‘ಸೂಸೈಡ್’
ಪ್ರಸಾದ್ಗುರು ಕಥೆ, ಚಿತ್ರಕಥೆ, ನಿರ್ಮಾಣದ ಜೊತೆ ನಿರ್ದೇಶನವನ್ನೂ ಮಾಡಿರುವ ಈ ಚಿತ್ರ ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ಜೀವನದಲ್ಲಿ ಎದುರಾಗುವಂತಹ ಸಮಸ್ಯೆಗಳಿಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ, ಜೀವನವನ್ನು ಧೈರ್ಯದಿಂದ ಎದುರಿಸಿ ಎಂಬ ಸಂದೇಶವುಳ್ಳ ಕಥಾ ಹಂದರ ಈ ಚಿತ್ರದ್ದು. ರವೀಶ್ ಸಂಗೀತ, ಸುರೇಂದ್ರನಾಥ್ ಬೇಗೂರ್ ಛಾಯಾಗ್ರಹಣ, ಕೆ.ರಾಮನಾರಾಯಣ್ ಪಾಂಡು ಸಾಹಿತ್ಯ, ಎಂ.ಎನ್.ಸ್ವಾಮಿ ಸಂಕಲನ, ಕಪಿಲ್ ನೃತ್ಯ ನಿರ್ದೇಶನವಿದೆ.
ಋತಿಕ್, ಕಲ್ಯಾಣಿ, ಶರತ್ ಲೋಹಿತಾಶ್ವ, ಸುಚೇಂದ್ರ ಪ್ರಸಾದ್, ಸಂಗೀತಶೆಟ್ಟಿ, ಭಾಗ್ಯಲಕ್ಷ್ಮಿ ಮುಂತಾದವರ ಅಭಿನಯವಿದೆ.