯರ ಬಗ್ಗೆ ವರ್ಣಿರಂಜಿತ ವಿವರಣೆಗಳನ್ನು ನೀಡಲಾಗಿತ್ತು. ಆದರೆ, ಡಾ. ರಾಜ್ ಕುಮಾರ್, ಎ. ನಾಗೇಶ್ವರ ರಾವ್ ಮತ್ತು ಎನ್.ಟಿ. ರಾಮರಾವ್ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ಕಲಾವಿದರ ಬಗ್ಗೆ ಯಾವುದೇ ಚಿತ್ರ ಮತ್ತು ವಿವರಣೆಯಿರಲಿಲ್ಲ. ಜೊತೆಗೆ ಭಾರತೀಯ ಚಿತ್ರರಂಗಕ್ಕೆ ದಕ್ಷಿಣ ಭಾರತದ ಚಿತ್ರಗಳ ಕೊಡುಗೆಗಳ ಬಗ್ಗೆಯೂ ಬಾಲಿವುಡ್ ಚಿತ್ರರಂಗ ಗೌರವ ನೀಡುತ್ತಿರಲಿಲ್ಲ.ಇದರಿಂದ ನನಗೆ ಅವಮಾನ ಆಗಿತ್ತು' ಎಂದು ಬೇಸರ ವ್ಯಕ್ತಪಡಿಸಿದರು.