ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
10/03/2024 - 16/03/2024
ವಾರ ಭವಿಷ್ಯ: ಕೆಲಸ ಕಾರ್ಯಗಳಲ್ಲಿ ಅಡೆ ತಡೆಗಳನ್ನು ಕಾಣುವಿರಿ
Published 10 ಮಾರ್ಚ್ 2024, 0:30 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಸುದ್ದಿಗೆ ಬರಲು ಸಾಕಷ್ಟು ಪ್ರಯತ್ನ ಮಾಡುವಿರಿ. ಹಣದ ಒಳಹರಿವು ನಿಮ್ಮಅಗತ್ಯವನ್ನು ಪೂರೈಸುತ್ತದೆ. ನಿಮ್ಮ ನಡವಳಿಕೆಯಿಂದ ಬಂಧುಗಳಲ್ಲಿ ದೂರ ಉಳಿ ಯುವಿರಿ. ಹೈನುಗಾರಿಕೆ ಮಾಡುವವರಿಗೆ ಸಾಮಾನ್ಯ ಆದಾಯವಿರುತ್ತದೆ. ಅಪೇಕ್ಷಿಸಿದ ಆಸ್ತಿ ಕೈ ತಪ್ಪುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಮಧ್ಯಮ ಯಶಸ್ಸು ಇರುತ್ತದೆ. ಹೊಟ್ಟೆಯಲ್ಲಿ ತೊಂದರೆ ಅಥವಾ ಗಡ್ಡೆಗಳ ಸಮಸ್ಯೆ ಆಗಬಹುದು. ಸಂಗಾತಿಯ ಕೃಷಿಜಮೀನಿನಲ್ಲಿ ಆದಾಯ ಹೆಚ್ಚುತ್ತದೆ.ವೃತ್ತಿಯಲ್ಲಿ ಇರಿಸು ಮುರುಸು ಆಗುವ ಸಂದರ್ಭಗಳು ಎದುರಾಗುತ್ತವೆ. ಸಂಗಾತಿಗೆ ಅನಿರೀಕ್ಷಿತ ಧನಸಹಾಯ ಒದಗುವ ಸಾಧ್ಯತೆ ಇದೆ. ಸರ್ಕಾರಿ ಗುತ್ತಿಗೆ ವ್ಯವಹಾರಗಳಲ್ಲಿ ಹಿನ್ನಡೆಯನ್ನು ಕಾಣಬಹುದು. ಅದಿರು ಉದ್ಯಮಗಳಿಗೆ ಸ್ವಲ್ಪ ಹಿನ್ನಡೆಯಾಗುವ ಸಾಧ್ಯತೆ ಇದೆ. ವಿದೇಶದಲ್ಲಿರುವವರಿಗೆ ಹೆಚ್ಚಿನ ಅನುಕೂಲಗಳು ದೊರೆಯುತ್ತದೆ.
ವೃಷಭ
ಕಲೆಯನ್ನು ಆದರ್ಶವಾಗಿ ತೆಗೆದುಕೊಳ್ಳಲು ಪ್ರಯತ್ನಿಸುವಿರಿ ಕಲಾವಿದರುಗಳಿಗೆ ಹೆಚ್ಚು ಮಹತ್ವ ಬರುತ್ತದೆ. ಧನದಾಯವು ಮಧ್ಯಮ ಗತಿಯಲ್ಲಿರುತ್ತದೆ. ಸಮೂಹದಲ್ಲಿ ಮಾತನಾಡುವಾಗ ಬಹಳ ಜಾಣತನ ದಿಂದ ಮಾತನಾಡಿ ಜನರ ಮನ ಗೆಲ್ಲುವಿರಿ. ಕುಟುಂಬ ದಲ್ಲಿ ತಾಯಿಯ ಸಹಕಾರ ನಿಮಗೆ ದೊರೆಯುತ್ತದೆ. ಸರ್ಕಾರಿ ಸಂಸ್ಥೆಗಳಲ್ಲಿರುವವರಿಗೆ ನಿವೇಶನ ದೊರೆ ಯುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಅಂತಹ ಯಶಸ್ಸು ಇರುವುದಿಲ್ಲ. ವೇದ ಅಥವಾ ಮಂತ್ರೋಪಾಸಕರಿಗೆ ನೆಚ್ಚಿನ ಅನುಕೂಲ ವಿರುತ್ತದೆ. ವೃತ್ತಿಯಲ್ಲಿ ಶತ್ರುಗಳು ಹೆಚ್ಚಾಗುವರು. ಸಂಗಾತಿಯು ಕುಟುಂಬದಲ್ಲಿ ಅಧಿಕಾರ ಸ್ಥಾಪಿಸಲು ಪ್ರಯತ್ನಪಡು ವರು.ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿ ರುವವರಿಗೆ ಸರ್ಕಾರದಿಂದ ಎಚ್ಚರಿಕೆ ದೊರೆಯುವ ಸಂದರ್ಭವಿದೆ ಹಾಗೂ ಧನಸಹಾಯ ಕೂಡ ದೊರೆಯುತ್ತದೆ.
ಮಿಥುನ
ನಿಮ್ಮ ಮಾತು ನಡವಳಿಕೆಯಲ್ಲಿ ಹೆಚ್ಚು ವ್ಯವಹಾರಿಕತೆಯನ್ನು ಕಾಣಬಹುದು. ಧನದಾಯವು ಮಧ್ಯಮ ಗತಿಯಲ್ಲಿರುತ್ತದೆ. ಬಂಧುಗಳಿಂದ ಮತ್ತು ಕೆಲವು ಮಿತ್ರರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಅಡೆ ತಡೆಗಳನ್ನು ಕಾಣುವಿರಿ. ವಿದೇಶಿ ಸಂಸ್ಥೆಗಳಿಗೆ ಭೂಮಿ ಯನ್ನು ಮಾರುವ ಮತ್ತು ಮಾರಾಟ ಮಾಡಿಸುವ ಮಧ್ಯವರ್ತಿಗಳಿಗೆ ಹೆಚ್ಚಿನ ಲಾಭವಿರುತ್ತದೆ. ವಿದ್ಯಾರ್ಥಿ ಗಳಿಗೆ ಅಧ್ಯಯನದಲ್ಲಿ ಮಧ್ಯಮಫಲಿತಾಂಶವಿರುತ್ತದೆ. ಕೃಷಿಯಿಂದ ಆದಾಯ ಕಡಿಮೆಯಾಗಬಹುದು. ಉಷ್ಣ ಪ್ರಕೃತಿ ಇರುವವರಿಗೆ ಉಷ್ಣ ಸಂಬಂಧಿ ಕಾಯಿಲೆಗಳು ಬರವ ಸಾಧ್ಯತೆಗಳಿವೆ. ಸಂಗಾತಿಯ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು.ಕೃಷಿ ಭೂಮಿ ಸಂಬಂಧಿತ ವ್ಯಾಜ್ಯಗಳು ತಲೆದೋರಬಹುದು. ಸರ್ಕಾರಿ ಸಂಸ್ಥೆಗ ಳಿಗೆ ಕಚ್ಚಾ ವಸ್ತುಗಳನ್ನು ಪೂರೈಸುವವರಿಗೆ ಹಣ ಬರು ವುದು ನಿಧಾನವಾಗಬಹುದು. ತಂದೆಮಕ್ಕಳ ನಡುವೆ ಹೊಂದಾಣಿಕೆ ಕಡಿಮೆ ಯಾಗುವ ಸಾಧ್ಯತೆಗಳಿವೆ.
ಕರ್ಕಾಟಕ
ನಿಮ್ಮಲ್ಲಿರುವ ಸೌಮ್ಯತ್ವ ಕಡಿಮೆಯಾದಂತೆ ಅನಿಸುವುದು. ಮಾತಿನಲ್ಲಿ ಬಿಗಿ ಮತ್ತು ಅಧಿಕಾರತೆ ಯನ್ನು ಕಾಣಬಹುದು. ಧನ ಆದಾಯವು ಸಾಮಾನ್ಯ ಗತಿಯಲ್ಲಿರುತ್ತದೆ. ನಡವಳಿಕೆಯಲ್ಲಿ ಹೆಚ್ಚು ದೈವಿಕತೆ ಯನ್ನು ಕಾಣಬಹುದು.ಭೂಮಿಯನ್ನು ಕೊಳ್ಳಲುಸೂಕ್ತ ಧನಸಹಾಯ ಸಿಗುವ ಸಾಧ್ಯತೆಗಳಿವೆ. ಆದಾಯವನ್ನು ಸರಿತೂಗಿಸದಿದ್ದಲ್ಲಿ ಆರ್ಥಿಕ ಏರುಪೇರುಆಗಬಹುದು. ಸಂಗಾತಿಯಿಂದ ಸಾಕಷ್ಟು ಸಹಕಾರ ಸಹಾಯಗಳು ದೊರೆಯುತ್ತವೆ. ಬಂಧುಗಳು ನಿಮ್ಮ ಕೆಲಸ ಕಾರ್ಯ ಗಳಿಗೆ ಸಹಕಾರ ನೀಡುವವರು.ರಕ್ತ ಪರೀಕ್ಷೆ ಮಾಡುವ ವೈದ್ಯರಿಗೆ ಬೇಡಿಕೆ ಹೆಚ್ಚಾಗಬಹುದು. ವೃತ್ತಿಯಲ್ಲಿ ಸ್ಥಾನ ಮಾನ ಹೆಚ್ಚಾಗಿ ವೇತನ ಹೆಚ್ಚುತ್ತದೆ. ಬೆಳ್ಳಿಯ ಆಭರಣ ಗಳು ಮತ್ತು ಒಡವೆಗಳನ್ನು ತಯಾರಿಸುವವರಿಗೆ ಬೇಡಿಕೆ ಹೆಚ್ಚಾಗುತ್ತದೆ. ಪಾದಗಳಲ್ಲಿ ಸ್ವಲ್ಪ ನೋವು ಕಾಣಿಸಬಹುದು.ಗುರುತಿನವರ ಒತ್ತಾಸೆಯಿಂದ ವಿದೇಶದಲ್ಲಿ ಉದ್ಯೋಗ ಅವಕಾಶದೊರೆಯಬಹುದು.
ಸಿಂಹ
ಮನಸ್ಸಿನಲ್ಲಿ ಒಂದು ರೀತಿ ಪ್ರಶಾಂತತೆ ಇರುತ್ತದೆ. ಮಾತಿನಲ್ಲಿ ಧಾರ್ಮಿಕತೆ ಇರುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ನಿಮ್ಮ ನಡವಳಿಕೆಯಲ್ಲಿ ಸಂಗಾತಿಯ ಛಾಯೆಯನ್ನು ಕಾಣಬಹುದು. ನೀವು ಕೊಳ್ಳುವ ಆಸ್ತಿಬೆಲೆ ಬಹಳ ಹೆಚ್ಚಾಗುವಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ಇರುತ್ತದೆ. ಕೆಲವ ರಿಗೆ ಕಾಯಿಲೆಗಳುಉಲ್ಬಣವಾಗಿ ಶಸ್ತ್ರಚಿಕಿತ್ಸೆ ಹಂತಕ್ಕೆ ಬರಬಹುದು. ಸಂಗಾತಿಯ ಹಣಉಳಿಸುವಿಕೆ ನಿಮಗೆ ಬೇಸರ ತಂದರು ಸಂಸಾರಕ್ಕೆ ಅದು ಅತ್ಯಗತ್ಯವಾಗಿರು ತ್ತದೆ. ಸಹೋದ್ಯೋಗಿಗಳಿಂದ ವೈಯಕ್ತಿಕ ಸಹಾಯ ಮತ್ತು ಧನಸಹಾಯ ದೊರೆಯುವ ಸಾಧ್ಯತೆಗಳಿವೆ. ವ್ಯಾಪಾರ ವ್ಯವಹಾರಗಳಲ್ಲಿ ಲಾಭ ಸಲ್ಪಕಡಿಮೆಯಾಗ ಬಹುದು. ತಂದೆಯಿಂದ ನಿಮ್ಮ ವ್ಯವಹಾರಗಳಿಗೆ ಬೇಕಾದ ಧನಸಹಾಯ ದೊರೆಯುತ್ತದೆ. ವೃತ್ತಿಯಲ್ಲಿ ಚಿಂತೆ ಕಂಡುಬರುತ್ತದೆ. ಕೆಲವು ಹಂಗಾಮಿ ನೌಕರರಿಗೆ ಖಾಯಂ ನೌಕರಿ ದೊರೆಯುವ ಸಂದರ್ಭವಿದೆ.
ಕನ್ಯಾ
ಸೋತು ಹೋದಂತೆ ನಿಮ್ಮ ಮನಸ್ಸಿನಲ್ಲಿ ಭಾವನೆ ಉಂಟಾಗುತ್ತದೆ. ಆದರೆ ಜೀವನ ನಡೆಸುವ ಕಲೆ ಮತ್ತು ಶಕ್ತಿ ಇದ್ದೇಇರುತ್ತದೆ. ಧನದಾಯವುಮಂದ ಗತಿಯಲ್ಲಿರುತ್ತದೆ. ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಯಶಸ್ಸು ಇರುತ್ತದೆ. ಕ್ರೀಡಾ ತರಬೇತಿ ಪಡೆ ಯುತ್ತಿರುವವರಿಗೆ ಹೆಚ್ಚಿನ ಫಲಿತಾಂಶವಿರುತ್ತದೆ.ನಿಮ್ಮ ನಡವಳಿಕೆಯಲ್ಲಿ ಹೆಚ್ಚು ಉಗ್ರತ್ವವಿರುತ್ತದೆ. ಸ್ಥಿರಾಸ್ತಿ ಯನ್ನು ಕೊಳ್ಳಲು ಕೂಡಿಟ್ಟ ಹಣ ಬೇರೆ ಉದ್ದೇಶಕ್ಕೆ ಬಳಕೆಯಾಗುತ್ತದೆ. ಹೊಟ್ಟೆಯಲ್ಲಿ ಆಹಾರ ವ್ಯತ್ಯಾಸ ದಿಂದ ಮತ್ತು ಉಷ್ಣ ವ್ಯತ್ಯಾಸದಿಂದ ಅನಾರೋಗ್ಯ ತಲೆದೋರುವ ಸಾಧ್ಯತೆ ಇದೆ. ವಿದೇಶದಲ್ಲಿರುವ ಸಂಗಾತಿ ಬುದ್ದಿವಂತಿಕೆಯಿಂದ ಧನಸಂಪಾದನೆ ಮಾಡುವರು. ಕಬ್ಬಿಣದಿಂದ ಅಲಂಕಾರಿಕವಸ್ತುಗಳನ್ನು ತಯಾರಿಸುವವರಿಗೆ ಲಾಭವಿರುತ್ತದೆ. ಸರ್ಕಾರಿ ಕಚೇ ರಿಯ ಕಾರ್ಯಗಳು ನಿಧಾನವಾದರೂ ಆಗುತ್ತದೆ. ಸರ್ಕಾರಿ ಕೆಲಸ ಕಾರ್ಯಗಳು ನಿಧಾನಗತಿಯಿದ್ದರೂ ಕೆಲಸಗಳು ಆಗುತ್ತದೆ.
ತುಲಾ
ನಿಮ್ಮ ವ್ಯಕ್ತಿತ್ವವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಪಡುವಿರಿ. ನಿಮ್ಮ ಇಚ್ಛೆಯ ಆಸ್ತಿಕೊಳ್ಳಲು ಧನಸಹಾಯ ಒದಗಿ ಬರುತ್ತದೆ. ಹಣದ ಒಳಹರಿವು ಮಧ್ಯಮ ಗತಿಯಲ್ಲಿರುತ್ತದೆ. ನಿಮ್ಮ ನಡವಳಿಕೆಯಿಂದ ಜನರನ್ನು ಗೆಲ್ಲುವ ಪ್ರಯತ್ನ ಮಾಡುವಿರಿ. ಕ್ರೀಡಾಪಟು ಗಳಿಗೆ ಉತ್ತಮಪ್ರೋತ್ಸಾಹ ದೊರೆಯುತ್ತದೆ.ವಿದ್ಯಾರ್ಥಿ ಗಳಿಗೆ ಅವರ ಅಧ್ಯಯನದಲ್ಲಿ ಮಧ್ಯಮಗತಿಯ ಫಲಿ ತಾಂಶವಿರುತ್ತದೆ. ನರ ದೌರ್ಬಲ್ಯ ಇರುವವರು ಸ್ವಲ್ಪ ಎಚ್ಚರ ವಹಿಸುವುದು ಒಳ್ಳೆಯದು. ಸಂಗಾತಿಯಿಂದ ಧನಸಹಾಯ ದೊರೆತರೂ ಪುನಃ ವಾಪಸ್ಸು ಕೊಡ ಬೇಕಾಗುತ್ತದೆ. ವೃತ್ತಿಯಲ್ಲಿ ಹಿತಶತ್ರುಗಳ ಕಾಟದಿಂದ ನಿಮ್ಮ ಕಾರ್ಯಗಳು ಸಂಪೂರ್ಣವಾಗ ದಿರಬಹುದು. ಸರ್ಕಾರಿ ಸಂಸ್ಥೆಗಳಿಗೆ ಕಚ್ಚಾ ಮಾಲನ್ನು ಪೂರೈಸುವ ವ್ಯಕ್ತಿಗಳಿಗೆ ಹೆಚ್ಚು ಅವಕಾಶಗಳು ದೊರೆತು ಆದಾಯ ಹೆಚ್ಚುತ್ತದೆ. ದೇವರ ಹರಕೆ ತೀರಿಸಲು ಕುಟುಂಬ ಸಮೇತರಾಗಿ ಪ್ರಯಾಣ ಬೆಳೆಸುವಿರಿ.
ವೃಶ್ಚಿಕ
ಚುರುಕಾಗಿ ಕೆಲಸ ಮಾಡುವಿರಿ. ನಿರ್ಧಾರಗಳು ಬಹಳ ದೃಢವಾಗಿರುತ್ತವೆ, ಇದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಅನುಕೂಲವಾಗುತ್ತದೆ. ಬಂಧುಗಳು ಅಥವಾ ಒಡಹುಟ್ಟಿದವರು ನಿಮ್ಮ ಕೆಲಸ ಕಾರ್ಯಗ ಳಿಗೆ ಸಹಕಾರ ನೀಡುವರು. ಕೃಷಿಯಿಂದ ಆದಾಯ ಇರುತ್ತದೆ. ಆಹಾರ ವಸ್ತುಗಳನ್ನು ಮಾರಾಟ ಮಾಡುವ ವರಿಗೆ ಆದಾಯ ಹೆಚ್ಚುವ ಸಾಧ್ಯತೆಗಳಿವೆ. ವ್ಯಾಪಾರ ವಿಷಯದಲ್ಲಿ ಅಧ್ಯಯನ ಮಾಡುತ್ತಿರುವವರಿಗೆ ಹೆಚ್ಚು ಅಭಿವೃದ್ಧಿ ಇರುತ್ತದೆ. ಧನದಾಯವು ಸ್ವಲ್ಪ ಕಡಿಮೆ ಇರುತ್ತದೆ. ಆಹಾರವ್ಯತ್ಯಾಸದ ಸಮಸ್ಯೆಗಳಿಂದ ಅನಾ ರೋಗ್ಯ ಉಂಟಾಗಬಹುದು. ಸಂಸಾರದಲ್ಲಿ ಸುಖ ವಿದ್ದರೂ ಸಹ ಒಂದುರೀತಿಯ ಮುಜುಗರ ಇರುತ್ತದೆ. ಪ್ರವಾಸಿಸಂಸ್ಥೆಗಳನ್ನು ನಡೆಸುವವರಿಗೆ ಹೆಚ್ಚುಮಾನ್ಯತೆ ದೊರೆತು ಆದಾಯ ಹೆಚ್ಚುತ್ತದೆ. ಹಿರಿಯರ ನಡುವೆ ಅಂತರ ಹೆಚ್ಚುಬಹುದು.
ಧನು
ಉತ್ತಮ ಗೌರವದ ಜೊತೆಗೆ ಸಮಾಜದಲ್ಲಿ ಹೆಚ್ಚು ಜನರ ಪರಿಚಯ ಆಗುತ್ತದೆ. ಕೃಷಿಯಿಂದ ಹೆಚ್ಚು ಆದಾಯ ಬರುವ ಸಾಧ್ಯತೆಗಳಿವೆ. ಯಾರೊಂದಿಗೂ ಕಠಿಣ ಮಾತುಗಳು ಬೇಡ. ನಿಮ್ಮ ನಡವಳಿಕೆ ವಿರುದ್ಧ ಟೀಕೆಗಳು ಬಂದಲ್ಲಿ ಅದಕ್ಕೆ ಉತ್ತರ ಕೊಡುವುದು ಉತ್ತಮ. ವೈದ್ಯಕೀಯ ಉಪಕರಣಗಳನ್ನು ತಯಾರಿಸಿ ಮಾರುವವರಿಗೆ ಆದಾಯಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ನಿರೀಕ್ಷಿತ ಯಶಸ್ಸು ದೊರೆಯುತ್ತದೆ. ಹಣಕಾಸಿನ ವಿಚಾರದಲ್ಲಿ ಹೆಚ್ಚು ಎಚ್ಚರವಾಗಿರುವುದು ಒಳ್ಳೆಯದು. ವಿದೇಶದಲ್ಲಿರುವ ತಮ್ಮ ಸಂಸಾರಗಳನ್ನು ಈಗ ಹೋಗಿ ಸೇರಿಕೊಳ್ಳಲು ಅನುಕೂಲಕರವಾಗಿದೆ. ಹಿರಿಯರ ಆಸ್ತಿಪಾಸ್ತಿಗಳಲ್ಲಿ ನಿಮಗೆ ಪಾಲುದೊರೆಯು ತ್ತದೆ. ಉದ್ಯೋಗದ ಸ್ಥಳದಲ್ಲಿ ನಿಮಗೆ ಗೌರವ ಹೆಚ್ಚು ತ್ತದೆ. ಆಭರಣ ಮಾರಾಟಗಾರರಿಗೆ ಮತ್ತು ತಯಾರಕ ರಿಗೆ ಹೆಚ್ಚು ಲಾಭ ಇರುತ್ತದೆ.
ಮಕರ
ನಿಮ್ಮ ಶ್ರಮದಿಂದ ನೀವು ಉತ್ತಮ ಹೆಸರನ್ನು ಪಡೆಯುವಿರಿ. ಧನಾದಾಯದಲ್ಲಿ ಸ್ವಲ್ಪ ಏರಿಕೆಯನ್ನು ಕಾಣಬಹುದು. ವಿದೇಶದಲ್ಲಿ ವೈದ್ಯರಾಗಿರುವವರಿಗೆ ಉತ್ತಮ ಆದಾಯವಿರುತ್ತದೆ. ಸ್ಥಿರಾಸ್ತಿಯ ವ್ಯಾಪಾರ ಮಾಡುವವರಿಗೆ ಆದಾಯ ಹೆಚ್ಚುವ ಸಾಧ್ಯತೆಗಳಿವೆ. ಮಕ್ಕಳಿಂದ ನಿಮಗೆ ಧನಸಹಾಯ ಬರುವ ಸಾಧ್ಯತೆ ಇದೆ. ಅತಿಯಾದ ಔಷಧಿ ಸೇವನೆ ಅನಾರೋಗ್ಯಕ್ಕೆ ಕಾರಣವಾಗಬಹುದು. ಸಂಗಾತಿಯ ಸಲಹೆಗಳಿಂದ ಆದಾಯ ಬರುವ ಸಾಧ್ಯತೆಗಳಿವೆ. ಆಗದಿದ್ದ ಕೆಲವು ಸರ್ಕಾರಿಕೆಲಸಗಳು ಅನಿದಿಕ್ಷಿತವಾಗಿ ಆಗುತ್ತದೆ.ಧರ್ಮ ಕಾರ್ಯಗಳಿಗೆ ದೇಣಿಗೆ ಕೊಡುವಿರಿ. ಉದ್ಯೋಗದಲ್ಲಿ ಯಾವುದೇ ಏರಿಳಿತ ಇರುವುದಿಲ್ಲ. ಕೃಷಿಕರಿಗೆ ಲಾಭ ಬರುವ ಸೂಚನೆಯಿದೆ. ಹೆಂಗಸರ ಅಲಂಕಾರಿಕ ವಸ್ತು ಗಳನ್ನು ತಯಾರಿಸುವವರಿಗೆಸ್ವಲ್ಪಹಿನ್ನೆಡೆಆಗಬಹುದು. ಸ್ತ್ರೀಯರ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವವರಿಗೆ ಹೆಚ್ಚು ಲಾಭವಿದೆ.
ಕುಂಭ
ಹಿರಿಯರ ದೃಢನಿರ್ಧಾರಗಳು ಸಮಾಜಕ್ಕೆ ಒಳಿತಾಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಆದಾಯ ಇರುತ್ತದೆ. ನೀವು ಸೌಮ್ಯವಾಗಿ ಮಾತನಾಡಿದರು ಸಹ ಅದರ ತಿರುಳು ತಲುಪಬೇಕಾದವರಿಗೆ ತಲುಪುತ್ತದೆ. ಧರ್ಮ ಕಾರ್ಯಗಳಲ್ಲಿ ಹೆಚ್ಚಿನ ಶ್ರದ್ಧೆ ಮೂಡುತ್ತದೆ. ಸರ್ಕಾರಿಸಂಸ್ಥೆಗಳಿಗೆ ಭೂಮಿಯನ್ನು ಒದಗಿಸುವ ವ್ಯಕ್ತಿ ಗಳಿಗೆ ಹೆಚ್ಚಿನ ಆದಾಯವಿರುತ್ತದೆ. ವಾರ್ತಾ ವಾಚಕ ರಿಗೆ ಮತ್ತು ಪತ್ರಿಕೋದ್ಯಮಗಳಿಗೆ ಹೆಚ್ಚು ಪ್ರಾಮುಖ್ಯತೆ ಮತ್ತು ಆದಾಯ ಇರುತ್ತದೆ. ಸಂಗಾತಿ ಮಾಡುವ ಸರ್ಕಾರಿ ಗುತ್ತಿಗೆ ಕೆಲಸಗಳಲ್ಲಿ ಆದಾಯವಿರುತ್ತದೆ. ಸರ್ಕಾರಿ ಮಟ್ಟದ ಕೆಲಸ ಕಾರ್ಯಗಳಲ್ಲಿ ನಿಧಾನ ಗತಿ ಇರುತ್ತದೆ. ಧರ್ಮಶ್ರದ್ದೇ ಇರುವವರಿಗೆ ಗೌರವ ದೊರೆ ಯುತ್ತದೆ. ಹಿರಿಯರಿಂದ ಒಡವೆ ವಸ್ತುಗಳು ನಿಮಗೆ ದೊರೆಯಬಹುದು. ಯುವಕರಿಗೆ ಉದ್ಯೋಗದಲ್ಲಿ ಹಿತ ಶತ್ರುಗಳು ಹೆಚ್ಚಾಗುವ ಸಾಧ್ಯತೆ ಇದೆ. ಸ್ತ್ರೀಯರು ನಡೆಸುವ ವ್ಯವಹಾರಗಳಲ್ಲಿ ಹೆಚ್ಚು ಲಾಭವಿರುತ್ತದೆ.
ಮೀನ
ಬುದ್ಧಿವಂತಿಕೆ ಮೈಗೂಡಿರುತ್ತದೆ. ಧನದಾಯವು ನಿಮ್ಮ ನಿರೀಕ್ಷೆಯಷ್ಟಿರುತ್ತದೆ. ಸಮಯಕ್ಕೆ ತಕ್ಕಂತೆ ಮಾತನಾಡಿ ಹಣ ವಸೂಲಿ ಮಾಡುವಿರಿ. ನಿಮ್ಮ ಕೆಲಸ ಕಾರ್ಯಗಳಿಗೆ ಸಂಗಾತಿಯಿಂದಲೇ ಸ್ವಲ್ಪ ಉಪೇಕ್ಷೆ ಬರಬಹುದು. ವ್ಯಾಪಾರ ವಹಿವಾಟುಗಳಲ್ಲಿ ಲಾಭ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶ ವಿರುತ್ತದೆ. ಅನಾರೋಗ್ಯ ಪೀಡಿತರ ಆರೋಗ್ಯದಲ್ಲಿ ಸುಧಾರಾಣಿಯನ್ನು ಕಾಣಬಹುದು. ಸಂಗಾತಿಯು ಮಾಡುವ ಧರ್ಮ ಆಚರಣೆ ನಿಮಗೆ ಕಸಿವಿಸಿ ಉಂಟು ಮಾಡುತ್ತದೆ. ಸಂಗಾತಿಯಿಂದ ಸಿಗುವ ಧನಸಹಾಯ ಕಡಿಮೆಯಾಗಬಹುದು. ಕಬ್ಬಿಣದ ವ್ಯಾಪಾರಿಗಳಿಗೆ ಮಧ್ಯಮ ಗತಿಯ ವ್ಯಾಪಾರವಿರುತ್ತದೆ. ಅನಿರೀಕ್ಷಿತ ಧನಾದಾಯವು ಬರುವ ಸಾಧ್ಯತೆ ಇದೆ.ಗುರುತು ಪರಿ ಚಯದವರಿಂದ ವೃತ್ತಿಯಲ್ಲಿ ಅನುಕೂಲಮಾಡಿಕೊಳ್ಳು ವಿರಿ. ವೃತ್ತಿಯಲ್ಲಿ ಹಿರಿಯ ಅಧಿಕಾರಿಗಳನ್ನು ಒಲೈಸಿ ದಲ್ಲಿ ಆದಾಯ ಹೆಚ್ಚುವ ಸಾಧ್ಯತೆ ಇದೆ.