ದಿನ ಭವಿಷ್ಯ: ಈ ರಾಶಿಯವರ ರಾಜಕೀಯ ಭವಿಷ್ಯಕ್ಕೆ ಮೋಡ ಕವಿದಂತಾಗುತ್ತದೆ
Published 3 ಮಾರ್ಚ್ 2026, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮನಸ್ಸು ಚಂಚಲವಾಗಿರುವುದು. ದೇವಬಲವಿರುವ ಕಾರಣದಿಂದ ಕೈಹಾಕಿದ ಕೆಲಸಗಳು ಜಯದ ಜೊತೆಯಲ್ಲಿ ಪೂರ್ಣಗೊಳ್ಳಲಿವೆ. ನಾಯಕತ್ವದ ಗುಣಗಳನ್ನು ಪ್ರದರ್ಶಿಸಲು ಉತ್ತಮ ವೇದಿಕೆ ಸಿಗಲಿದೆ.
ವೃಷಭ
ಕೈಮಗ್ಗದ ವಸ್ತುಗಳ ವ್ಯಾಪಾರಿಗಳಿಗೆ ವಿದೇಶದಿಂದ ಮನ್ನಣೆ ಸಿಗುತ್ತದೆ. ನೂತನ ಅಧಿಕಾರಿಗಳ ಆಗಮನದಿಂದ ಕಚೇರಿಯಲ್ಲಿ ಕೆಲಸ ಗಳು ತೋರಿಬರಲಿವೆ. ವಿನ್ಯಾಸದ ಉಡುಪುಗಳ ರಫ್ತಿನಿಂದ ಲಾಭ ಗಳಿಸುವಿರಿ.
ಮಿಥುನ
ವ್ಯವಹಾರದ ವಿಷಯಗಳಲ್ಲಿ ಸಂಬಂಧಗಳಿಗೆ ಆಸ್ಪದವಿರದಂತೆ ನೋಡಿಕೊಳ್ಳಿ. ವಿದೇಶದಿಂದ ಸ್ನೇಹಿತರ ಆಗಮನ ಸಂತೋಷ ತರಲಿದೆ. ರಾಜಕೀಯ ಭವಿಷ್ಯಕ್ಕೆ ಮೋಡ ಕವಿದಂತೆ ಆಗುತ್ತದೆ.
ಕರ್ಕಾಟಕ
ಆರ್ಥಿಕ ಪರಿಸ್ಥಿತಿಯಿಂದ ಮುಂದುವರಿಯಲು ಮತ್ತು ಕಾರ್ಯಕ್ಷೇತ್ರ ವನ್ನು ವಿಸ್ತರಿಸಲು ಪೂರಕವಾಗುವುದು. ಮಹತ್ವದ ಮಾತುಕತೆ ನಡೆಸುವಾಗ ಧೈರ್ಯವಾಗಿ ಮಾತನಾಡಿ.
ಸಿಂಹ
ಹಳೆಯ ಕಹಿ ಘಟನೆಗಳಿಂದ ಕಲಿತ ಪಾಠ, ಬಡತನದಿಂದ ಕಲಿತ ಪಾಠವು ಉತ್ತಮ ರೀತಿಯಲ್ಲಿ ಉಪಯೋಗಕ್ಕೆ ಬರಲಿದೆ. ಕರಕುಶಲ ವಸ್ತುಗಳ ತಯಾರಿಕಾ ವೃತ್ತಿಗಳಿಂದ ವರಮಾನ ಸಿಗಲಿದೆ.
ಕನ್ಯಾ
ಹೂವಿನ ವ್ಯಾಪಾರಿಗಳಿಗೆ ಉತ್ತಮ ವ್ಯಾಪಾರ ಹಾಗೂ ಲಾಭವಿರುವುದರಿಂದ ಜೀವನ ನಡೆಸುವುದು ಕಷ್ಟವೆನಿಸದು. ಸಾಮಾಜಿಕ ಬದುಕಿನಲ್ಲಿ ಉತ್ತಮ ಸಾಧನೆ ಮಾಡಲು ಸೂಕ್ತ ಅವಕಾಶ ಸಿಗಲಿದೆ.
ತುಲಾ
ಆಫೀಸಿನಲ್ಲಿ ನಡೆಯುವ ವಿಚಾರಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಪರವಾಗಿಯೇ ಇರುತ್ತಾರೆ. ಆರೋಗ್ಯವು ಆಹಾರದಲ್ಲಿ ಪಥ್ಯ ಮಾಡುವುದರ ಪ್ರಭಾವದಿಂದ ಸುಧಾರಣೆಗೆ ಬರುತ್ತದೆ.
ವೃಶ್ಚಿಕ
ಯಂತ್ರೋಪಕರಣಗಳ ಮಾರಾಟದಿಂದ ಮತ್ತು ಪಶು ಸಂಗೋಪನೆ ಯಿಂದ ಲಾಭ ಇರುವುದು. ಮಕ್ಕಳೊಂದಿಗೆ ವ್ಯವಹಾರದ ವಿಚಾರಗಳ ಬಗ್ಗೆ ಸುದೀರ್ಘ ಮಾತುಕತೆ ನಡೆಸುವಿರಿ. ಕೈಗೂಂಡ ಕಾರ್ಯ ಸಫಲವಾಗಲಿದೆ.
ಧನು
ವ್ಯಾಪಾರ ವ್ಯವಹಾರಗಳಲ್ಲಿ ತುಸು ಚೇತರಿಕೆ ಕಂಡುಬಂದು ಮುಂದು ವರಿಯಲು ಸಹಾಯವಾಗುತ್ತದೆ. ನವದಂಪತಿಗೆ ಶುಭಪ್ರದವಾದ ಸಂತಾನ ಭಾಗ್ಯ ದೊರೆತು ಸಂತೋಷವಾಗುವುದು.
ಮಕರ
ವಾಣಿಜ್ಯ ಸಂಸ್ಥೆಯೊಂದರಲ್ಲಿ ಕಾಂಟ್ರಾಕ್ಟ್ ಪಡೆಯುವ ಪ್ರಯತ್ನ ಫಲಕಾರಿ ಆಗಲಿದೆ. ಆದರೆ ಉದ್ಯೋಗಕ್ಕಾಗಿ ಖಾಸಗಿ ಜೀವನವನ್ನೇ ತ್ಯಾಗ ಮಾಡಬೇಕಾಗಬಹುದು. ತಾಳ್ಮೆಯನ್ನು ಪರೀಕ್ಷಿಸುವ ಕೆಲಸಕ್ಕೆ ಕೈ ಹಾಕದಿರಿ.
ಕುಂಭ
ಅನ್ಯರಿಂದ ಆರ್ಥಿಕ ಸಹಾಯ ನಿರೀಕ್ಷಿಸುವುದು ಸರಿಯಲ್ಲ. ಅದು ಸಾಧ್ಯವಾಗುವುದೂ ಇಲ್ಲ. ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಮಾರ್ಗದಲ್ಲಿ ಪ್ರತಿ ಹೆಜ್ಜೆ ಇರಲಿ. ಧ್ಯಾನ ಭಜನೆಗಳತ್ತ ಮನಸ್ಸು ನಿಲ್ಲುವುದು.
ಮೀನ
ಅವಕಾಶವನ್ನು ಹೇಗೆ ಉಪಯೋಗಿಸಿಕೊಳ್ಳಬೇಕೆಂದು ಯೋಚಿಸಿ ಉಪಯೋಗಿಸಿಕೊಂಡರೆ ಪೂರ್ಣಪ್ರಮಾಣದ ಲಾಭಾಂಶ ಅನುಭವಕ್ಕೆ ಬರುವುದು. ಯಾರ ಮಾತಿಗೂ ಮರುಳಾಗದೆ ತೀರ್ಮಾನಿಸುವುದು ಉತ್ತಮ.