ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
30/04/2023 - 06/05/2023
ವಾರ ಭವಿಷ್ಯ: 2023 ಮೇ 07, ಭಾನುವಾರದಿಂದ ಮೇ 13, ಶನಿವಾರದವರೆಗೆ
Published 6 ಮೇ 2023, 18:30 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಪ್ರಮುಖ ಯೋಜನೆಯಲ್ಲಿ ನಿಮಗೆ ಮುಂದಾಳತ್ವ ದೊರೆಯುತ್ತದೆ. ಬರಹಗಾರರಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ. ವೃತ್ತಿಯಲ್ಲಿ ಬದಲಾವಣೆ ಅನಿವಾರ್ಯವೆನಿಸುತ್ತದೆ. ಹಣಕಾಸಿನ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸುತ್ತದೆ. ಸ್ವಂತ ಉದ್ಯೋಗಮಾಡುವ ವರಿಗೆ ಹೆಚ್ಚಿನ ಆದಾಯವಿರುತ್ತದೆ. ಆದಾಯ ವೃದ್ಧಿಯಾದರು ಸಹ ಖರ್ಚು ಅಷ್ಟೇ ಇರುತ್ತದೆ. ಅವಿವಾಹಿತರಿಗೆ ಬಾಳಸಂಗಾತಿ ದೊರೆಯುವ ಸಾಧ್ಯತೆ ಇದೆ. ನಿಮ್ಮ ಕೆಲಸದ ಒತ್ತಡದಿಂದ ಹೊರಬಂದು ನೆಮ್ಮದಿ ಕಾಣುವಿರಿ. ಒರಟು ಮಾತಿನಿಂದ ಯಾವುದೇ ಪ್ರಯೋಜನವಿರುವುದಿಲ್ಲ. ಹಣಕಾಸಿನ ಸಂಸ್ಥೆಯನ್ನು ನಡೆಸುವವರಿಗೆ ಲಾಭವಿರುತ್ತದೆ. ಆಸ್ತಿ ವಿಚಾರದಲ್ಲಿ ದಾಖಲೆಯ ಪರಿಶೀಲನೆ ಬಹಳ ಮುಖ್ಯ. ವಿದ್ಯಾರ್ಥಿಗಳಿಗೆ ಸಾಕಷ್ಟು ಯಶಸ್ಸು ದೊರೆಯುವ ಕಾಲ. ರಕ್ತ ಸಂಬಂಧಿ ಕಾಯಿಲೆ ಇರುವವರು ಎಚ್ಚರವಹಿಸಿರಿ.
ವೃಷಭ
ಸರ್ಕಾರಿ ಕಚೇರಿಗಳ ಕೆಲಸಕ್ಕಾಗಿ ಹೆಚ್ಚಿನ ಓಡಾಟ ಆಗುತ್ತದೆ. ಅಲಂಕಾರ ವಸ್ತುಗಳನ್ನು ಖರೀದಿ ಮಾಡುವಿರಿ. ಮಕ್ಕಳ ಖುಷಿಗಾಗಿ ಆಟಿಕೆ ವಸ್ತುಗಳನ್ನು ಕೊಂಡುಕೊಳ್ಳುವಿರಿ. ಸಂಬಂಧಿಕರೊಡನೆ ಸಂಬಂಧ ಗಳು ಸುಧಾರಿಸುತ್ತದೆ. ದಿನಸಿ ವ್ಯಾಪಾರ ಮಾಡುವವ ರಿಗೆ ಹೆಚ್ಚಿನ ಆದಾಯವಿರುತ್ತದೆ. ಕೆಲವರಿಗೆ ಹಿರಿಯರ ಆಸ್ತಿ ದೊರೆಯುವ ಸಂದರ್ಭವಿದೆ. ನಿಮ್ಮ ಭವಿಷ್ಯದ ಯೋಜನೆಗಳಿಗಾಗಿ ಹಣ ಮಿಗಿಸಲು ಪ್ರಯತ್ನಪಡುವಿರಿ. ವೈಯಕ್ತಿಕ ವಿಚಾರಗಳ ಬಗ್ಗೆ ಹೆಚ್ಚು ಎಚ್ಚರವಿರಲಿ. ಮನೆ ಪಾಠ ಮಾಡುವ ಬೋಧಕರಿಗೆ ಶಿಷ್ಯರ ಸಂಖ್ಯೆ ಹೆಚ್ಚುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ನಿಮ್ಮ ಆದಾಯ ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ಜಾಹೀರಾತು ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಕೆಲಸಗಳು ದೊರೆಯುತ್ತವೆ. ಉಷ್ಣಾಂಶ ವ್ಯತ್ಯಾಸದಿಂದ ದೇಹದಲ್ಲಿ ಅನಾರೋಗ್ಯ ಆಗಬಹುದು.
ಮಿಥುನ
ಸಹೋದರರಲ್ಲಿ ಆಸ್ತಿಯ ವಿಚಾರವಾಗಿ ಕಾವೇರಿದ ಮಾತುಗಳು ಆಗಬಹುದು.ಈ ಬಗ್ಗೆ ನಿಮಗೆ ಬಂಧುಗಳ ಸಹಾಯ ದೊರೆಯುತ್ತದೆ. ಉದ್ಯೋಗರಹಿತರಿಗೆ ತಾತ್ಕಾಲಿಕ ಉದ್ಯೋಗ ದೊರೆತು ಆದಾಯ ಬರುತ್ತದೆ. ನಿಮ್ಮ ನೇರ ನುಡಿ ಬಹಳ ಜನಗಳಿಗೆ ಇಷ್ಟವಾಗುವುದಿಲ್ಲ. ವೃತ್ತಿಯಲ್ಲಿ ನಿಮ್ಮ ಸಲಹೆ ಸೂಚನೆಗಳನ್ನು ಮೇಲಧಿಕಾರಿಗಳು ಮಾನ್ಯ ಮಾಡಿದ್ದಕ್ಕಾಗಿ ಸಂತೋಷವಾಗುತ್ತದೆ. ಆಭರಣ ವ್ಯಾಪಾರಿಗಳಿಗೆ ವ್ಯವಹಾರ ವೃದ್ಧಿಸುತ್ತದೆ. ಕಾರ್ಯ ಸಾಧನೆಯಲ್ಲಿ ಅಡ್ಡ ಬರುವ ತೊಂದರೆಗಳನ್ನು ನಿವಾರಿಸಿ ಮುಂದುವರೆಯಿರಿ. ದಿನಸಿ ಸಗಟು ವ್ಯಾಪಾರಿಗಳಿಗೆ ಹೆಚ್ಚು ವ್ಯವಹಾರ ನಡೆದು ಆದಾಯ ಬರುತ್ತದೆ. ಸದ್ಯ ಧನ ಆದಾಯವು ಸಾಮಾನ್ಯವಾಗಿರುತ್ತದೆ. ಹಣಕಾಸಿನ ವ್ಯವಹಾರ ಮಾಡುವವರಿಗೆ ಬಾಕಿ ವಸೂಲಿ ಆಗುತ್ತದೆ. ಕೃಷಿಯ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ಲಾಭವಿರುತ್ತದೆ.
ಕರ್ಕಾಟಕ
ಹಿಂದಿನ ಕಠಿಣ ಪ್ರಯತ್ನಗಳು ಫಲಕಾರಿಯಾಗಿ  ಬರುತ್ತವೆ. ಹಂಗಾಮಿ ಕೆಲಸಮಾಡುವವರಿಗೆ ಖಾಯಂ ಕೆಲಸದೊರೆಯುವ ಸಾಧ್ಯತೆ ಇದೆ. ವರ್ಗಾವಣೆಯನ್ನು ಬಯಸುತ್ತಿರುವವರಿಗೆ ಆಶಿಸಿದ  ಸ್ಥಳಕ್ಕೆ ವರ್ಗಾವಣೆ ದೊರೆಯುತ್ತದೆ. ಉದ್ದಿಮೆಗಳಲ್ಲಿ ಕೆಲಸಗಾರರ ಕೆಲವೊಂದು ಬೇಡಿಕೆಗಳು ಈಡೇರುತ್ತವೆ. ಕೋರ್ಟು ಕಛೇರಿ ವ್ಯಾಜ್ಯಗಳಲ್ಲಿ ಜಯ ದೊರತಂತಾದರು ಅದರ ಫಲಿತಾಂಶ ಮುಂದೂಡಲ್ಪಡುತ್ತದೆ.ಜಮೀನಿನ ವ್ಯಾಜ್ಯಗಳಲ್ಲಿ ಜಯ ದೊರೆಯುತ್ತದೆ. ಮಕ್ಕಳ ಏಳಿಗೆಯ ಬಗ್ಗೆ ಶುಭವಾರ್ತೆಗಳು ಕೇಳಿಬರುತ್ತವೆ. ವೃತ್ತಿಯಲ್ಲಿ ನಿಮ್ಮ ಶ್ರಮದ ಫಲವನ್ನು ಬೇರೆಯವರು ಪಡೆಯಲು ಯತ್ನಿಸುತ್ತಾರೆ, ಈ ಬಗ್ಗೆ ಎಚ್ಚರವಹಿಸಿರಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ದೊರೆಯುತ್ತದೆ.ಶ್ವಾಸಕೋಶದ ತೊಂದರೆ ಇರುವವರು ಈಗ ಚಿಕಿತ್ಸೆ ಪಡೆಯ ಬೇಕಾಗಬಹುದು. ಹಣದ ಒಳಹರಿವು ಸಾಮಾನ್ಯ ಮಟ್ಟದಲ್ಲಿರುತ್ತದೆ.
ಸಿಂಹ
ಅಂದುಕೊಂಡ ಕೆಲಸಗಳು ಯೋಜಿತ ರೀತಿಯಲ್ಲಿ ಆಗದೆ ಗೊಂದಲಗಳಾಗಬಹುದು. ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡುವ ಯೋಗವಿದೆ.ಹೊಸ ಉದ್ಯೋಗವನ್ನು ಸೇರುವವರು ಸಂಬಳದ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿರಿ. ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿಗಳು ದೊರೆತು ಸಂತಸವಾಗುತ್ತದೆ. ಸಹೋದ್ಯೋಗಿಗಳು ಕೆಲಸದಲ್ಲಿ ನಿಮಗೆ ಹೆಚ್ಚು ಸ್ಪೂರ್ತಿ ನೀಡುವರು. ಸ್ವಂತ ಉದ್ಯೋಗ ಮಾಡುವವರು ಕೈ ತಪ್ಪಿದ ಅವಕಾಶಗಳನ್ನು ಪುನಹ ಪಡೆಯುವರು. ಯಾವುದೇ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಅದರಲ್ಲಿನ  ವಿವರಗಳನ್ನು ಸರಿಯಾಗಿ ತಿಳಿಯಿರಿ. ಸಂಸಾರದಲ್ಲಿ ಸಲ್ಪ ಕಿರಿಕಿರಿಗಳಿದ್ದರೂ ಸಹ ತೊಂದರೆ ಏನಿಲ್ಲ. ಹೈನುಗಾರಿಕೆ ಮಾಡುವವರಿಗೆ ಅಭಿವೃದ್ಧಿ ಇರುತ್ತದೆ. ವಿದ್ಯಾರ್ಥಿಗಳಿಗೆ ಸೂಕ್ತ ಬೋಧಕರು ದೊರೆತು ಸಂತಸಪಡುವರು. 
ಕನ್ಯಾ
ಕೃಷಿಕರಿಗೆ ಉತ್ತಮ ಫಸಲು ದೊರೆಯುವ ಸಂದರ್ಭವಿದೆ. ಅವರಿಗೆ ಬೇಕಾದ ಹಣಕಾಸಿನಸೌಲಭ್ಯಗಳು ದೊರೆಯುತ್ತವೆ. ನ್ಯಾಯಾಂಗ ಇಲಾಖೆಯವರಿಗೆ ಉತ್ತಮ ಸ್ಥಾನಮಾನ ಸಿಗುವ ಸಾಧ್ಯತೆ ಇದೆ ಮತ್ತು ವರಮಾನ ಹೆಚ್ಚುತ್ತದೆ. ಅನಾರೋಗ್ಯದಿಂದ ವಿದ್ಯಾರ್ಥಿಗಳ ಸಾಧನೆಗೆ ಅಡ್ಡಿಯಾಗಬಹುದು. ನೀವು ಎಂದಿಗೂ ಇನ್ನೊಬ್ಬರನ್ನು ಹೋಲಿಕೆ ಮಾಡಿಕೊಂಡು ಚಿಂತಿಸುವುದು ಸರಿಯಲ್ಲ. ನಿಮಗೆ ಸಿಗುವ ಉತ್ತಮ ಅವಕಾಶಗಳನ್ನು ಬಳಸಿಕೊಂಡು ಅಭಿವೃದ್ಧಿಯ ಬಗ್ಗೆ ಚಿಂತನೆ ಮಾಡಿರಿ. ಕಾರ್ಯಕ್ಷೇತ್ರದಲ್ಲಿ ಶತ್ರುಗಳಹಾವಳಿ ಇದ್ದರೂ ತೊಂದರೆಯಾಗುವುದಿಲ್ಲ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ಅಲಂಕಾರಿಕ ವಸ್ತುಗಳನ್ನು ಸ್ವತಃ ತಯಾರಿಸಿ ಮಾರುವವರಿಗೆ ಉತ್ತಮ ಮಾರುಕಟ್ಟೆ ದೊರಕುತ್ತದೆ. ಸಂಗೀತ ಕಲಿಯುವ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯ ಹಾಗೂ ಸೌಕರ್ಯಗಳು ದೊರೆಯುತ್ತವೆ.
ತುಲಾ
ಹಲವಾರು ಅಭಿವೃದ್ಧಿಯ ಅವಕಾಶಗಳು ಎದುರಿಗಿದ್ದರೂ ಗೊಂದಲ ಮಾಡಿಕೊಂಡು ಬಂದಿದ್ದ  ಅವಕಾಶಗಳನ್ನು ಕೈ ಚೆಲ್ಲುವಿರಿ.  ಹಣದ ಒಳಹರಿವು ಸ್ವಲ್ಪಮಟ್ಟಿಗೆ ಉತ್ತಮಗೊಳ್ಳುತ್ತದೆ. ಭಾಷಣಕಾರರಿಗೆ ಸಂಗೀತಗಾರರಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ. ಮಧ್ಯವರ್ತಿಗಳ ಸಹಾಯದಿಂದ ವಿವಾಹದ ವಿಷಯದಲ್ಲಿ ಶುಭ ವಾರ್ತೆಕೇಳಿ ಬರುತ್ತದೆ. ಅಮೂಲ್ಯ ದಾಖಲೆಗಳ ಕಾಗದ ಪತ್ರಗಳನ್ನು ಜೋಪಾನವಾಗಿ ನೋಡಿಕೊಳ್ಳುವುದು ಒಳ್ಳೆಯದು. ನವೀನ ರೀತಿಯ ಕೃಷಿ ಮಾಡುವ ರೈತರಿಗೆ ಹೆಚ್ಚು ಸಹಾಯಧನ ದೊರೆಯುತ್ತದೆ. ಕೌಟುಂಬಿಕ ವಿಚಾರಗಳಲ್ಲಿ ಗೊಂದಲಗಳು ಮೂಡಬಹುದು, ಮೌನವೇ ಇದಕ್ಕೆ ಉತ್ತರ. ಮಕ್ಕಳಿಂದ ಅಗೌರವದ ನಡವಳಿಕೆಯನ್ನು ನೀವು ಕಾಣಬಹುದು. ಸರ್ಕಾರಿ ಕಚೇರಿಯ ಕೆಲಸ ಕಾರ್ಯಗಳಲ್ಲಿ ಸರಾಗತೆಯನ್ನು ಕಾಣಬಹುದು.
ವೃಶ್ಚಿಕ
ಮಕ್ಕಳ ಮೇಲಿದ್ದ ಮುನಿಸು ಕರಗುತ್ತದೆ ಹಾಗೂ ಅವರ ಮೇಲೆ ಅಭಿಮಾನ ಹೆಚ್ಚುತ್ತದೆ. ಕೋರ್ಟಿನಲ್ಲಿರುವ ವ್ಯಾಜ್ಯಗಳು ಮಾತುಕತೆಯ ಮೂಲಕ ಪರಿಹಾರವನ್ನು ಕಾಣುತ್ತದೆ. ಕೃಷಿ ಕಾರ್ಯಗಳು ಬಿಡುವಿಲ್ಲದೆ ಸಾಗುತ್ತವೆ. ಈ ಹಿಂದೆ ಅಪೇಕ್ಷಿಸಿದ್ದ ಸಾಲಗಳು ಈಗ ಸಿಗುತ್ತವೆ. ಸರ್ಕಾರಿ ಕಚೇರಿಗಳ ಕೆಲಸ ಕಾರ್ಯಗಳು ನಿಧಾನವಾಗಿ ನಡೆಯುತ್ತವೆ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ ಹಾಗಾಗಿ ಖರ್ಚು ಕಡಿಮೆ ಮಾಡುವುದು ಬಹಳ ಉತ್ತಮ. ಸ್ತ್ರೀಯರೊಡನೆ ಹಣದ ವ್ಯವಹಾರ ಮಾಡುವುದು ನಷ್ಟಕ್ಕೆ ಕಾರಣವಾಗಬಹುದು. ತಂದೆಯಿಂದ ಸ್ವಲ್ಪ ಮಟ್ಟಿನ ಸಹಾಯವನ್ನು ನಿರೀಕ್ಷೆ ಮಾಡಬಹುದು. ವೃತ್ತಿಯಲ್ಲಿ ಸಾಕಷ್ಟು ಗೊಂದಲಗಳು ಬರುವ ಸಾಧ್ಯತೆ ಇದೆ. ವ್ಯಾಪಾರ ವ್ಯವಹಾರದಲ್ಲಿ ಲಾಭ ಕಡಿಮೆಯಾಗಬಹುದು. ಪುಣ್ಯಕ್ಷೇತ್ರದ ದರ್ಶನವನ್ನು ಮಾಡುವಿರಿ.
ಧನು
ಹೊಸ ರೀತಿಯ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಇದು ಸಕಾಲ. ಪಾಲುದಾರಿಕೆ ವ್ಯವಹಾರಗಳಲ್ಲಿ ಸ್ವಲ್ಪ ಮಟ್ಟಿನ ಲಾಭ ದೊರೆಯುತ್ತದೆ. ಕಾನೂನು ಪಂಡಿತರಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ ದೊರೆಯುತ್ತದೆ. ಆಸ್ತಿ ಕೊಳ್ಳುವ ವಿಚಾರದಲ್ಲಿ ಪುನಃ  ಪರಿಶೀಲನೆ ಮಾಡುವುದು ಬಹಳ ಉತ್ತಮ. ಆಧ್ಯಾತ್ಮಿಕ ವಿಚಾರಗಳಲ್ಲಿ ಹೆಚ್ಚು ಆಸಕ್ತಿ ಮೂಡುತ್ತದೆ. ಪುಸ್ತಕ ಪ್ರಕಾಶನ ಮಾಡುವವರಿಗೆ ಉತ್ತಮ ಪುಸ್ತಕ ವನ್ನು ಪ್ರಕಾಶನ ಮಾಡುವ ಯೋಗವಿದೆ. ಸರ್ಕಾರಿ ಕಚೇರಿಕೆಲಸಗಳಲ್ಲಿ  ಶೀಘ್ರಗತಿಯನ್ನು ಕಾಣಬಹುದು. ಕೆಲವರ ನಿಂತಿದ್ದ ರಾಜಕೀಯ ಚಟುವಟಿಕೆಗಳು ಈಗ ಗರಿಗೆದರುತ್ತವೆ ಹಾಗೂ ಪ್ರಾಮುಖ್ಯತೆ ಸಹದೊರೆಯುತ್ತದೆ. ಕೃಷಿಯಿಂದ ಹೆಚ್ಚಿನ ಆದಾಯವನ್ನು ನಿರೀಕ್ಷೆ ಮಾಡಬಹುದು. ಧನ ಆದಾಯವು ಸಾಮಾನ್ಯ ಗತಿಯಲ್ಲಿ ಇರುತ್ತದೆ. 
ಮಕರ
ಅಭಿವೃದ್ಧಿಯಲ್ಲಿ ಕೆಲವು ಅಡೆ-ತಡೆಗಳು ಬಂದರೂ ಸಹ ಧೈರ್ಯವಾಗಿ ಮುನ್ನುಗ್ಗುವಿರಿ. ನಿಮ್ಮ ತೀರ ಪರಿಚಿತರಿಂದ ವಂಚನೆಯ ಪ್ರಕರಣಗಳು ಆಗುವ ಸಾಧ್ಯತೆ ಇದೆ,ಎಚ್ಚರವಹಿಸಿರಿ. ಸಂದರ್ಭಕ್ಕೆ ಅನುಗುಣವಾಗಿ ನಡೆದುಕೊಳ್ಳುವ, ಪಾಠವನ್ನು ಈ ಸಮಾಜವೇ ನಿಮಗೆ ಕಲಿಸುತ್ತದೆ. ದೈನಂದಿಕ ವ್ಯವಹಾರಗಳಲ್ಲಿ ಖರ್ಚು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ಕಾರ್ಮಿಕ ವರ್ಗದವರಿಗೆ ಸೌಲಭ್ಯಗಳು ಹೆಚ್ಚಾಗುತ್ತವೆ. ನಿಮ್ಮ ಕೌಟುಂಬಿಕ ವಲಯಗಳಲ್ಲಿ ನಿಮ್ಮ ಬಗ್ಗೆ ಗೌರವ ಹೆಚ್ಚುತ್ತದೆ. ಹಣದ  ಒಳಹರಿವು  ಮಂದಗತಿಯಲ್ಲಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರಿಗೆ ಅನುಕೂಲವಾಗಲಿದೆ. ದಿನಸಿ ವ್ಯಾಪಾರಿಗಳಿಗೆ ಹೆಚ್ಚು ವ್ಯಾಪಾರ ನಡೆದು ಆದಾಯ ವೃದ್ಧಿಸುತ್ತದೆ. ವೃತ್ತಿ ಬದಲಾವಣೆ ಮಾಡುವುದಕ್ಕಿಂತ ಮುಂಚೆ ಅದರ ಬಗ್ಗೆ ಸರಿಯಾಗಿ ತಿಳಿಯಿರಿ.
ಕುಂಭ
ನಿರುದ್ಯೋಗಿಗಳು ಸಿಕ್ಕ ಕೆಲಸವನ್ನು ಮಾಡುವುದು ಉತ್ತಮ. ರಾಜಕೀಯ ವ್ಯಕ್ತಿಗಳಿಗೆ ಸೂಕ್ತ ಸ್ಥಾನ ದೊರೆಯುತ್ತದೆ. ಕಟ್ಟಡ ನಿರ್ಮಾಣಕಾರರಿಗೆ ಹೊಸ ಗುತ್ತಿಗೆಗಳು ದೊರೆಯುತ್ತವೆ. ರಿಯಲ್ ಎಸ್ಟೇಟ್ ಉದ್ಯಮದವರಿಗೆ ಆದಾಯ ಹೆಚ್ಚುವ ಸಾಧ್ಯತೆ ಇದೆ. ನಿಮಗೆ ಎದುರಾಗುವ ಸಮಸ್ಯೆಗಳಿಗೆ ಸಂಬಂಧಿಸಿದ ವ್ಯಕ್ತಿಯೋಡನೆ ಮಾತನಾಡುವುದು ಒಳ್ಳೆಯದು. ಶೇರು ಮಾರುಕಟ್ಟೆಯ ವ್ಯವಹಾರ ಅಷ್ಟು ಒಳ್ಳೆಯದಲ್ಲ.  ಚಿಕ್ಕ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರಿ. ಅಧಿಕಾರಿಗಳು ಬಂದ ಅವಕಾಶ ಗಳನ್ನು ಜಾನ್ಮಯಿಂದ ಉಪಯೋಗಿಸಿ ಉನ್ನತ ಸ್ಥಾನ ಪಡೆಯುವುದು ಒಳ್ಳೆಯದು. ಯುವಕರ ಒಳಮರ್ಮಗಳು ಹೊರ ಜಗತ್ತಿಗೆ ಬಯಲಾಗುವ ಸಾಧ್ಯತೆ ಇದೆ. ಉದ್ದಿಮೆಗಳು ಉದ್ದಿಮೆದಾರರು ಮಂದಗತೆಯಲ್ಲಿ ನಡೆಯುತ್ತಿರುವ ಕೆಲಸಗಳನ್ನು ಕೆಲಸಗಾರರ ಮೇಲೆ ಒತ್ತಡಹಾಕಿ ಶೀಘ್ರವಾಗಿ ಮುಗಿಸುವುದು ಒಳ್ಳೆಯದು.
ಮೀನ
ತಾಯಿಯಿಂದ ಕೋಪದ ನುಡಿಗಳನ್ನು ಕೇಳ ಬೇಕಾಗಬಹುದು. ಚಿನ್ನ, ಬೆಳ್ಳಿ ವ್ಯಾಪಾರಿಗಳಿಗೆ ಹೆಚ್ಚು ವ್ಯಾಪಾರವಾಗಿ ಲಾಭ ಹೆಚ್ಚುವುದು. ಹೊರದೇಶದಲ್ಲಿರುವ ಮಕ್ಕಳು ನಿಮ್ಮನ್ನು ಕಾಣಲು ಬರುವ ಸಾಧ್ಯತೆ ಇದೆ. ವಿದೇಶಿ ಪ್ರವಾಸ ಮಾಡಬೇಕೆನ್ನುವವರಿಗೆ ಈಗ ಸೂಕ್ತ ಅವಕಾಶಗಳು ದೊರೆಯುತ್ತವೆ. ಕುಟುಂಬದಲ್ಲಿ  ಕಾವೇರಿದ ಮಾತುಗಳು ಆಗಬಹುದು. ಉದ್ಯೋಗದಲ್ಲಿ ಮುಂಬಡ್ತಿಯ ವಿಚಾರವಾಗಿ ನಡೆಸಿದ ಹೋರಾಟಗಳು ನಿಷ್ಪಲವಾಗುವವು. ರಾಸಾಯನಿಕ ವಸ್ತುಗಳನ್ನು ಆಮದು ಅಥವಾ ರಫ್ತು ಮಾಡುವವರಿಗೆ ವ್ಯವಹಾರ ಹೆಚ್ಚುತ್ತದೆ. ಸಣ್ಣ ಪುಟ್ಟ ವಿಚಾರಗಳಿಗಾಗಿ ಪ್ರೇಮಿಗಳು ದೂರ ಆಗುವ ಸಾಧ್ಯತೆ ಇದೆ ಎಚ್ಚರವಹಿಸಿರಿ. ಎಲೆಕ್ಟ್ರಾನಿಕ್ ವಸ್ತುಗಳನ್ನು ರಿಪೇರಿ ಮಾಡುವವರಿಗೆ ಆದಾಯ ಹೆಚ್ಚುತ್ತದೆ.  ಧನ ಆದಾಯವು ನಿರೀಕ್ಷಿತ ಮಟ್ಟದಲ್ಲಿ ಇರುತ್ತದೆ.