ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ:ಈ ರಾಶಿಯವರು ಜಾಣ್ಮೆಯಿಂದ ವ್ಯವಹರಿಸಿದರೆ ಪರಿಸ್ಥಿತಿಯ ಲಾಭ ಪಡೆಯಬಹುದು
Published 7 ಏಪ್ರಿಲ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಹೊಸ ಮನೆ ಕೊಳ್ಳುವ ಪ್ರಯತ್ನಕ್ಕೆ ಎಲ್ಲಾ ರೀತಿಯಲ್ಲಿಯೂ ಚಾಲನೆ ಸಿಗುವುದು. ಪತ್ನಿಯ ಆರೋಗ್ಯದಲ್ಲಿ ರಕ್ತದೊತ್ತಡದಂತಹ ಸಮಸ್ಯೆಗಳು ಉಂಟಾಗುತ್ತದೆ. ಆಟಿಕೆ ವ್ಯಾಪಾರದಿಂದ ಅಧಿಕ ಲಾಭವನ್ನು ಪಡೆಯಬಹುದು.
ವೃಷಭ
ಕೌಟುಂಬಿಕವಾಗಿ ತೀರ್ಮಾನ ತೆಗೆದುಕೊಳ್ಳುವ ವಿಚಾರದಲ್ಲಿ ಏಕಮುಖ ನಿರ್ಧಾರ ಬೇಡ. ಸಿಹಿತಿಂಡಿ ವ್ಯಾಪಾರಿಗಳಿಗೆ ಲಾಭ–ನಷ್ಟದ ಮಿಶ್ರಫಲ ಅನುಭವಕ್ಕೆ ಬರಲಿದೆ.
ಮಿಥುನ
ಆಸೆ ಆಕಾಂಕ್ಷೆಯನ್ನು ಸಾಧ್ಯವಾದಷ್ಟು ನಿಯಂತ್ರಿಸಿಕೊಂಡಲ್ಲಿ, ಋಣ ಮುಕ್ತರಾಗುವ ಅವಕಾಶ ಒದಗಲಿದೆ. ಹಂತಹಂತವಾಗಿ ಸುಧಾರಿಸಲಿರುವ ಪರಿಸ್ಥಿತಿಯು ಹೆಚ್ಚಿನ ನಿರಾಶೆಯನ್ನು ತರದು.
ಕರ್ಕಾಟಕ
ಪರಿಶ್ರಮದ ಜತೆ ಬುದ್ಧಿವಂತಿಕೆ, ಅಧಿಕ ಸಮಯವನ್ನು ವೃತ್ತಿಯ ಕೆಲಸಕ್ಕೆ ಮೀಸಲಿಡಿ. ಆಲಸ್ಯತನವನ್ನು ದೂರಮಾಡಿ. ವ್ಯಾಪಾರ ವ್ಯವಹಾರ ಬಗೆಗೆ ಮಕ್ಕಳಿಗೆ ತಿಳಿಸಿಕೊಡುವಿರಿ. ದೂರ ಸಂಚಾರದ ಲಕ್ಷಣಗಳಿವೆ.
ಸಿಂಹ
ಜಾಣ್ಮೆಯಿಂದ ವ್ಯವಹರಿಸಿದರೆ ಪರಿಸ್ಥಿತಿಯ ಲಾಭವನ್ನು ಪಡೆಯುವಿರಿ. ಜನರ ಮೆಚ್ಚುಗೆಗೆ ಪಾತ್ರರಾಗುವಿರಿ. ವಿದ್ಯಾರ್ಥಿಗಳು ಓದಿನಲ್ಲಿ ಏಕಾಗ್ರತೆಯನ್ನು ಸಾಧಿಸುವುದರಿಂದ ಗುರಿಯನ್ನು ತಲುಪಬಹುದು.
ಕನ್ಯಾ
ಬರಬೇಕಾಗಿದ್ದ ಹಣಕ್ಕೆ ತುಸು ಅಡಚಣೆಗಳಿದ್ದು, ನಿವಾರಿಸಿಕೊಳ್ಳಬೇಕಾಗುವುದು. ಉದ್ಯೋಗದಲ್ಲಿ ಸಮಾಧಾನ ಸಿಗದಿದ್ದರೂ ಆರ್ಥಿಕವಾಗಿ ತೊಂದರೆಗಳಾಗುವುದಿಲ್ಲ. ನಿರುದ್ಯೋಗಿಗಳಿಗೆ ಉತ್ತಮ ಕೆಲಸ ದೊರೆಯಲಿದೆ.
ತುಲಾ
ಎಂಜಿನಿಯರ್‌ ರಂಗದವರ ತ್ವರಿತ ಬೆಳವಣಿಗೆಯಿಂದ ಉನ್ನತ ಅಧಿ ಕಾರಿಗಳ ಪ್ರಶಂಸೆಗೆ ಪಾತ್ರರಾಗುವ ಸಮಯ ಇದಾಗಲಿದೆ. ಆಕಸ್ಮಿಕ ರೀತಿಯಲ್ಲಿ ಉದ್ಯೋಗ ದೊರೆಯಲಿದೆ. ಶ್ರೀರಾಮನನ್ನು ಭಜಿಸಿ, ಶುಭವಾಗುತ್ತದೆ.
ವೃಶ್ಚಿಕ
ಮಕ್ಕಳ ವ್ಯಾಸಂಗದ ಬಗ್ಗೆ ಸಂಬಂಧಿಕರಲ್ಲಿ ಚರ್ಚೆ ನಡೆಸಿ, ಸಲಹೆ ದೊರಕುವುದು. ಕೃಷಿಗೆ ಸಹಾಯವಾಗುವ ಯಂತ್ರಗಳ ಖರೀದಿಯಿಂದ ಲಾಭ. ಬ್ಯಾಂಕ್ ಉದ್ಯೋಗಿಗಳಿಗೆ ಬಿಡುವಿಲ್ಲದ ಕೆಲಸ.
ಧನು
ತಂದೆ-ತಾಯಿಯ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಅನಿವಾರ್ಯ. ಮಗನಿಗಾಗಿ ಹೊಸ ವ್ಯಾಪಾರ ಮಳಿಗೆ ಆರಂಭಿಸುವುದು ಒಳ್ಳೆಯದು. ತೀರ್ಥಯಾತ್ರೆ ಮತ್ತು ಪುಣ್ಯಕ್ಷೇತ್ರಗಳಿಗೆ ಹೋಗಿಬರುವ ಸಾಧ್ಯತೆಗಳಿವೆ.
ಮಕರ
ಬಂಧು ಮಿತ್ರರೊಂದಿಗೆ ಸಂತೋಷ ವಿಷಯಗಳನ್ನು ಹಂಚಿ ಕೊಳ್ಳುವುದು ಸರಿಯಲ್ಲ. ದಿನಗೂಲಿ ಕಾರ್ಮಿಕ ವರ್ಗದವರಿಗೆ ಪರಿಶ್ರಮದಿಂದ ಆದಾಯ ಉಂಟಾಗುವುದು. ಸರ್ಕಾರಿ ಕೆಲಸಗಳಲ್ಲಿ ತಡೆ ಎದುರಾಗಬಹುದು.
ಕುಂಭ
ಅಚ್ಚುಕಟ್ಟಾದ ಕೆಲಸಗಳಿಂದ ನಿಮ್ಮ ಮೇಲಿನ ಅಭಿಪ್ರಾಯಗಳು ಬದಲಾಗುವುದು. ಸೌಂದರ್ಯ ಆಸ್ವಾದಿಸುವ ಆಕಾಂಕ್ಷೆಯು ಪ್ರಬಲವಾಗುವುದು. ವ್ಯಾಪಾರ ವ್ಯವಹಾರಗಳು ಸರಾಗವಾಗಿ ನಡೆಯಲಿವೆ.
ಮೀನ
ಹಣಕಾಸಿನ ವಿಚಾರದಲ್ಲಿ ಭವಿಷ್ಯದ ಕುರಿತು ಯೋಚಿಸಿ ನಿರ್ಧಾರ ಕೈಗೊಳ್ಳುವುದರಿಂದ ಮುಂದಿನ ಜೀವನದ ದಿನಗಳು ನೆಮ್ಮದಿದಾಯಕವಾಗಲಿದೆ. ದೇಹದ ಶ್ರಮಕ್ಕೆ ತಕ್ಕ ಸಂಪಾದನೆ ಇಲ್ಲವಾದರೂ ನೆಮ್ಮದಿ ಇರಲಿದೆ.