<p><strong>ಬೆಂಗಳೂರು:</strong> ದೆಹಲಿಯ ಸೋಮೇಂದ್ರ ಅವರು ನಗರದ ರಾಮಯ್ಯ ಅನ್ವಯಿಕ ವಿಜ್ಞಾನ ವಿವಿಯಲ್ಲಿ ದೃಷ್ಟಿದೋಷವುಳ್ಳವರಿಗೆ ನಡೆದ 19ನೇ ಎಐಸಿಎಫ್ಬಿ ರಾಷ್ಟ್ರೀಯ ಚೆಸ್ ಚಾಂಪಿಯನ್ಷಿಪ್ನಲ್ಲಿ ಗುರುವಾರ ಪ್ರಶಸ್ತಿ ಗೆದ್ದುಕೊಂಡರು.</p>.<p>ಸೋಮೇಂದ್ರ, ಕರ್ನಾಟಕದ ಕಿಶನ್ ಗಂಗೊಳ್ಳಿ, ತೆಲಂಗಾಣದ ರಿತ್ವಿಕ್ ಎಂ., ಮಹಾರಾಷ್ಟ್ರದ ಆರ್ಯನ್ ಜೋಶಿ ಮತ್ತು ಒಡಿಶಾದ ಪಾತ್ರ ಸುಭೇಂದ್ರ ಕುಮಾರ್ ಅವರು 9 ಸುತ್ತುಗಳಿಂದ ತಲಾ 6.5 ಪಾಯಿಂಟ್ಸ್ ಗಳಿಸಿದರು. ಆದರೆ ಟೈಬ್ರೇಕ್ನಲ್ಲಿ ಉತ್ತಮ ಸ್ಕೋರ್ ಆಧಾರದಲ್ಲಿ ಸೋಮೇಂದ್ರ ಅವರಿಗೆ ಪ್ರಶಸ್ತಿ ಒಲಿಯಿತು.</p>.<p>ಬೆಂಗಳೂರು ರೋಟರಿ ಕ್ಲಬ್, ರಾಮಯ್ಯ ವಿಶ್ವವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಐದು ದಿನಗಳ ಈ ಟೂರ್ನಿ ನಡೆಯಿತು. ಮಾಂಟೆನಿಗ್ರೊದ ಪೆಟ್ರೊವಾಕ್ನಲ್ಲಿ ಈ ವರ್ಷ ನಡೆಯಲಿರುವ ಐಬಿಸಿಎ ದೃಷ್ಟಿದೋಷವುಳ್ಳವರ ವಿಶ್ವ ಟೀಮ್ ಚಾಂಪಿಯನ್ಷಿಪ್ಗೆ ಭಾರತ ತಂಡವನ್ನು ಆಯ್ಕೆ ಮಾಡಲು ಈ ಟೂರ್ನಿ ಟ್ರಯಲ್ಸ್ ಆಗಿತ್ತು.</p>.<p>13 ರಾಜ್ಯಗಳ 49 ಆಟಗಾರರು ಟೂರ್ನಿಯಲ್ಲಿ ಭಾಗವಹಿಸಿದ್ದರು. ಎಂಟು ಬಾರಿಯ ರಾಷ್ಟ್ರೀಯ ಚಾಂಪಿಯನ್ ಕಿಶನ್ ಗಂಗೊಳ್ಳಿ ಎರಡನೇ ಮತ್ತು ರಿತ್ವಿಕ್ ವರು ಮೂರನೇ ಸ್ಥಾನ ಗಳಿಸಿದರು. ಮೊದಲ ಐದು ಸ್ಥಾನ ಪಡೆದವರು ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ದೆಹಲಿಯ ಸೋಮೇಂದ್ರ ಅವರು ನಗರದ ರಾಮಯ್ಯ ಅನ್ವಯಿಕ ವಿಜ್ಞಾನ ವಿವಿಯಲ್ಲಿ ದೃಷ್ಟಿದೋಷವುಳ್ಳವರಿಗೆ ನಡೆದ 19ನೇ ಎಐಸಿಎಫ್ಬಿ ರಾಷ್ಟ್ರೀಯ ಚೆಸ್ ಚಾಂಪಿಯನ್ಷಿಪ್ನಲ್ಲಿ ಗುರುವಾರ ಪ್ರಶಸ್ತಿ ಗೆದ್ದುಕೊಂಡರು.</p>.<p>ಸೋಮೇಂದ್ರ, ಕರ್ನಾಟಕದ ಕಿಶನ್ ಗಂಗೊಳ್ಳಿ, ತೆಲಂಗಾಣದ ರಿತ್ವಿಕ್ ಎಂ., ಮಹಾರಾಷ್ಟ್ರದ ಆರ್ಯನ್ ಜೋಶಿ ಮತ್ತು ಒಡಿಶಾದ ಪಾತ್ರ ಸುಭೇಂದ್ರ ಕುಮಾರ್ ಅವರು 9 ಸುತ್ತುಗಳಿಂದ ತಲಾ 6.5 ಪಾಯಿಂಟ್ಸ್ ಗಳಿಸಿದರು. ಆದರೆ ಟೈಬ್ರೇಕ್ನಲ್ಲಿ ಉತ್ತಮ ಸ್ಕೋರ್ ಆಧಾರದಲ್ಲಿ ಸೋಮೇಂದ್ರ ಅವರಿಗೆ ಪ್ರಶಸ್ತಿ ಒಲಿಯಿತು.</p>.<p>ಬೆಂಗಳೂರು ರೋಟರಿ ಕ್ಲಬ್, ರಾಮಯ್ಯ ವಿಶ್ವವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಐದು ದಿನಗಳ ಈ ಟೂರ್ನಿ ನಡೆಯಿತು. ಮಾಂಟೆನಿಗ್ರೊದ ಪೆಟ್ರೊವಾಕ್ನಲ್ಲಿ ಈ ವರ್ಷ ನಡೆಯಲಿರುವ ಐಬಿಸಿಎ ದೃಷ್ಟಿದೋಷವುಳ್ಳವರ ವಿಶ್ವ ಟೀಮ್ ಚಾಂಪಿಯನ್ಷಿಪ್ಗೆ ಭಾರತ ತಂಡವನ್ನು ಆಯ್ಕೆ ಮಾಡಲು ಈ ಟೂರ್ನಿ ಟ್ರಯಲ್ಸ್ ಆಗಿತ್ತು.</p>.<p>13 ರಾಜ್ಯಗಳ 49 ಆಟಗಾರರು ಟೂರ್ನಿಯಲ್ಲಿ ಭಾಗವಹಿಸಿದ್ದರು. ಎಂಟು ಬಾರಿಯ ರಾಷ್ಟ್ರೀಯ ಚಾಂಪಿಯನ್ ಕಿಶನ್ ಗಂಗೊಳ್ಳಿ ಎರಡನೇ ಮತ್ತು ರಿತ್ವಿಕ್ ವರು ಮೂರನೇ ಸ್ಥಾನ ಗಳಿಸಿದರು. ಮೊದಲ ಐದು ಸ್ಥಾನ ಪಡೆದವರು ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>