ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಡಿಸೆಂಬರ್ 15 ಶುಕ್ರವಾರ 2023– ಇಂದು ಸಾಲ ತೆಗೆದುಕೊಳ್ಳಬೇಡಿ
Published 14 ಡಿಸೆಂಬರ್ 2023, 18:31 IST
ಪ್ರಜಾವಾಣಿ ವಿಶೇಷ
author
ಮೇಷ
ಸಂಗೀತ ಕಲಾವಿದರಿಗೆ ಉತ್ತಮ ವೇದಿಕೆ ಸಿಗುವ ಮುನ್ಸೂಚನೆ. ವಿವಾಹ ಯೋಗ್ಯ ವಯಸ್ಕರಿಗೆ ಮನುಷ್ಯ ಪ್ರಯತ್ನವಿದ್ದರೆ ಮದುವೆ ನಿಶ್ಚಯವಾಗುವುದು. ಕಬ್ಬಿಣ ಅಥವಾ ಗ್ಲಾಸ್‌ಗಳಿಂದ ಗಾಯಗಳಾಗುವ ಲಕ್ಷಣಗಳಿವೆ.
ವೃಷಭ
ಸರಿಸಮಾನ ಮನಸ್ಸನ್ನು ಹೊಂದಿದವರಲ್ಲಿ ಒಪ್ಪಂದ ವ್ಯವಹಾರ ನಡೆಸಬಹುದು. ನಿಮಗೆ ಕಾಡುವ ಸಮಸ್ಯೆಯಿಂದಾಗಿ ಯಾರಲ್ಲೂ ನಂಬಿಕೆ ಇಡದಂಥ ಪರಿಸ್ಥಿತಿ ತೋರಿಬರುವುದು. ಆತ್ಮ ಬಲದ ಮೇಲೆ ನಂಬಿಕೆ ಇಡಿ.
ಮಿಥುನ
ಆಳವಾದ ಅಧ್ಯಯನದಲ್ಲಿ ತೊಡಗಿದವರಿಗೆ ಆಶ್ಚರ್ಯಕರ ವಿಷಯ ತಿಳಿಯಲಿದೆ. ನಿಮ್ಮನ್ನು ನೀವೇ ವಿಮರ್ಶಿಕೊಳ್ಳಿ. ನಿಮ್ಮ ಸರಿ ತಪ್ಪುಗಳು ನಿಮಗೇ ಅರಿವಾಗುವುದು. ಸ್ನೇಹಿತರಿಂದ ಅಪೇಕ್ಷಿಸುವ ಸಹಕಾರವು ಸಿಗಲಿದೆ.
ಕರ್ಕಾಟಕ
ಹೊಸ ಉದ್ಯೋಗಕ್ಕಾಗಿ ನಡೆಸಿದ ತೀವ್ರ ಪ್ರಯತ್ನ ಈ ದಿನ ಫಲ ನೀಡಲಿದೆ. ಇನ್ನೊಬ್ಬರನ್ನು ಅರ್ಥೈಸಿಕೊಳ್ಳುವ ಗುಣ ನಿಮ್ಮಲ್ಲಿ ಕಡಿಮೆಯಾಗಲಿದೆ. ವ್ಯವಹಾರ ನೆಡೆಸುವುದಕ್ಕಾಗಿ ಸಾಲ ತೆಗೆದುಕೊಳ್ಳಬೇಡಿ.
ಸಿಂಹ
ಒದಗಿ ಬರಲಿರುವ ಅವಕಾಶವನ್ನು ಕೈತಪ್ಪಿ ಹೋಗದಂತೆ ನೋಡಿಕೊಳ್ಳಿ. ವೃತ್ತಿ ಪರವಾಗಿ ಯಾವುದೇ ಬದಲಾವಣೆಗೆ ಇಂದು ಸಮಂಜಸ ದಿನವಾಗಿರುವುದಿಲ್ಲ. ಲಕ್ಷ್ಮೀ ನರಸಿಂಹನನ್ನು ಆರಾಧಿಸಿ ಶುಭವಾಗುವುದು.
ಕನ್ಯಾ
ಶೀಘ್ರ ಹಾಗೂ ಕಾಲಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಹಣ ಕಾಸಿನ ಲಾಭವನ್ನು ತರಲಿದೆ. ನಿಮ್ಮ ವಾಕ್ಚಾತುರ್ಯಕ್ಕೆ ಸಾಮಾಜಿಕವಾಗಿ ಗೌರವ ಪ್ರಶಂಸೆಗಳು ಉಂಟಾಗುವುದು. ನಿಮ್ಮ ಅದೃಷ್ಟದ ಪರೀಕ್ಷೆ ನೆಡೆಯಲಿದೆ.
ತುಲಾ
ಮುಕ್ತ ಮಾತುಕತೆಯಿಂದ ಕಾರ್ಮಿಕರ ಸಮಸ್ಯೆ ಬಗೆಹರಿಸಿಕೊಂಡು ಇರುವ ಅವಕಾಶಗಳನ್ನು ಮುಂದುವರಿಸುವುದು ಬುದ್ಧಿವಂತಿಕೆ ಲಕ್ಷಣ. ಮನಸ್ಸಿಗೆ ಮುದ ನೀಡುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ.
ವೃಶ್ಚಿಕ
ನೇರ ನಡೆ ನುಡಿಯಿರುವವರೊಂದಿಗೆ ಮಾತ್ರ ವ್ಯವಹಾರ ಮುಂದು ವರೆಸಿಕೊಂಡು ಹೋಗುವುದು ಉತ್ತಮ. ಸಹೋದರರಲ್ಲಿ ಅಥವಾ ಮನೆಯ ಸದಸ್ಯರಲ್ಲಿ ಭಿನ್ನಾಭಿಪ್ರಾಯ, ವಾದ ವಿವಾದ, ಕಲಹಗಳು ಇಲ್ಲವಾಗುವುದು.
ಧನು
ರಾಜಕೀಯ ವಲಯದಲ್ಲಿ ಉಂಟಾಗುವ ಸಣ್ಣ ಪುಟ್ಟ ಬದಲಾವಣೆಯನ್ನೂ ಗಮನಿಸಿ, ನಂತರದಲ್ಲಿ ಬೆಂಬಲಿಸುವ ಕೆಲಸ ಮಾಡಿ. ಕುಟುಂಬದ ಸದಸ್ಯರೊಂದಿಗೆ ನಿಮ್ಮ ಬಾಲ್ಯದ ಕ್ಷಣಗಳನ್ನು ನೆನಪಿಸಿಕೊಳ್ಳುವಿರಿ.
ಮಕರ
ರಾಜಕೀಯ ವಲಯದಲ್ಲಿ ಉಂಟಾಗುವ ಸಣ್ಣ ಪುಟ್ಟ ಬದಲಾವಣೆಯನ್ನೂ ಗಮನಿಸಿ, ನಂತರದಲ್ಲಿ ಬೆಂಬಲಿಸುವ ಕೆಲಸ ಮಾಡಿ. ಕುಟುಂಬದ ಸದಸ್ಯರೊಂದಿಗೆ ನಿಮ್ಮ ಬಾಲ್ಯದ ಕ್ಷಣಗಳನ್ನು ನೆನಪಿಸಿಕೊಳ್ಳುವಿರಿ.
ಕುಂಭ
ನಿಮ್ಮ ಕೃಷಿ ಪ್ರದೇಶವನ್ನು ವ್ಯವಸ್ಥಿತ ರೀತಿಯಲ್ಲಿಡಲು ತೀರ್ಮಾನಿ ಸುವುದು ಉತ್ತಮ. ಎದುರಾಗುವ ಸಂದಿಗ್ಧ ಪರಿಸ್ಥಿತಿಗಳನ್ನು ಧೈರ್ಯದಿಂದ ಎದುರಿಸಿ. ಧೈರ್ಯ ಮತ್ತು ಜನರನ್ನು ಸಂಬಾಳಿಸುವ ಶಕ್ತಿಯನ್ನು ಹೊಂದುವಿರಿ.
ಮೀನ
ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿಕೊಂಡು ಉಳಿತಾಯದ ತೀರ್ಮಾನ ಕೈಗೊಳ್ಳುವುದು ಉತ್ತಮ. ಕೆಲವೊಂದು ಸಾಂಸಾರಿಕ ಸಮಸ್ಯೆಗಳಿಗೆ ಈ ದಿನ ನೀವು ಅತ್ಯಂತ ಭಾವುಕರಾಗುವಂತಾಗುವುದು.