ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಕಾಡಲಿದೆ ಅನಾರೋಗ್ಯ, ಎಚ್ಚರವಹಿಸಿ
Published 15 ಫೆಬ್ರುವರಿ 2026, 22:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ದೇವತಾನುಗ್ರಹದ ಜತೆಯಲ್ಲಿ ಋಣಭಾದೆಗೆ ಅಂತ್ಯ ಕಾಣಿಸುವ ಕಾಲ ಒದಗಿಬರುವುದು. ಕೊಟ್ಟ ಮಾತಿನಂತೆ ಕೆಲಸ ನೆರವೇರಿಸಿ ಕೊಡುವುದರಿಂದ ಹೆಸರು ಗಳಿಸಬಹುದು. ವ್ಯವಹಾರಗಳಲ್ಲಿ ಹಿಡಿತ ಸಾಧಿಸುವಿರಿ.
ವೃಷಭ
ಋಣಾತ್ಮಕ ಚಿಂತನೆಯಿಂದ ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸುವ ನಿಮ್ಮ ಅಭ್ಯಾಸ ವ್ಯತ್ಯಾಸ ಆಗುವುದು. ಬೇಸರ ಕಳೆಯಲು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ.
ಮಿಥುನ
ರೈತರು ಬೆಳೆಗಳ ಅಭಿವೃದ್ಧಿ, ರಕ್ಷಣೆಯ ಬಗ್ಗೆ ಗಮನಹರಿಸಿ. ನಿಮ್ಮ ಆಹಾರ ಪದ್ಧತಿಯು ಅನಾರೋಗ್ಯಕ್ಕೆ ಮೂಲ ಕಾರಣವಾಗುತ್ತದೆ. ವಿದ್ಯಾರ್ಥಿಗಳಿಗೆ ಅಗಾಧವಾದ ಪ್ರಯತ್ನ ಬೇಕಾಗುವುದು.
ಕರ್ಕಾಟಕ
ಸಿನಿಮಾ ರಂಗದವರಿಗೆ ಮತ್ತು ಜವಳಿ ವ್ಯಾಪಾರಿಗಳಿಗೆ ಹೂಡಿಕೆ ಮಾಡುವ ಯೋಚನೆ ಉತ್ತಮವಲ್ಲ. ಸ್ತ್ರೀಯರಿಗೆಗೌರವ, ಮನ್ನಣೆ ಸಿಗಲಿದೆ. ಕೊಡು-ಕೊಳ್ಳುವಿಕೆಗಳಿಂದ ಅಧಿಕ ಲಾಭ.
ಸಿಂಹ
ಪ್ರತಿ ವರ್ಷ ಮಾಡಿಕೊಂಡುಬಂದ ಧಾರ್ಮಿಕ ಕೆಲಸವನ್ನು ಮಾಡುವ ಬಗ್ಗೆ ತೀರ್ಮಾನಿಸಿ. ಸಹಾಯ ಮಾಡುವಂತಹಾ ನಿಮ್ಮ ನಡವಳಿಕೆಯು ಅಭಿವೃದ್ಧಿಗೆ ರಕ್ಷೆಯಾಗಿ ಇರುತ್ತದೆ.
ಕನ್ಯಾ
ಷೇರು ಮಾರುಕಟ್ಟೆಯಲ್ಲಿನ ಬದಲಾವಣೆಗಳನ್ನು ಗಮನಿಸಿ ತೆಗೆದುಕೊಂಡ ತೀರ್ಮಾನ ಸರಿಯಾದದ್ದಾಗಲಿದೆ. ನಿಮ್ಮ ಕೆಲಸದಲ್ಲಿ ಸಮಯ ಪಾಲನೆ ಮಾಡುವುದನ್ನು ಜೀವನದಲ್ಲಿ ರೂಢಿಸಿಕೊಳ್ಳಿ.
ತುಲಾ
ಸಾಮರ್ಥ್ಯಕ್ಕೆ ಮತ್ತು ಕೆಲಸಕ್ಕೆ ಗ್ರಹಣ ಆವರಿಸಿ ಯೋಜನಾಬದ್ಧರಾಗಿ ಕೆಲಸ ನಡೆಯದೇ ಇರಬಹುದು. ಒಮ್ಮೊಮ್ಮೆ ಸಾಮಾಜಿಕ ರಂಗದಲ್ಲಿ ಮುಜುಗರದ ಸನ್ನಿವೇಶಗಳು ಸೃಷ್ಟಿಯಾಗಬಹುದು.
ವೃಶ್ಚಿಕ
ಬಾಲ್ಯ ಸ್ನೇಹಿತರೊಂದಿಗೆ ಸಮಯ ಕಳೆಯುವ ಸಂದರ್ಭ ಬರಬಹುದು. ಮಕ್ಕಳಿಗೆ ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿಕೊಡಿ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಮೇಲುಗೈ ಸಾಧಿಸಬಹುದು.
ಧನು
ಹಿಂದೆ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡುತ್ತಿದ್ದರೂ ತಪ್ಪುಗಳು ಪುನರಾವರ್ತನೆಯಾಗುತ್ತವೆ. ಹಣಕಾಸಿನ ವಿಷಯದಲ್ಲಿ ಯಾವುದೇ ರೀತಿಯ ತೊಂದರೆ ಇರದು. ವ್ಯವಹಾರದಲ್ಲಿ ಬಂಡವಾಳ ಹೂಡುವಂತೆ ಒತ್ತಾಯ ಹೆಚ್ಚಲಿದೆ.
ಮಕರ
ಫ್ಯಾಷನ್ ಡಿಸೈನರ್ಗಳು ಅವಕಾಶಗಳನ್ನು ಹಾಗೂ ಉತ್ತಮ ಧನಲಾಭ ಪಡೆಯುವರು. ಪುಣ್ಯ ಸಂಪಾದನೆ ಮಾಡುವ ಕಾರಣಕ್ಕಾಗಿ ದಾನ-ಧರ್ಮ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಿರಿ.
ಕುಂಭ
ಬಿಟ್ಟು ಸ್ವಲ್ಪ ಕಾಲದ ನಂತರ ಮಾಡುತ್ತೇನೆ ಎಂದು ನೀವು ಅಂದುಕೊಳ್ಳುವ ವಿಷಯಗಳು ಬಿಟ್ಟ ಹಂತದಲ್ಲೇ ನಿಂತು ಹೋಗುವ ಸಾಧ್ಯತೆ ಇರುವುದರಿಂದ ಕೂಡಲೇ ಪೂರೈಸುವ ಯೋಚನೆ ಮಾಡಿ.
ಮೀನ
ವಿಳಂಬವಾಗಿದ್ದ ಕಾರ್ಯ ಕಲಾಪಗಳು ಚುರುಕುಗೊಂಡು ಅನುಕೂಲ ಒದಗಿ ಬರಲಿದೆ. ಸಹೋದ್ಯೋಗಿಗಳೊಂದಿಗಿನ ಭಿನ್ನಾಭಿಪ್ರಾಯ ನಿವಾರಣೆಯಾಗುವಂತೆ ವರ್ತಿಸಿ. ಉದ್ಯೋಗಕ್ಕಾಗಿ ಅಲೆದಾಟ ತಪ್ಪದು.