ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಆಕಸ್ಮಿಕವಾಗಿ ಆತ್ಮೀಯರನ್ನು ಭೇಟಿ ಮಾಡಲಿದ್ದೀರಿ
Published 3 ಮಾರ್ಚ್ 2024, 23:33 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಈ ದಿನ ನೀವು ಆಕಸ್ಮಿಕವಾಗಿ ಆತ್ಮೀಯರನ್ನು ಭೇಟಿ ಮಾಡಲಿದ್ದೀರಿ. ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸರ್ವತೋಮುಖ ಅಭಿವೃದ್ಧಿ ಕಂಡುಬರುವುದು. ಸಹೋದರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.
ವೃಷಭ
ಷರತ್ತುಗಳ ವ್ಯವಹಾರಕ್ಕೆ ಕೈ ಹಾಕಬೇಡಿ. ಉದ್ಯೋಗದಲ್ಲಿ ಉನ್ನತ ಪದವಿ ದೊರೆಯುವ ಅಥವಾ ಸ್ಥಳ ಬದಲಾವಣೆಯ ಸಾಧ್ಯತೆಗಳಿವೆ. ವಿದೇಶದಿಂದ ಶುಭ ಸಮಾಚಾರ ಕೇಳುವಿರಿ.
ಮಿಥುನ
ಸಂಬಂಧಗಳಿಗೆ ಬೆಲೆ ಕೊಡುವ ನೀವು ಸಂಬಂಧಿಕರ ಮೊಸಳೆ ಕಣ್ಣೀರಿಗೆ ಸುಲಭವಾಗಿ ಮರುಳಾಗದಿರಿ. ಹೆಚ್ಚಿನ ಆದಾಯದಿಂದ ಸಂಸಾರದಲ್ಲಿ ಸಂತೋಷ ಉಂಟಾಗುವುದು. ಮಾನಸಿಕ ಕ್ಷೋಭೆ ದೂರಾಗುವುದು.
ಕರ್ಕಾಟಕ
ಸಂಘ ಸಂಸ್ಥೆಯಲ್ಲಿ ನಡೆದ ಸಣ್ಣ ಪುಟ್ಟ ತಪ್ಪುಗಳನ್ನು ಸರಿಪಡಿಸಿ, ಕಿರಿಯರಿಗೆ ಮಾರ್ಗದರ್ಶನ ನೀಡಿ. ವೈಯಕ್ತಿಕ ವಿಚಾರಗಳತ್ತ ಗಮನ ಹರಿಸುವಿರಿ. ಸಂಸಾರ ತಾಪತ್ರಯಗಳು ನೀಗಿ ಮನಸ್ಸಿಗೆ ಸಮಾಧಾನ ಉಂಟಾಗುತ್ತದೆ.
ಸಿಂಹ
ಮನುಷ್ಯ ಪ್ರಯತ್ನವಿದ್ದರೂ ಯಶಸ್ಸು ಹೊಂದಲು ಮೊದಲೆರಡು ಬಾರಿ ವಿಘ್ನ ಉಂಟಾಗುವುದು. ಗಣ್ಯರಿಂದ ಮುಂದಿನ ಬದುಕಿನ ದಾರಿ ಬದಲಾಗುವ ಸಾಧ್ಯತೆ ಇದೆ. ವಿಮಾ ಸಲಹೆಗಾರರಿಗೆ ಉತ್ತಮವಾಗಿರಲಿದೆ.
ಕನ್ಯಾ
ಆಸ್ತಿಗೆ ಸಂಬಂಧಿಸಿದಂತೆ ಕೌಟುಂಬಿಕ ಕಲಹಗಳು ಆಗಾಗ ಗೋಚರಕ್ಕೆ ಬಂದಾವು. ಹೊಸ ಹುದ್ದೆಗೆ ಅಭ್ಯರ್ಥಿಯಾಗುವ ಬಯಕೆ ಉಂಟಾಗಲಿದೆ. ಮನೆಯವರ ಒಳಿತಿಗಾಗಿ ಹೊಸ ಮಾರ್ಗ ಕಂಡುಕೊಳ್ಳಲು ಇದು ಸೂಕ್ತ ಸಮಯ.
ತುಲಾ
ಉದ್ಯೋಗ ನಿಮಿತ್ತ ದೂರದೂರಿಗೆ ಹೋಗಬಹುದು. ಮಕ್ಕಳ ಭವಿಷ್ಯದ ಬಗ್ಗೆ ಯೋಜನೆಗಳನ್ನು ರೂಪಿಸಲು ಸಕಾಲ. ಹೊಸ ಜನರಲ್ಲಿ ಮತ್ತು ಹೊಸ ‌ಸ್ಥಳದಲ್ಲಿ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುವಿರಿ.
ವೃಶ್ಚಿಕ
ರಾಸಾಯನಿಕ ಪದಾರ್ಥಗಳ ವ್ಯಾಪಾರದಲ್ಲಿ ಹೆಚ್ಚಿನ ಲಾಭವಿರುವುದು. ಲಾಭ ತರುವ ಅವಕಾಶ ನೀಡುವ ವ್ಯಕ್ತಿಗಳ ಸ್ನೇಹ ಸಂಪಾದಿಸುವಿರಿ. ಸಂತೋಷದ ನಡುವೆಯೂ ಒತ್ತಡದಿಂದಿರುವುದು ನಿಮ್ಮ ಜಾಯಮಾನ.
ಧನು
ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ತಾಳ್ಮೆ , ದೃಢ ನಿರ್ಧಾರ ಅಗತ್ಯವೆನಿಸಲಿದೆ. ಕಳೆದು ಹೋದಂತಹ ವಸ್ತುವನ್ನು ಮತ್ತೆ ಪಡೆದುಕೊಳ್ಳುವ ಹಂಬಲದಿಂದ ಹುಡುಕುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಿರಿ.
ಮಕರ
ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುವುದರಿಂದ ಸಂತಸ ಸಿಗಲಿದೆ. ದಾಂಪತ್ಯ ಜೀವನ ಸುಖಮಯವಾಗಿರುವುದು ಅಥವಾ ವಿವಾಹ ಅಪೇಕ್ಷಿಗಳಿಗೆ ಶುಭವಿದೆ. ಇಂದು ಶೀತಬಾಧೆ ಉಂಟಾಗಲಿದೆ.
ಕುಂಭ
ಕೆಲಸ ಕಾರ್ಯಗಳು ವಿಳಂಬಗತಿಯಲ್ಲಿ ನಡೆದರೂ ಪೂರ್ಣಗೊಳ್ಳಲಿವೆ. ಅವಮಾನಿಸಿದ ವ್ಯಕ್ತಿಗಳಿಂದ ಗೌರವ ಪಡೆಯುವಂಥ ಕಾಲವನ್ನು ನೀವು ನಿರೀಕ್ಷಿಸಬಹುದು.
ಮೀನ
ಸಾಹಿತಿ ಬರಹಗಾರರಿಗೆ ಹಾಗೂ ಚಲನ ಚಿತ್ರರಂಗದವರಿಗೆ ಹಣ ಮತ್ತು ಖ್ಯಾತಿ ದೊರೆಯುವುದು. ಪ್ರಾಮಾಣಿಕತನದಿಂದಾಗಿ ಒಳ್ಳೆಯ ಕೆಲಸವೊಂದು ಅಯಾಚಿತವಾಗಿ ಸಿಗುತ್ತದೆ. ನೀಲಿ ಬಣ್ಣ ಶುಭಪ್ರದ.