ನಾಲ್ಕೈದು ದಿನಗಳಿಂದ ನಾನು ಸೀರಿಯಲ್ನಿಂದ ಹೊರಗಿದ್ದೇನೆ ಎಂಬ ಸುದ್ಧಿಯಾಗಿತ್ತು. ಒಂದು ಕುಟುಂಬ ಅಂದಮೇಲೆ ಗೊಂದಲಗಳು ಸಾಮಾನ್ಯ. ನನ್ನ ಕುಟುಂಬದಲ್ಲೂ ಗೊಂದಲಗಳಾಗಿದ್ದವು. ಈಗ ಗೊಂದಲಗಳು ನಿವಾರಣೆಯಾಗಿದ್ದು, ಜೊತೆ ಜೊತೆಯಲಿಸೀರಿಯಲ್ ಮುಗಿಯುವವರೆಗೂ ‘ಅನು ಸಿರಿಮನೆ’ ಪಾತ್ರವನ್ನು ನಾನೇ ನಿರ್ವಹಿಸಿಕೊಂಡು ಹೋಗುತ್ತೇನೆ. ಇದಕ್ಕಾಗಿ ನನ್ನ ಗುರುಗಳಾದ ನಿರ್ದೇಶಕ ಆರೂರು ಜಗದೀಶ್ ಮತ್ತು ಜೀ ಕನ್ನಡ, ಜೊತೆ ಜೊತೆಯಲಿ ಧಾರಾವಾಹಿ ಕುಟುಂಬಕ್ಕೆ ಆಭಾರಿಯಾಗಿರುತ್ತೇನೆ ಎಂದು ಇನ್ಸ್ಟಾಗ್ರಾಮ್ನಲ್ಲಿ ವಿಡಿಯೊ ಪೋಸ್ಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.