ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಋಣದ ಬಾಧೆಯಿಂದ ಮುಕ್ತರಾಗಲು ಹೆಚ್ಚಿನ ಗಮನ ನೀಡಿ
Published 8 ಮಾರ್ಚ್ 2024, 0:28 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸರ್ಕಾರಿ ನೌಕರರಿಗೆ ಏಳಿಗೆ ಪ್ರಾಪ್ತಿಯಾಗುವುದು. ಅನಿರೀಕ್ಷಿತ ವರ್ಗಾ ವಣೆಯಿಂದ ಅನುಕೂಲ ಪಡೆದುಕೊಳ್ಳುವಿರಿ. ಬಡಗಿ ಕೆಲಸ ಮಾಡುವವರಿಗೆ ಸುಯೋಗವಿದೆ. ಮಾನಸಿಕ ಪೀಡೆಗಳಿಗೆ ಒಳಗಾಗದಂತೆ ಕಾಳಜಿವಹಿಸಿ.
ವೃಷಭ
ಅತಿ ಕೆಲಸದ ಒತ್ತಡದ ಹಿನ್ನೆಲೆಯಲ್ಲಿ ನೆಮ್ಮದಿಯನ್ನು ಸಂಪಾದಿಸಬೇಕಾಗುತ್ತದೆ. ಆಹಾರದಿಂದ ಆರೋಗ್ಯ ಹದಗೆಡುವ ಲಕ್ಷಣಗಳಿವೆ. ಹಾಗಾಗಿ ಜಾಗ್ರತರಾಗಿರಿ. ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಜಯವಾಗುವುದು.
ಮಿಥುನ
ಸಂದಿಗ್ಧ ಪರಿಸ್ಥಿತಿಯನ್ನು ನಿಧಾನವಾಗಿ ಎಚ್ಚರಿಕೆಯಿಂದ ಹಾಗೂ ಮಾರ್ಗದರ್ಶಕರ ಮಾತಿನಂತೆ ಬಗೆಹರಿಸಿಕೊಳ್ಳುವುದು ಉತ್ತಮ. ಋಣದ ಬಾಧೆಯಿಂದ ಮುಕ್ತರಾಗಲು ಹೆಚ್ಚಿನ ಗಮನನೀಡಿ.
ಕರ್ಕಾಟಕ
ಗೃಹ ನಿರ್ಮಾಣದಂಥ ವಿಚಾರವನ್ನು ಅವಲೋಕಿಸಲು ಇದು ಒಳ್ಳೆಯ ದಿನ. ರಸ ಪದಾರ್ಥಗಳ ವ್ಯಾಪಾರಸ್ಥರಿಗೆ ಲಾಭ-ನಷ್ಟದ ಎರಡೂ ಪರಿಚಯವಾಗಲಿದೆ. ಕುಟುಂಬದಲ್ಲಿ ಸೌಖ್ಯ ನೆಮ್ಮದಿ ಇರುವುದು.
ಸಿಂಹ
ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸಂತಸದ ಸುದ್ದಿಯನ್ನು ಕೇಳಲಿದ್ದೀರಿ. ಮನೆಯಲ್ಲಿ ಸಂತಸದ ವಾತವರಣ ಸೃಷ್ಟಿಯಾಗಲಿದೆ. ಕಾನೂನು ವಿಷಯದ ಅಧ್ಯಯನದಲ್ಲಿ ತೊಡಗಿರುವವರಿಗೆ ಶುಭವಾಗುವುದು.
ಕನ್ಯಾ
ಕಾರ್ಮಿಕರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ತೀರ್ಮಾನವಿರಲಿ. ಬಂಡವಾಳ ಹೂಡಿಕೆ ಹಾಗೂ ಷೇರು ಖರೀದಿಯ ವಿಚಾರಗಳತ್ತ ಆಸಕ್ತಿಯು ಹೆಚ್ಚಲಿದೆ. ಪುತ್ರರ ಮುಖಾಂತರ ಹೆಚ್ಚುವರಿ ಆದಾಯ ಸಿಗಲಿದೆ.
ತುಲಾ
ವಹಿಸಿರುವ ಕೆಲಸಗಳನ್ನು ನಕಾರಾತ್ಮಕ ಧೋರಣೆಯಿಂದ ನೋಡದೆ ಸಕಾರಾತ್ಮಕವಾಗಿ ಸ್ವೀಕರಿಸಿ. ದಲ್ಲಾಳಿಗಳಿಗೆ ಮತ್ತು ವೃತ್ತಿ ವ್ಯಾಪಾರಗಳಲ್ಲಿ ಮುನ್ನುಗ್ಗಿ ಕೆಲಸ ಮಾಡುವವರಿಗೆ ಕನಸುಗಳು ನನಸಾಗಲಿದೆ.
ವೃಶ್ಚಿಕ
ಸರಕು ಸಾಗಾಣೆದಾರರಿಗೆ ಹಾಗೂ ಭಾರಿ ವಾಹನ ತಯಾರಕರಿಗೆ ಲಾಭ ಇರುವುದು. ದೈನಂದಿನ ಬದುಕಿನ ವಿಳಂಬ ನೀತಿಯಿಂದ ಬೇಸರವಾಗಲಿದೆ. ಆರಕ್ಷಕ ಅಧಿಕಾರಿಗಳಿಗೆ ಕೆಲಸದಲ್ಲಿ ಒತ್ತಡ ನಿವಾರಣೆಯಾಗಲಿದೆ.
ಧನು
ಲೆಕ್ಕ ಪರಿಶೋಧಕರಿಗೆ ಹಾಗೂ ನ್ಯಾಯವಾದಿಗಳಿಗೆ ಉತ್ತಮ ಅವಕಾಶ ಗಳು ಬರುವುವು. ಮರದ ವ್ಯಾಪಾರಿಗಳಿಗೆ ಅವಕಾಶಗಳೊಂದಿಗೆ ಉತ್ತಮ ಲಾಭ ಇರುವುದು. ಪೂಜಾ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಮನಸ್ಸಾಗಲಿದೆ.
ಮಕರ
ವಿಮಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ತೋರಿದ್ದಕ್ಕೆ ನಿಮಗೆ ಸಂಸ್ಥೆಯವರಿಂದ ಪುರಸ್ಕಾರಗಳು ದೊರೆಯಲಿದೆ. ವೃತ್ತಿ ಜೀವನಕ್ಕೆ ಸಹಾಯ ಮಾಡಬಲ್ಲಂತಹ ವ್ಯಕ್ತಿಗಳೊಂದಿಗೆ ಸ್ನೇಹ ಸಂಬಂಧ ಪ್ರಾರಂಭವಾಗುತ್ತದೆ.
ಕುಂಭ
ವ್ಯಾಪಾರ ವೃತ್ತಿಯಲ್ಲಿ ಆರೋಗ್ಯಕರ ಪೈಪೋಟಿ ಕಂಡುಬಂದರೂ ಸಮಾಧಾನಕರ ಲಾಭ ಇರುವುದು. ವಿದೇಶೀಯ ವಸ್ತುಗಳ ಅಥವಾ ಭೋಗದ ವಸ್ತುಗಳ ಖರೀದಿಗಾಗಿ ಧನ ವ್ಯಯ ಮಾಡುವಿರಿ.
ಮೀನ
ಇತರರಿಗೆ ಅನುಮಾನಕ್ಕೆ ಎಡೆಮಾಡಿಕೊಡುವಂಥ ವಿಷಯಗಳು ನಿಮ್ಮಿಂದ ನಡೆಯಲಿದೆ. ರಾಜಕೀಯ ವ್ಯಕ್ತಿಗಳಿಗೆ ಸಂಘದಲ್ಲಿ ಸ್ಥಾನಮಾನದ ಅರಿವು ನಿಮಗಾಗುವುದು. ವ್ಯಾಪಾರಿಗಳಿಗೆ ಸ್ವಲ್ಪ ಮಟ್ಟಿನ ಬಿಡುವು ಸಿಗಲಿದೆ.