<p><strong>ಚೆನ್ನೈ:</strong> 2013ರ ಐಪಿಎಲ್ ಬೆಟ್ಟಿಂಗ್ ಹಗರಣದಲ್ಲಿ ತಮ್ಮ ಹೆಸರನ್ನು ತಳುಕು ಹಾಕಿದ್ದಕ್ಕಾಗಿ ನಿವೃತ್ತ ಐಪಿಎಸ್ ಅಧಿಕಾರಿ ಜಿ. ಸಂಪತ್ಕುಮಾರ್ ವಿರುದ್ಧ ದಾಖಲಿಸಿರುವ ₹ 100 ಕೋಟಿ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದ ದಾಖಲೆಗಳ ಭಾಷಾಂತರಕ್ಕಾಗಿ ₹ 10 ಲಕ್ಷ ಪಾವತಿಸುವಂತೆ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರಿಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ ನೀಡಿದೆ.</p>.Video | ಟಿ20 ವಿಶ್ವಕಪ್ ಹಬ್ಬ: ಧೋನಿ-ರೋಹಿತ್ ಪಟ್ಟಿಗೆ ಸೇರಲಿದ್ದಾರಾ ‘ಸ್ಕೈ’? .<p>ಫೆ. 11ರಂದು ಮಧ್ಯಂತರ ಆದೇಶ ನೀಡುವಾಗ ನ್ಯಾಯಮೂರ್ತಿ ಆರ್.ಎನ್ ಮಂಜುಳ ಅವರು ಈ ಆದೇಶ ನೀಡಿದ್ದಾರೆ.</p><p>2025ರ ಅಕ್ಟೋಬರ್ 28ರ ಆದೇಶದ ಅನ್ವಯ, ಈ ಪ್ರಕರಣ ಸಂಬಂಧ ಸಿ.ಡಿ.ಗಳಲ್ಲಿರುವ ವಿಷಯಗಳನ್ನು ಲಿಖಿತ ರೂಪಕ್ಕೆ ತರುವ ಮತ್ತು ಭಾಷಾಂತರಿಸುವ ಕೆಲಸವನ್ನು ನ್ಯಾಯಾಲಯದ ಭಾಷಾಂತರಕಾರರು ವಹಿಸಿಕೊಂಡಿದ್ದಾರೆ. ಅದಕ್ಕೆ ಅಗತ್ಯವಿರುವ ಶುಲ್ಕವನ್ನು ಪಾವತಿಸುವ ಷರತ್ತಿನ ಮೇಲೆ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.</p>.ಪುಣೆ ಗ್ರ್ಯಾಂಡ್ ಟೂರ್ 2026ರ ಗುಡ್ವಿಲ್ ರಾಯಭಾರಿ ಆಗಿ ಧೋನಿ ನೇಮಕ .<p>ಈ ಭಾಷಾಂತರ ಪ್ರಕ್ರಿಯೆಯು ಬೃಹತ್ ಕೆಲಸವಾಗಿದ್ದು, ಪೂರ್ಣಗೊಳಿಸಲು ಕನಿಷ್ಠ ಒಬ್ಬ ಭಾಷಾಂತರಕಾರ ಮತ್ತು ಒಬ್ಬ ಟೈಪಿಸ್ಟ್ ಸುಮಾರು ಮೂರರಿಂದ ನಾಲ್ಕು ತಿಂಗಳುಗಳ ಕಾಲ ತಮ್ಮ ಸಂಪೂರ್ಣ ಸಮಯ ಮತ್ತು ಶಕ್ತಿಯನ್ನು ವ್ಯಯಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.</p><p>ಸಿ.ಡಿ.ಗಳಲ್ಲಿನ ವಿಷಯಗಳ ಲಿಖಿತ ರೂಪ ಮತ್ತು ಅನುವಾದ ಕಾರ್ಯವನ್ನು ಮಾರ್ಚ್ 2026 ರ ಮೂರನೇ ವಾರದೊಳಗೆ ಪೂರ್ಣಗೊಳಿಸುವಂತೆ ಭಾಷಾಂತರಕಾರರಿಗೆ ನ್ಯಾಯಮೂರ್ತಿಗಳು ನಿರ್ದೇಶಿದ್ದಾರೆ. </p><p>₹10 ಲಕ್ಷ ವೆಚ್ಚವನ್ನು ಮದ್ರಾಸ್ ಹೈಕೋರ್ಟ್ನ 'ಮುಖ್ಯ ನ್ಯಾಯಾಧೀಶರ ಪರಿಹಾರ ನಿಧಿ'ಗೆ ಮಾರ್ಚ್ 12ರೊಳಗೆ ಪಾವತಿಸಬೇಕು ಎಂದು ಹೇಳಿ ಮುಂದಿನ ವಿಚಾರಣೆಯನ್ನು ಅದೇ ದಿನಕ್ಕೆ ಮುಂದೂಡಿದ್ದಾರೆ.</p><p>ಯಾವ ಭಾಷೆಯಿಂದ ಯಾವ ಭಾಷೆಗೆ ಅನುವಾದ ಮಾಡಲಾಗುತ್ತದೆ ಎನ್ನುವುದು ಗೊತ್ತಾಗಿಲ್ಲ.</p>.IND vs NZ: ಧೋನಿ, ಪಂತ್ರನ್ನೇ ಮೀರಿಸಿದ ಕನ್ನಡಿಗ ರಾಹುಲ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> 2013ರ ಐಪಿಎಲ್ ಬೆಟ್ಟಿಂಗ್ ಹಗರಣದಲ್ಲಿ ತಮ್ಮ ಹೆಸರನ್ನು ತಳುಕು ಹಾಕಿದ್ದಕ್ಕಾಗಿ ನಿವೃತ್ತ ಐಪಿಎಸ್ ಅಧಿಕಾರಿ ಜಿ. ಸಂಪತ್ಕುಮಾರ್ ವಿರುದ್ಧ ದಾಖಲಿಸಿರುವ ₹ 100 ಕೋಟಿ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದ ದಾಖಲೆಗಳ ಭಾಷಾಂತರಕ್ಕಾಗಿ ₹ 10 ಲಕ್ಷ ಪಾವತಿಸುವಂತೆ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರಿಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ ನೀಡಿದೆ.</p>.Video | ಟಿ20 ವಿಶ್ವಕಪ್ ಹಬ್ಬ: ಧೋನಿ-ರೋಹಿತ್ ಪಟ್ಟಿಗೆ ಸೇರಲಿದ್ದಾರಾ ‘ಸ್ಕೈ’? .<p>ಫೆ. 11ರಂದು ಮಧ್ಯಂತರ ಆದೇಶ ನೀಡುವಾಗ ನ್ಯಾಯಮೂರ್ತಿ ಆರ್.ಎನ್ ಮಂಜುಳ ಅವರು ಈ ಆದೇಶ ನೀಡಿದ್ದಾರೆ.</p><p>2025ರ ಅಕ್ಟೋಬರ್ 28ರ ಆದೇಶದ ಅನ್ವಯ, ಈ ಪ್ರಕರಣ ಸಂಬಂಧ ಸಿ.ಡಿ.ಗಳಲ್ಲಿರುವ ವಿಷಯಗಳನ್ನು ಲಿಖಿತ ರೂಪಕ್ಕೆ ತರುವ ಮತ್ತು ಭಾಷಾಂತರಿಸುವ ಕೆಲಸವನ್ನು ನ್ಯಾಯಾಲಯದ ಭಾಷಾಂತರಕಾರರು ವಹಿಸಿಕೊಂಡಿದ್ದಾರೆ. ಅದಕ್ಕೆ ಅಗತ್ಯವಿರುವ ಶುಲ್ಕವನ್ನು ಪಾವತಿಸುವ ಷರತ್ತಿನ ಮೇಲೆ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.</p>.ಪುಣೆ ಗ್ರ್ಯಾಂಡ್ ಟೂರ್ 2026ರ ಗುಡ್ವಿಲ್ ರಾಯಭಾರಿ ಆಗಿ ಧೋನಿ ನೇಮಕ .<p>ಈ ಭಾಷಾಂತರ ಪ್ರಕ್ರಿಯೆಯು ಬೃಹತ್ ಕೆಲಸವಾಗಿದ್ದು, ಪೂರ್ಣಗೊಳಿಸಲು ಕನಿಷ್ಠ ಒಬ್ಬ ಭಾಷಾಂತರಕಾರ ಮತ್ತು ಒಬ್ಬ ಟೈಪಿಸ್ಟ್ ಸುಮಾರು ಮೂರರಿಂದ ನಾಲ್ಕು ತಿಂಗಳುಗಳ ಕಾಲ ತಮ್ಮ ಸಂಪೂರ್ಣ ಸಮಯ ಮತ್ತು ಶಕ್ತಿಯನ್ನು ವ್ಯಯಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.</p><p>ಸಿ.ಡಿ.ಗಳಲ್ಲಿನ ವಿಷಯಗಳ ಲಿಖಿತ ರೂಪ ಮತ್ತು ಅನುವಾದ ಕಾರ್ಯವನ್ನು ಮಾರ್ಚ್ 2026 ರ ಮೂರನೇ ವಾರದೊಳಗೆ ಪೂರ್ಣಗೊಳಿಸುವಂತೆ ಭಾಷಾಂತರಕಾರರಿಗೆ ನ್ಯಾಯಮೂರ್ತಿಗಳು ನಿರ್ದೇಶಿದ್ದಾರೆ. </p><p>₹10 ಲಕ್ಷ ವೆಚ್ಚವನ್ನು ಮದ್ರಾಸ್ ಹೈಕೋರ್ಟ್ನ 'ಮುಖ್ಯ ನ್ಯಾಯಾಧೀಶರ ಪರಿಹಾರ ನಿಧಿ'ಗೆ ಮಾರ್ಚ್ 12ರೊಳಗೆ ಪಾವತಿಸಬೇಕು ಎಂದು ಹೇಳಿ ಮುಂದಿನ ವಿಚಾರಣೆಯನ್ನು ಅದೇ ದಿನಕ್ಕೆ ಮುಂದೂಡಿದ್ದಾರೆ.</p><p>ಯಾವ ಭಾಷೆಯಿಂದ ಯಾವ ಭಾಷೆಗೆ ಅನುವಾದ ಮಾಡಲಾಗುತ್ತದೆ ಎನ್ನುವುದು ಗೊತ್ತಾಗಿಲ್ಲ.</p>.IND vs NZ: ಧೋನಿ, ಪಂತ್ರನ್ನೇ ಮೀರಿಸಿದ ಕನ್ನಡಿಗ ರಾಹುಲ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>