<p><strong>ನವದೆಹಲಿ</strong>: ನೆದರ್ಲೆಂಡ್ಸ್ ವಿರುದ್ಧ ಬೆಂಗಳೂರಿನಲ್ಲಿ ಮುಂದಿನ ವರ್ಷದ ಫೆಬ್ರುವರಿಯಲ್ಲಿ ನಡೆಯಲಿರುವ ಡೇವಿಸ್ ಕಪ್ ಮೊದಲ ಸುತ್ತಿನ ಕ್ವಾಲಿಫೈಯರ್ಸ್ ಪಂದ್ಯಕ್ಕೆ ಎಐಟಿಎ ಆಯ್ಕೆ ಸಮಿತಿ ಶ್ರೀರಾಮ್ ಬಾಲಾಜಿ ಅವರನ್ನು ಕೈಬಿಟ್ಟಿದೆ. ಉಳಿದ ಆಟಗಾರರು ಸ್ಥಾನ ಉಳಿಸಿಕೊಂಡಿದ್ದಾರೆ.</p>.<p>ಈ ಪಂದ್ಯ ಫೆಬ್ರುವರಿ 7 ಮತ್ತು 8 ರಂದು ನಡೆಯಲಿದೆ. ಸುಮೀತ್ ನಾಗಲ್ ಅವರು ಸಿಂಗಲ್ಸ್ನಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. ತಂಡದಲ್ಲಿ ಡಬಲ್ಸ್ ಪರಿಣತರಾದ ದಕ್ಷಿಣೇಶ್ವರ ಸುರೇಶ್ ಮತ್ತು ಕರಣ್ ಸಿಂಗ್ ಇದ್ದಾರೆ.</p>.<p>ಅನುಭವಿ ಡಬಲ್ಸ್ ಆಟಗಾರ ಬಾಲಾಜಿ ಸ್ಥಾನ ಕಳೆದುಕೊಂಡಿದ್ದಾರೆ. ದೀರ್ಘಾವಧಿ ಯೋಜನೆಯ ಭಾಗವಾಗಿ ಆಯ್ಕೆಸಮಿತಿ ಅವರನ್ನು ಕೈಬಿಟ್ಟಿದೆ. ಹೀಗಾಗಿ ಡಬಲ್ಸ್ನಲ್ಲಿ ಯುಕಿ ಜೊತೆ ರಿತ್ವಿಕ್ ಬೊಲ್ಲಿಪಳ್ಳಿ ಆಡುವ ಸಾಧ್ಯತೆಯಿದೆ.</p>.<p>‘ಯುವ ಆಟಗಾರರ ಮೇಲೆ ತಂಡ ಹೆಚ್ಚಿನ ನಿರೀಕ್ಷೆಯಿಟ್ಟುಕೊಂಡು ಈ ನಿರ್ಧಾರಕ್ಕೆ ಬಂದಿದೆ’ ಎಂದು ಭಾರತ ತಂಡದ ನಾಯಕ ರೋಹಿತ್ ರಾಜಪಾಲ್ ತಿಳಿಸಿದರು.</p>.<p>ಕರ್ನಾಟಕದವರೇ ಆದ ಪ್ರಜ್ವಲ್ ದೇವ್ ಜೊತೆಗೆ ಆರ್ಣವ್ ಪಪರ್ಕರ್ ಅವರನ್ನು ಅಭ್ಯಾಸಕ್ಕೆ ನೆರವಾಗಲು ತರಬೇತಿ ಶಿಬಿರಕ್ಕೆ ಕರೆಸಿಕೊಳ್ಳಲಾಗುತ್ತಿದೆ.</p>.<p>ತಂಡ ಇಂತಿದೆ:</p>.<p>ಸುಮೀತ್ ನಾಗಲ್, ದಕ್ಷಿಣೇಶ್ವರ್ ಸುರೇಶ್, ಕರಣ್ ಸಿಂಗ್, ಯುಕಿ ಭಾಂಬ್ರಿ ಮತ್ತು ರಿತ್ವಿಕ್ ಬೊಲ್ಲಿಪಳ್ಳಿ. ಮೀಸಲು ಆಟಗಾರರು: ಆರ್ಯನ್ ಶಾ, ಅನಿರುದ್ಧ ಚಂದ್ರಶೇಖರ್ ಮತ್ತು ದಿಗ್ವಿಜಯ ಸಿಂಗ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ನೆದರ್ಲೆಂಡ್ಸ್ ವಿರುದ್ಧ ಬೆಂಗಳೂರಿನಲ್ಲಿ ಮುಂದಿನ ವರ್ಷದ ಫೆಬ್ರುವರಿಯಲ್ಲಿ ನಡೆಯಲಿರುವ ಡೇವಿಸ್ ಕಪ್ ಮೊದಲ ಸುತ್ತಿನ ಕ್ವಾಲಿಫೈಯರ್ಸ್ ಪಂದ್ಯಕ್ಕೆ ಎಐಟಿಎ ಆಯ್ಕೆ ಸಮಿತಿ ಶ್ರೀರಾಮ್ ಬಾಲಾಜಿ ಅವರನ್ನು ಕೈಬಿಟ್ಟಿದೆ. ಉಳಿದ ಆಟಗಾರರು ಸ್ಥಾನ ಉಳಿಸಿಕೊಂಡಿದ್ದಾರೆ.</p>.<p>ಈ ಪಂದ್ಯ ಫೆಬ್ರುವರಿ 7 ಮತ್ತು 8 ರಂದು ನಡೆಯಲಿದೆ. ಸುಮೀತ್ ನಾಗಲ್ ಅವರು ಸಿಂಗಲ್ಸ್ನಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. ತಂಡದಲ್ಲಿ ಡಬಲ್ಸ್ ಪರಿಣತರಾದ ದಕ್ಷಿಣೇಶ್ವರ ಸುರೇಶ್ ಮತ್ತು ಕರಣ್ ಸಿಂಗ್ ಇದ್ದಾರೆ.</p>.<p>ಅನುಭವಿ ಡಬಲ್ಸ್ ಆಟಗಾರ ಬಾಲಾಜಿ ಸ್ಥಾನ ಕಳೆದುಕೊಂಡಿದ್ದಾರೆ. ದೀರ್ಘಾವಧಿ ಯೋಜನೆಯ ಭಾಗವಾಗಿ ಆಯ್ಕೆಸಮಿತಿ ಅವರನ್ನು ಕೈಬಿಟ್ಟಿದೆ. ಹೀಗಾಗಿ ಡಬಲ್ಸ್ನಲ್ಲಿ ಯುಕಿ ಜೊತೆ ರಿತ್ವಿಕ್ ಬೊಲ್ಲಿಪಳ್ಳಿ ಆಡುವ ಸಾಧ್ಯತೆಯಿದೆ.</p>.<p>‘ಯುವ ಆಟಗಾರರ ಮೇಲೆ ತಂಡ ಹೆಚ್ಚಿನ ನಿರೀಕ್ಷೆಯಿಟ್ಟುಕೊಂಡು ಈ ನಿರ್ಧಾರಕ್ಕೆ ಬಂದಿದೆ’ ಎಂದು ಭಾರತ ತಂಡದ ನಾಯಕ ರೋಹಿತ್ ರಾಜಪಾಲ್ ತಿಳಿಸಿದರು.</p>.<p>ಕರ್ನಾಟಕದವರೇ ಆದ ಪ್ರಜ್ವಲ್ ದೇವ್ ಜೊತೆಗೆ ಆರ್ಣವ್ ಪಪರ್ಕರ್ ಅವರನ್ನು ಅಭ್ಯಾಸಕ್ಕೆ ನೆರವಾಗಲು ತರಬೇತಿ ಶಿಬಿರಕ್ಕೆ ಕರೆಸಿಕೊಳ್ಳಲಾಗುತ್ತಿದೆ.</p>.<p>ತಂಡ ಇಂತಿದೆ:</p>.<p>ಸುಮೀತ್ ನಾಗಲ್, ದಕ್ಷಿಣೇಶ್ವರ್ ಸುರೇಶ್, ಕರಣ್ ಸಿಂಗ್, ಯುಕಿ ಭಾಂಬ್ರಿ ಮತ್ತು ರಿತ್ವಿಕ್ ಬೊಲ್ಲಿಪಳ್ಳಿ. ಮೀಸಲು ಆಟಗಾರರು: ಆರ್ಯನ್ ಶಾ, ಅನಿರುದ್ಧ ಚಂದ್ರಶೇಖರ್ ಮತ್ತು ದಿಗ್ವಿಜಯ ಸಿಂಗ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>