ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ವಿಪರೀತ ಶ್ರಮ ಪಡಬೇಕಾಗಿ ಬರುವುದು
Published 29 ಮೇ 2024, 0:32 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮೇಷ: ವಿನಾಶಕಾರಿ ಪ್ರವೃತ್ತಿಗಳನ್ನು ಪ್ರಯೋಗಿಸುವ ಯೋಚನೆ ಮಾಡದಿರಿ.  ಸಂಸಾರ ನಿರ್ವಹಣೆಯ ವಿಷಯದಲ್ಲಿ ಖಚಿತ ನಿರ್ಧಾರ ತೆಗೆದುಕೊಳ್ಳಬೇಕಾಗುವುದು. ವ್ಯವಹಾರದಲ್ಲಿ ಚಾಣಾಕ್ಷತೆ ಇರಲಿ.
ವೃಷಭ
ವೃಷಭ: ದೂರದ ಸಂಬಂಧಿಗಳು ವೈಯಕ್ತಿಕ ವಿಷಯದಲ್ಲಿ ಮೂಗು ತೂರಿಸುವುದು ಮನಸ್ತಾಪಕ್ಕೆ ಕಾರಣವಾಗುತ್ತದೆ. ಸ್ವಯಂ ಸಾಮರ್ಥ್ಯದಿಂದ ಅವಕಾಶ ಪಡೆದುಕೊಳ್ಳುವಂತಾಗಲಿದೆ. ವೃತ್ತಿಯು ಉತ್ತಮ ಸ್ಥಿತಿಯಲ್ಲಿರುವುದು.
ಮಿಥುನ
ಮಿಥುನ: ಕಾರ್ಯರಂಗದಲ್ಲಿ ಶ್ರದ್ಧೆಗೆ ಮತ್ತು  ಶ್ರಮಕ್ಕೆ ತಕ್ಕ ಫಲವನ್ನು ನಿರೀಕ್ಷಿಸಬಹುದು. ನಿಜ ಮಾರ್ಗದಿಂದ ಕಾರ್ಯ ಪ್ರವೃತ್ತರಾದಲ್ಲಿ  ಅಭಿವೃದ್ಧಿ ಅನುಭವಕ್ಕೆ ಬರಲಿದೆ. ವ್ಯವಹಾರದಲ್ಲಿ ಉತ್ತಮ ಲಾಭವಿರುವುದು.
ಕರ್ಕಾಟಕ
ಕರ್ಕಾಟಕ: ಪ್ರತಿ ವಿಷಯದಲ್ಲೂ ಮುಂದಾಲೋಚನೆ ಹಾಗೂ ವಿವೇಚನೆಯಿಂದ ನಡೆದುಕೊಂಡಲ್ಲಿ ಏಳಿಗೆ ಸಾಧಿಸಬಹುದು. ವಿಪರೀತ ಶ್ರಮ ಪಡಬೇಕಾಗಿ ಬರುವುದು. ವ್ಯಾಪಾರದಲ್ಲಿ ಲಾಭವಿದೆ.
ಸಿಂಹ
ಸಿಂಹ: ಸ್ವಂತ ಪ್ರಯತ್ನದಿಂದ ಆಸ್ತಿ ಸಂಪಾದನೆ ಮಾಡುವಿರಿ. ಮಿತ್ರರ ಸಹಕಾರದಿಂದ ಮತ್ತು ಅವರ ಚಾಣಾಕ್ಷ ವರ್ತನೆಯಿಂದ ವ್ಯಾಪಾರದಲ್ಲಿ ಪ್ರಗತಿ ಇರುವುದು. ನವಗ್ರಹ ಸ್ತೋತ್ರವನ್ನು ಪಠಿಸುವುದರಿಂದ ಶುಭವಾಗುತ್ತದೆ.
ಕನ್ಯಾ
ಕನ್ಯಾ: ರಾಜಕೀಯ ಪ್ರತಿಸ್ಪರ್ಧಿಗಳು ಗಲಾಟೆಯನ್ನು ಉಂಟುಮಾಡಬಹುದು ಅಥವಾ ಈ ದಿನ  ಹಿಂದಿಕ್ಕುವ ಪ್ರಯತ್ನವನ್ನು ಮಾಡಲಿದ್ದಾರೆ. ಚಿನ್ನ, ಬೆಳ್ಳಿ ವ್ಯಾಪಾರಿಗಳು ಈ ದಿನ ಹೆಚ್ಚಿನ ಅಭಿವೃದ್ಧಿ ಹೊಂದುವರು.
ತುಲಾ
ತುಲಾ: ಮುಕ್ತ ಮಾತುಕತೆ ಮೂಲಕ ಕಾರ್ಮಿಕರ ಸಮಸ್ಯೆ ಬಗೆಹರಿಸಿಕೊಂಡು ಇರುವ ಅವಕಾಶಗಳನ್ನು ಬಳಸಿಕೊಂಡು ಮುಂದುವರಿಸುವಿರಿ.  ಅನ್ವೇಷಣೆಯ ಸ್ವಭಾವವು  ವೃತ್ತಿಯ ಬದುಕಿನಲ್ಲಿ ಹೊಸ ತಿರುವನ್ನು ತರಲಿದೆ.
ವೃಶ್ಚಿಕ
ವೃಶ್ಚಿಕ: ಪ್ರಕೃತಿಯ ಸಣ್ಣ ಸಣ್ಣ ಬದಲಾವಣೆಗಳನ್ನು ಗಮನಿಸಿ ಬರೆದಂಥ ಕಾವ್ಯವು ಜನಮಾನಸವನ್ನು ಗೆಲ್ಲಲಿದೆ. ವೃತ್ತಿ ವಿಷಯಗಳಲ್ಲಿ ಬಯಸದೇ ಅವಕಾಶ ಎದುರಾಗುತ್ತದೆ. ಬಂದಂಥ ಅವಕಾಶಗಳನ್ನು ತಪ್ಪಿಸಿಕೊಳ್ಳಬೇಡಿ.
ಧನು
ಧನು: ಇಷ್ಟು ದಿನದವರೆಗೂ ಹುಡುಕುತ್ತಿದ್ದ   ಇಷ್ಟದ ವಸ್ತು ಉಡುಗೊರೆಯ ರೂಪದಲ್ಲಿ  ಕೈಸೇರುತ್ತದೆ. ಮೇಲಧಿಕಾರಿಗಳು ಹಾಗೂ ಹಿರಿಯರು ಇಂದಿನ ನಿಮ್ಮ ಕೆಲಸಗಳಲ್ಲಿ ಸಹಕಾರ ನೀಡುತ್ತಾರೆ.
ಮಕರ
ಮಕರ:ವೃತ್ತಿರಂಗದಲ್ಲಿ ಬೆಳವಣಿಗೆ ಕಂಡುಬಂದು ಮಹತ್ವದ ಕೆಲಸಗಳು ಕಾರ್ಯರೂಪ ಪಡೆಯುವವು. ಹಾಗೆಯೇ ಕೆಟ್ಟ ಜನರ ದೃಷ್ಟಿ ದೋಷಕ್ಕೂ ಒಳಗಾಗುವಿರಿ. ಕಚೇರಿ ಕೆಲಸಗಳು ಸುಗಮವಾಗಿ ನೆರವೇರಬಹುದು.
ಕುಂಭ
ಕುಂಭ: ಮನಸ್ಸಿಗೆ ಒಪ್ಪಿಗೆ ಇಲ್ಲದಂಥ ಕೆಲಸಗಳನ್ನು ಮಾಡುವ ಸಾಹಸಕ್ಕೆ ಕೈಹಾಕಲು ಹೋಗದಿರಿ. ದಿನದ ಮಧ್ಯಾಹ್ನದ ಸಮಯದಲ್ಲಿ ಸಂತಸ ಭರಿತ  ಸುದ್ದಿ ತಲುಪುತ್ತದೆ. ಭೂ ವ್ಯವಹಾರಗಳು ಲಾಭದಾಯಕವೆನಿಸುವುದು.
ಮೀನ
ಮೀನ: ಮಗನ ಕೆಲಸಗಳಿಗಾಗಿ ಅಲೆದಾಟ ಹೆಚ್ಚಿ ದಣಿವಾದರೂ ಕೆಲಸ ಕೈಗೂಡಿದ್ದಕ್ಕೆ ಮನಸ್ಸಿಗೆ ಸಮಾಧಾನ ಸಿಗುವುದು. ನಿವೇಶನ ಅಥವಾ ಜಮೀನು ಖರೀದಿಸುವ ಯೋಚನೆಗಳು ಬರಲಿವೆ. ಆಪ್ತರೊಬ್ಬರು ನೆರವಿಗೆ ನಿಲ್ಲಲಿದ್ದಾರೆ.