ಯುವ ಪ್ರತಿಭೆಗಳಾದ ಆಶೀಷ್ ನಾಯಕ್ ಹಾಗೂ ರಕ್ಷಿತಾ ಆನಂದ್ ಸುಶ್ರಾವ್ಯವಾಗಿ ಬಿಹಾಗ್ ಹಾಗೂ ಶುದ್ಧ ಸಾರಂಗ್ ರಾಗಗಳನ್ನು ಪ್ರಸ್ತುತಪಡಿಸಿದರು. ಸಿತಾರ್ ವಾದನದಲ್ಲಿ ಋತ್ವಿಕ್ ರಾವ್ ಮಧುರವಾಗಿ ಯೆಮನ್ ರಾಗವನ್ನು ನುಡಿಸಿದರು. ಭಕ್ತಿ ಸಂಗೀತದಲ್ಲಿ ಪ್ರಶಾಂತ್ ನಾಯಕ್, ಅನುಷ್ಕಾ, ಸ್ವರ್ಣ ಬಾಗೂರು, ಸುಧಾ ಗಡಿಯಾರ, ಸ್ನೇಹಲತಾ, ಬಸಂತ್ ಹಾಡಿದರು. ಇವರೆಲ್ಲರಿಗೂ ಶಶಿಭೂಷಣ ಗುರ್ಜರ್ ತಬಲಾ ಹಾಗೂ ಸಂವಾದಿನಿಯಲ್ಲಿ ಗೌರವ್ ಗಡಿಯಾರ ಸಾಥ್ ನೀಡಿದರು.