ಭಾನುವಾರ, 1 ಫೆಬ್ರುವರಿ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಮಾನಸಿಕ ಒತ್ತಡ ಕಡಿಮೆಯಾಗಲು ಜನರ ಜತೆ ಬೆರೆಯಿರಿ
Published 1 ಫೆಬ್ರುವರಿ 2026, 22:03 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವೃತ್ತಿರಂಗದಲ್ಲಿ ಅನ್ಯರ ಮಾತಿಗೆ ಕಿವಿಗೊಡದೆ ನಿಮ್ಮಚ್ಛೆಯಂತೆ ನಡೆಯಿರಿ. ದೂರದ ಪ್ರಯಾಣ, ಹವಾಮಾನ ಬದಲಾವಣೆಯಿಂದ ಅನಾರೋಗ್ಯ ಉಂಟಾಗಬಹುದು. ಜಾಗ್ರತೆ ವಹಿಸಿ.
ವೃಷಭ
ನೆಂಟರಿಷ್ಟರ ಸಲಹೆ ಸೂಚನೆಗಳನ್ನು ಪಾಲಿಸಿ. ದೈವಬಲ ಒದಗಿ ಬಂದು ಅಭಿವೃದ್ಧಿಗೊಳ್ಳುವಿರಿ. ಮಾನಸಿಕ ಒತ್ತಡ ಕಡಿಮೆಯಾಗಲು ಜನರ ಜತೆ ಬೆರೆಯಿರಿ.
ಮಿಥುನ
ರೇಷ್ಮೆ ಬೆಳೆಗಾರರಿಗೆ ಆದಾಯದಿಂದ ಸಂತಸ. ಸಾಕುಪ್ರಾಣಿಗಳ ಜತೆ ಸಮಯ ಕಳೆಯುವಿರಿ. ಸಮಯಕ್ಕೆ ಸರಿಯಾಗಿ ವರ್ತಿಸಿ, ಬುದ್ಧಿವಂತಿಕೆಯನ್ನು ತೋರುವಿರಿ.
ಕರ್ಕಾಟಕ
ಅತಿಯಾದ ಆತ್ಮವಿಶ್ವಾಸದಿಂದ ತಪ್ಪು ನಿರ್ಧಾರಗಳನ್ನು ಕೈಗೊಳ್ಳುವಿರಿ. ಮನೆಯಲ್ಲಿ ಇರುವವರೆಲ್ಲರನ್ನು ಕೇಳದೆ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.
ಸಿಂಹ
ನಿರ್ಧಾರಗಳನ್ನು ಎಲ್ಲರ ಮುಂದೆ ತಿಳಿಸುವ ಮುನ್ನಸಂಪೂರ್ಣವಾಗಿ ಯೋಚನೆ ಮಾಡಿ. ಪತ್ನಿಯ ಅವಶ್ಯಕತೆಗಳನ್ನು ಪೂರೈಸುವಲ್ಲಿ ಜಿಪುಣತನ ತೋರದಿರಿ. ಕೌಟುಂಬಿಕ ವಿವಾದಗಳು ಇತ್ಯರ್ಥಗೊಳ್ಳಲಿವೆ.
ಕನ್ಯಾ
ಸಂಸ್ಥೆಯ ಹೊಸ ಆರ್ಥಿಕ ನೀತಿಯಿಂದ ಹಣಕಾಸಿನ ವಿಷಯದಲ್ಲಿ ಲಾಭ ಇರಲಿದೆ. ತರಕಾರಿ ಬೆಳೆಗಾರರಿಗೆ ಮುಂಜಾಗ್ರತಾ ಕ್ರಮಗಳು ಇಲ್ಲದಿದ್ದಲ್ಲಿ ಅಧಿಕ ಹಾನಿ ಸಂಭವಿಸಬಹುದು.
ತುಲಾ
ಮಗಳ ಮಾತಿನಂತೆ ನಿತ್ಯ ಕೆಲಸದಲ್ಲಿ ಮಾಡಿಕೊಂಡ ಬದಲಾವಣೆಯಿಂದ ಆರೋಗ್ಯ ಸರಿಯಾಗುತ್ತದೆ. ಅಕ್ಕಪಕ್ಕದವರ ಕಷ್ಟ ಸುಖವನ್ನು ವಿಚಾರಿಸುವುದರಿಂದ ಪ್ರಯೋಜನ ದೊರೆಯುವುದು.
ವೃಶ್ಚಿಕ
ಸಣ್ಣ ವಯಸ್ಸಿನ ಮಕ್ಕಳ ಆಟೋಟಗಳನ್ನು ನೋಡಿ ಕಳೆದು ಹೋದ ದಿನಗಳನ್ನು ನೆನಪಿಸಿಕೊಳ್ಳುವಿರಿ. ನಿಮ್ಮ ಯೋಚನೆಯಷ್ಟು ಖರ್ಚು ಸಂಭವಿಸದ ಕಾರಣ ಹಣದ ಕೊರತೆ ಕಂಡು ಬರುವುದಿಲ್ಲ.
ಧನು
ಅನಗತ್ಯ ವಸ್ತುಗಳ ಮೇಲಿನ ದೊಡ್ಡ ಮೊತ್ತದ ಖರ್ಚಿನಿಂದ ಎಲ್ಲರ ಕೋಪಕ್ಕೆ ಗುರಿಯಾಗುವಿರಿ. ಉದ್ಯೋಗದಲ್ಲಿ ಒತ್ತಡ ಹೆಚ್ಚಿರುವ ಕಾರಣ ಮಾನಸಿಕವಾಗಿ ಈಗಲೇ ತಯಾರಾಗಿರುವುದು ಸೂಕ್ತ.
ಮಕರ
ಕೋಪವನ್ನು ಹೊಂದಿದ ಸಮಯದಲ್ಲಿ ಇತರರೊಂದಿಗೆ ಮಾತನಾಡು ವುದಾಗಲಿ ಅಥವಾ ಕೆಲಸ ಮಾಡುವುದನ್ನು ಮಾಡಬೇಡಿ. ದುಡುಕಿನ ಮಾತುಗಳು ಇತರರ ಮನಸ್ಸನ್ನು ನೋಯಿಸದಿರಲಿ.
ಕುಂಭ
ಅನಗತ್ಯ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕುವುದರಿಂದ ಆರ್ಥಿಕ ಸಂಕಷ್ಟ ಅರ್ಧದಷ್ಟು ಕಳೆಯುವುದು. ಯುವ ಬರಹಗಾರರಿಗೆ ಹುರುಪು ಹೆಚ್ಚಿಸುವಂಥ ಜನರು ಸುತ್ತಲೂ ಸಿಗುತ್ತಾರೆ.
ಮೀನ
ಹೊಸಾ ವಿವಾಹ ಪ್ರಸ್ತಾಪಗಳು ಆಕರ್ಷಕವಾಗಿ ಕಂಡರೂ ಪರಾಮರ್ಶಿಸದೇ ಒಪ್ಪಿಕೊಳ್ಳಬೇಡಿ. ತಪ್ಪಿದ್ದಲ್ಲಿ ಅದನ್ನು ಒಪ್ಪಿಕೊಳ್ಳುವ ಮನೋಭಾವನ್ನು ಬೆಳೆಸಿಕೊಳ್ಳಿ. ಷೇರು ಖರೀದಿಸುವಾಗ ಎಚ್ಚರವಹಿಸಿ.
ADVERTISEMENT
ADVERTISEMENT