‘ಬಿಗ್ಬಾಸ್’ ಕನ್ನಡ ಸೀಸನ್ 12ರಲ್ಲಿ ಅತಿಥಿಯಾಗಿದ್ದು ಹೊರಬಂದಿರುವ ಚೈತ್ರಾ ಕುಂದಾಪುರ, ‘ಗಿಲ್ಲಿಗೆ ಹೆಚ್ಚು ಅಭಿಮಾನಿಗಳು ಇದ್ದಾರೆ ಎಂಬ ಕಾರಣಕ್ಕೆ ಅವರಿಗೆ ಹೆಚ್ಚು ಹತ್ತಿರವಾಗಲು ಸಾಧ್ಯವಿಲ್ಲ. ಅವರ ಕಾಮಿಡಿ ಚೆನ್ನಾಗಿರುತ್ತದೆಯಾದರೂ, ಮತ್ತೊಬ್ಬರಿಗೆ ನೋವಾಗದಂತೆ ಹಾಸ್ಯ ಮಾಡಬೇಕು. ಜೊತೆಗೆ ಟಾಸ್ಕ್ಗಳನ್ನು ಚೆನ್ನಾಗಿ ಆಡಿದರೆ ಅವರು ಗೆಲ್ಲಬಹುದು ಎಂದು ಹೇಳಿದ್ದಾರೆ.