ಮಲೆನಾಡಿನಲ್ಲಿ ಮುಂಗಾರು ಆರಂಭಗೊಂಡ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಕೃಷಿಗೆ ಕಾರ್ಮಿಕರ ಅಭಾವ ಇರುವುದರಿಂದ ರೈತರು ತಮ್ಮ ಜಮೀನಿನ ಕೆಲಸ ತಾವೇ ಮಾಡುವ ಪರಿಸ್ಥಿತಿ ಇದೆ. ಈ ಸಂದರ್ಭದಲ್ಲಿ ಶಿವಮೊಗ್ಗದ ಕುಂಸಿ ಸಮೀಪದ ಹೊಲವೊಂದರಲ್ಲಿ ಉಳುಮೆ ಮಾಡುವಲ್ಲಿ ನಿರತರಾಗಿರುವ ರೈತ ಮಹಿಳೆ ನೇಗಿಲು ಹಿಡಿದು ರಂಟೆ ಹೊಡೆಯುತ್ತಿರುವ ಪರಿ ಇದು... -ಚಿತ್ರ: ಶಿವಮೊಗ್ಗ ನಾಗರಾಜ್