ಶ್ರೀಂಗೇರಿ ಸುರೇಶ್ ಕಥೆ, ಚಿತ್ರಕಥೆಯ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ‘ಕಥೆಗಾಗಿ ಹೊಸ ನಾಯಕನ ಹುಡುಕಾಟ ನಡೆದಿತ್ತು. ಆಗ ನಿಮ್ಮ ಮಗನನ್ನೇ ನಾಯಕನನ್ನಾಗಿ ಮಾಡುವ ಬಗ್ಗೆ ನಿರ್ಮಾಪಕರಿಗೆ ಹೇಳಿದೆ. ಕಥೆಯ ಪಾತ್ರಕ್ಕೆ ಆತ ಹೊಂದಿಕೊಳ್ಳುತ್ತಿತ್ತು. ಹಾಗಾಗಿ, ಮಿಲಿಂದ್ನನ್ನು ಹೀರೊ ಆಗಿ ಆಯ್ಕೆ ಮಾಡಲಾಯಿತು’ ಎಂದು ಸ್ಪಷ್ಟನೆ ನೀಡಿದರು.