ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
30/04/2023 - 06/05/2023
ವಾರ ಭವಿಷ್ಯ: 30-4-2023ರಿಂದ 06-5-2023ರವರೆಗೆ
Published 30 ಏಪ್ರಿಲ್ 2023, 3:19 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
( ಅಶ್ವಿನಿ ಭರಣಿ ಕೃತಿಕ 1) ಯಂತ್ರಗಳೊಂದಿಗೆ ಕೆಲಸ ಮಾಡುವವರು ಹೆಚ್ಚು ಎಚ್ಚರದಿಂದಿರಿ. ಬಂಧುಗಳ ಸಂಬಂಧವನ್ನು ಗಟ್ಟಿ ಮಾಡಿಕೊಳ್ಳುವುದು ನಿಮಗೆ ಒಳಿತು. ವೃತ್ತಿಯಲ್ಲಿ ಅನಿರೀಕ್ಷಿತ ದೂರ ಪ್ರಯಾಣ ಒದಗಬಹುದು. ಕಾರ್ಯಗಳಲ್ಲಿ ಇದ್ದ ಅಡಚಣೆಯನ್ನು ಆಲೋಚಿಸಿ ನಿವಾರಣೆ ಮಾಡಿಕೊಳ್ಳಿರಿ. ಪ್ರಾಚೀನವಸ್ತುಗಳ ಸಂಗ್ರಹಕಾರರಿಗೆ ಬಯಸುತ್ತಿದ್ದ ವಸ್ತು ದೊರೆತು ಸಂತಸವಾಗುತ್ತದೆ. ಬಾಕಿ ಇದ್ದ ವ್ಯಾಜ್ಯಗಳು ಈಗ ಗರಿಗೆದರಬಹುದು. ಧನ ಆದಾಯವು ತೃಪ್ತಿಕರವಾಗಿರುತ್ತದೆ. ವಿದ್ಯಾರ್ಥಿಗಳಿಗೆಉತ್ತಮ ಯಶಸ್ಸು ದೊರೆಯುವ ಕಾಲ. ಉನ್ನತ ವಿದ್ಯೆ ಓದುತ್ತಿರುವವರಿಗೆ ಸೂಕ್ತ ಸೌಲಭ್ಯಗಳು ದೊರೆಯುತ್ತವೆ. ನರ ದೌರ್ಬಲ್ಯ ಇರುವವರು ಎಚ್ಚರದಿಂದಿರಿ. ಸಂಗಾತಿಯೊಂದಿಗೆ ಸ್ವಲ್ಪ ಮಟ್ಟಿಗೆ ಕಾವೇರಿದ ಮಾತುಗಳಾಗಬಹುದು. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಶೀಘ್ರಗತಿಯನ್ನು ಕಾಣಬಹುದು.
ವೃಷಭ
(ಕೃತಿಕಾ2 3 4 ರೋಹಿಣಿ ಮೃಗಶಿರಾ1 2) ತರಕಾರಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಅಂಶ ದೊರೆಯುತ್ತದೆ. ಜೀವನಕ್ರಮದಲ್ಲಿ ಮಕ್ಕಳಿಗಾಗಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳುವಿರಿ. ಹಿರಿಯರಿಗೆ ಬಹಳ ಕಾಲದಿಂದ ಅನುಭವಿಸುತ್ತಿದ್ದ ವ್ಯಾಧಿಯೊಂದು ಈಗ ತಹಬಂದಿಗೆ ಬರುತ್ತದೆ. ದಳ್ಳಾಳಿ ವ್ಯಾಪಾರವನ್ನು ಮಾಡುವವರಿಗೆ ಹೆಚ್ಚಿನ ಕಮಿಷನ್ ದೊರೆಯುತ್ತದೆ. ಕೃಷಿಯಿಂದ ಹೆಚ್ಚು ಧನ ಸಂಪಾದನೆ ಇದೆ. ಕೃಷಿಕರಿಗೆ ಬೇಕಾದ ಸಾಲಸೌಲಭ್ಯಗಳು ದೊರೆಯುತ್ತವೆ. ವಾಣಿಜ್ಯ ಇಲಾಖೆಯ ಅಧಿಕಾರಿಗಳಿಗೆ ಬಿಡುವಿಲ್ಲದ ಕೆಲಸವಿರುತ್ತದೆ. ವೃತ್ತಿಯಲ್ಲಿ ಪ್ರಮೋಷನ್ ಸಿಗುವ ವಾರ್ತೆ ಕೇಳಿ ಬರುತ್ತದೆ. ಉನ್ನತ ವಿದ್ಯೆಯನ್ನು ಓದುತ್ತಿರುವವರು ಕಠಿಣ ಪರಿಶ್ರಮ ಹಾಕಬೇಕು. ಸಂಗಾತಿಯ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ಪುಸ್ತಕ ಪ್ರಕಾಶಕರಿಗೆ ಇದ್ದ ಕಾನೂನು ತೊಡಕುಗಳು ನಿವಾರಣೆಯಾಗುತ್ತದೆ. 
ಮಿಥುನ
(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3) ಆಪ್ತರು ನಿಮ್ಮ ಸಕಾಲಿಕ ನೆರವಿಗಾಗಿ ನಿಮಗೆ ಧನ್ಯವಾದವನ್ನು ತಿಳಿಸುವರು. ಉದ್ದಿಮೆದಾರರು ತೆರಿಗೆ ವಿಷಯದಲ್ಲಿ ಹೆಚ್ಚು ಎಚ್ಚರಿಕೆ ವಹಿಸುವುದು ಒಳ್ಳೆಯದು. ರಾಜಕೀಯ ವ್ಯಕ್ತಿಗಳ ಹಿಂಬಾಲಕರಿಗೆ ಹೆಚ್ಚು ಸಂಪಾದನೆ ಆಗುವ ಯೋಗವಿದೆ. ಹಿರಿಯ ಅಧಿಕಾರಿಗಳಿಗೆ ಹೆಚ್ಚು ಸವಲತ್ತು ದೊರೆಯುತ್ತದೆ. ಖರ್ಚಿಗೆ ಸಾಕಷ್ಟು ಕಡಿವಾಣ ಹಾಕಿರಿ. ಅಧಿಕಾರಸ್ಥರೊಡನೆ ಹೆಚ್ಚಿನ ಸಂಪರ್ಕಗಳು ಬರುತ್ತವೆ. ವಿದ್ಯಾರ್ಥಿಗಳಿಗೆ ಅಂತಹ ಯಶಸ್ಸು ಇರುವುದಿಲ್ಲ. ಸಾಲಸೋಲದ ವ್ಯವಹಾರಗಳಲ್ಲಿ ಹೆಚ್ಚಿನ ಗಲಾಟೆ ಆಗಬಹುದು. ಸಂಗಾತಿ ಇಂದ ಹೆಚ್ಚಿನ ಧನ ಸಹಾಯ ದೊರೆಯುತ್ತದೆ. ಧನ ಆದಾಯವು ಸಾಮಾನ್ಯವಾಗಿ ಇರುತ್ತದೆ. ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ನಿಮ್ಮ ಪಾಲಿನ ಲಾಭ ಬರುತ್ತದೆ. ಕೃಷಿಯಿಂದ ಸಾಕಷ್ಟು ಅಭಿವೃದ್ಧಿ ಇರುತ್ತದೆ.
ಕರ್ಕಾಟಕ
( ಪುನರ್ವಸು 4 ಪುಷ್ಯ ಆಶ್ಲೇಷ) ನಿಮ್ಮ ವಾಕ್ಚಾತುರ್ಯವನ್ನು ಪ್ರದರ್ಶನ ಮಾಡಲು ಉತ್ತಮ ಅವಕಾಶ ದೊರೆಯುತ್ತದೆ, ಅದನ್ನು ಸದುಪಯೋಗ ಮಾಡಿಕೊಳ್ಳಿರಿ. ಕೆಲಸದಲ್ಲಿ ಕಂಡು ಬರುವ ಸಣ್ಣಪುಟ್ಟ ತಪ್ಪುಗಳನ್ನು ವರ್ತನೆಯಾಗದಂತೆ ಎಚ್ಚರವಹಿಸಿರಿ. ಧನ ಆದಾಯವು ನಿಮ್ಮ ನಿರೀಕ್ಷೆಯ ಹತ್ತಿರಕ್ಕೆ ಬರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಲಾಭವನ್ನು ಕಾಣಬಹುದು. ನೆರೆಹೊರೆಯವರ ವೈಶಮ್ಯ ಈಗ ಅನುಭವಕ್ಕೆ ಬರುತ್ತದೆ. ಆಸ್ತಿಯ ಪಾಲುದಾರಿಕೆ ವ್ಯವಹಾರಗಳಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳಬೇಕಾಗಬಹುದು. ಆಭರಣಖರೀದಿ ಮಾಡುವ ಯೋಗವಿದೆ. ವೃತ್ತಿಯಲ್ಲಿ ಅನಿರೀಕ್ಷಿತ ವರ್ಗಾವಣೆ ಆದರೂ ಸಹ ಅದರಿಂದ ನಿಮಗೆ ಲಾಭವಾಗುತ್ತದೆ. ವಿದ್ಯಾರ್ಥಿ ಗಳು ಹೆಚ್ಚು ಶ್ರಮ ಪಡಬೇಕಾದ ಅನಿವಾರ್ಯತೆ ಇದೆ. ವ್ಯವಹಾರಗಳಲ್ಲಿ ಅನಿರೀಕ್ಷಿತ ಶತ್ರುತ್ವ ಬರಬಹುದು ಈ ಬಗ್ಗೆ ಎಚ್ಚರವಹಿಸಿರಿ.
ಸಿಂಹ
( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1) ಸಂಶೋಧನಾ ಕ್ಷೇತ್ರದಲ್ಲಿರುವವರು ಹೆಚ್ಚಿನ ಸಾಧನೆ ಮಾಡುವ ಯೋಗವಿದೆ. ಮನೆಯ ಹಿರಿಯರ ಮಧ್ಯಸ್ಥಿಕೆಯಿಂದ ನೆಂಟಸ್ತಿಕೆಯಲ್ಲಿ ಸಂಬಂಧಗಳು ಕೂಡಿ ಬರಲಿವೆ.ನಿರುದ್ಯೋಗಿಗಳಿಗೆ ಹಿರಿಯರ ವಶೀಲಿಯಿಂದ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ವೃತ್ತಿಯಲ್ಲಿ ಸ್ಪರ್ಧಾತ್ಮಕ ಪೈಪೋಟಿ ಇದ್ದರೂ ತೊಂದರೆ ಏನು ಇಲ್ಲ. ಪ್ರವಾಸಕ್ಕೆ ಹೋದಾಗ ನೀರಿನ ಬಗ್ಗೆ ಹೆಚ್ಚು ಜಾಗರೂಕರಾಗಿರಿ. ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸುವಿರಿ. ಕಬ್ಬಿಣ ಮತ್ತು ತಾಮ್ರದ ವ್ಯಾಪಾರಿಗಳಿಗೆ ಹೆಚ್ಚಿನ ಆದಾಯ ಇರುತ್ತದೆ ಮಕ್ಕಳ ವಿದ್ಯಾಭ್ಯಾಸ ಸಮಾಧಾನ ತರುತ್ತದೆ. ಹಣದ ಒಳ ಹರಿವು ಸಾಮಾನ್ಯವಾಗಿರುತ್ತದೆ. ಕೃಷಿಕರಿಗೆ ಹೆಚ್ಚಿನ ಲಾಭವಿರುತ್ತದೆ. ವಿದೇಶಕ್ಕೆ ಆಹಾರ ವಸ್ತುಗಳನ್ನು ರಫ್ತು ಮಾಡುವವರಿಗೆ ಮಾರುಕಟ್ಟೆ ವಿಸ್ತರಣೆ ಯೋಗವಿದೆ.
ಕನ್ಯಾ
( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2) ವಾರದ ಆರಂಭದಲ್ಲಿ ಆಲಸಿ ನಡವಳಿಕೆ ಇರುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ವೃತ್ತಿಯಲ್ಲಿ ಪರಿಶ್ರಮಪಟ್ಟು ಕೆಲಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಸ್ಥಿರಾಸ್ತಿ ಕೊಳ್ಳುವ ವಿಷಯ ದಲ್ಲಿ ಹೆಚ್ಚು ಗೊಂದಲಗಳು ಆಗುತ್ತವೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಹಣ ಖರ್ಚಾಗುತ್ತದೆ. ಸಾಲವನ್ನು ತೀರಿಸಲು ಸಾಲಗಾರರು ಗಡುವು ಕೊಡುತ್ತಾರೆ. ನಿಮ್ಮ ಸಂಗಾತಿಯ ಖರ್ಚು ಆದಾಯಕ್ಕಿಂತ ಹೆಚ್ಚಿಗೆ ಇರುತ್ತದೆ. ವಿದೇಶದಲ್ಲಿರುವವರಿಗೆ ಹೆಚ್ಚಿನ ಆದಾಯದ ಜೊತೆಗೆ ಆಸ್ತಿ ಮಾಡುವ ಯೋಗವಿದೆ. ಸರ್ಕಾರಿ ಕಚೇರಿಯ ಕೆಲಸ ಕಾರ್ಯಗಳಲ್ಲಿ ನಿಧಾನಗತಿ ಇರುತ್ತದೆ.ವಿದೇಶಕ್ಕೆ ಕಚ್ಚಾಮಾಲನ್ನು ಪೂರೈಸುವವರಿಗೆ ಹೆಚ್ಚು ಬೇಡಿಕೆ ಬರುತ್ತದೆ. ಹಿರಿಯರಿಂದ ಸ್ವಲ್ಪಮಟ್ಟಿನ ಧನ ಸಹಾಯ ಒದಗಿ ಬರುತ್ತದೆ. ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ತಯಾರಿಸಿ ಮಾರುವವರ ವ್ಯವಹಾರ ವಿಸ್ತರಿಸುತ್ತದೆ.
ತುಲಾ
( ಚಿತ್ತಾ 3 4 ಸ್ವಾತಿ ವಿಶಾಖ 1 2 3) ಸಮೂಹದಲ್ಲಿ ಮಾತಾಡುವಾಗ ಎಚ್ಚರ ಇರಲಿ, ಖಂಡಿತ ಒರಟು ಮಾತುಗಳು ಬೇಡ. ಕೃಷಿ ಬೆಳಗಳಿಂದ ಹೆಚ್ಚಿನ ಆದಾಯ ಬರುತ್ತದೆ. ಚುರುಕಾಗಿ ಕೆಲಸ ಮಾಡುತ್ತಿರುವಂತೆ ಅಭಿನಯ ಮಾಡುವಿರಿ. ಆಸ್ತಿ ವಿಚಾರದಲ್ಲಿ ಹೆಚ್ಚಿನ ಆತುರ ಬೇಡ. ಅಸಂಪ್ರದಾಯಕ ಊಟದಿಂದ ಆರೋಗ್ಯ ವ್ಯತ್ಯಾಸ ಆಗಬಹುದು. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಸಂಗಾತಿಯ ಕಡೆಯಿಂದ ಹೆಚ್ಚಿನಧನ ಸಹಾಯಸಿಗಬಹುದು. ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ವ್ಯಾಪಾರವಿರುವುದಿಲ್ಲ. ಭೂಮಿಯ ಅಭಿವೃದ್ಧಿ ಮಾಡುವವರಿಗೆ ಹೆಚ್ಚಿನ ವ್ಯವಹಾರದ ಜೊತೆಗೆ ಆದಾಯವು ಬರುತ್ತದೆ. ನಿಮ್ಮ ವೃತ್ತಿಯಿಂದ ಆದಾಯ ಹೆಚ್ಚುತ್ತದೆ. ಹೈನುಗಾರಿಕೆ ಮಾಡುವವರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ಲಾಭ ಬರುತ್ತದೆ. ನಿಮ್ಮ ಮನಶಾಂತಿಗಾಗಿ ದೇವರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಿರಿ.
ವೃಶ್ಚಿಕ
( ವಿಶಾಖಾ 4 ಅನುರಾಧ ಜೇಷ್ಠ) ಸ್ವಲ್ಪ ಪ್ರಶಾಂತತೆಯಿಂದ ಇರುವಿರಿ. ಧನದ ಒಳಹರಿವು ಸಾಮಾನ್ಯ ಗತಿಯಲ್ಲಿರುತ್ತದೆ. ಶತ್ರುಗಳ ಮೇಲೆ ಸಾಕಷ್ಟು ಒತ್ತಡ ಹಾಕಿ ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳುವಿರಿ. ಆಸ್ತಿ ವಿಚಾರದಲ್ಲಿದ್ದ ಗೊಂದಲಗಳು ಮಾತುಕತೆಯ ಮೂಲಕ ಬಗೆಹರಿಯುತ್ತವೆ. ವಿದ್ಯಾರ್ಥಿಗಳಿಗೆ ಹೆಚ್ಚು ಶ್ರಮ ಹಾಕಿ ಓದಲೇಬೇಕಾದ ಪರಿಸ್ಥಿತಿ ಇರುತ್ತದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಸ್ವಲ್ಪ ಗೊಂದಲಗಳ ಮೂಡಿ ನಿಮ್ಮ ಪಾಲಿನ ಲಾಭ ಕಡಿಮೆಯಾಗಬಹುದು. ವಿದೇಶದಲ್ಲಿರುವವರಿಗೆ ಬೇಕಾದ ಸಾಲ ಸೌಲಭ್ಯಗಳು ಈಗ ಸಿಗುವ ಸಾಧ್ಯತೆಗಳಿವೆ. ಸಂಗಾತಿಯು ನಡೆಸುವ ವ್ಯವಹಾರಗಳಲ್ಲಿ ಹೆಚ್ಚಿನ ಆದಾಯವಿರುತ್ತದೆ. ಕೃಷಿಯಿಂದ ನಿರೀಕ್ಷಿತ ಆದಾಯವಿರುವುದಿಲ್ಲ. ಹಿರಿಯರ ವಶೀಲಿಯಿಂದ ಕೆಲಸದಲ್ಲಿ ಬಡ್ತಿ ಅಥವಾ ಉದ್ಯೋಗ ದೊರೆಯುವ ಸಾಧ್ಯತೆ ಇದೆ.
ಧನು
( ಮೂಲ ಪೂರ್ವಾಷಾಢ ಉತ್ತರಾಷಾಢ 1 ) ಆತ್ಮಗೌರವ ಹೆಚ್ಚಾಗುತ್ತದೆ. ತನಿಖಾ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಹೆಚ್ಚಿನ ಕೆಲಸದ ಒತ್ತಡ ಮತ್ತು ಉತ್ತಮ ಹೆಸರು ಬರುತ್ತದೆ. ಮಾತಿನ ಮೇಲೆ ಹೆಚ್ಚಿನ ಗಮನವಿರಲಿ.ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ವಿದೇಶಗಳಲ್ಲಿ ಓದಬೇಕೆಂದು ಪ್ರಯತ್ನ ಪಡುತ್ತಿರುವವರಿಗೆ ಈಗ ಅವಕಾಶಗಳು ಒದಗುತ್ತವೆ. ಹೊಸ ವ್ಯಾಪಾರಗಳಲ್ಲಿ ಹೆಚ್ಚಿನ ಲಾಭವನ್ನು ಕಾಣಬಹುದು. ವಿದೇಶಿ ವಸ್ತುಗಳನ್ನು ಆಮದು ಮಾಡಿ ವ್ಯಾಪಾರ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಮೂತ್ರ ಸಂಬಂಧಿ ರೋಗ ಇರುವವರು ಹೆಚ್ಚು ಎಚ್ಚರ ವಹಿಸಿರಿ. ಸ್ತ್ರೀಯರ ಜೊತೆ ಹಣಕಾಸಿನ ವ್ಯವಹಾರವನ್ನು ಮಾಡುವುದು ನಷ್ಟಕ್ಕೆ ದಾರಿ ಮಾಡಿಕೊಡುತ್ತದೆ. ಕೃಷಿ ಬೆಳಗಳಿಂದ ಹೆಚ್ಚು ಲಾಭವಿದೆ. ಕೃಷಿ ಕಾರ್ಯಗಳು ಹೆಚ್ಚು ಭರದಿಂದ ಸಾಗುತ್ತವೆ.
ಮಕರ
( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2) ನಿಮ್ಮ ವಾಕ್ ಚಾತುರ್ಯ ಉತ್ತಮವಾಗಿದ್ದು ಜನರನ್ನು ಸಮಾಧಾನಗೊಳಿಸುವಿರಿ. ಹಣದ ಒಳ ಹರಿವು ಸಾಮಾನ್ಯವಾಗಿರುತ್ತದೆ. ಹಣಕಾಸು ಸಂಸ್ಥೆ ನಡೆಸುವವರಿಗೆ ಸಮಾಧಾನಕರ ವಾತಾವರಣವಿರುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸನ್ನು ಪಡೆಯುವ ಯೋಗವಿದೆ. ಹರಿತವಾದ ಆಯುಧಗಳ ಜೊತೆ ಮತ್ತು ಬೆಂಕಿಯ ಜೊತೆ ಕೆಲಸ ಮಾಡುವವರು ಹೆಚ್ಚು ಎಚ್ಚರದಿಂದ ಕೆಲಸ ಮಾಡಿರಿ. ತಾಯಿಯೊಡನೆ ಕಾವೇರಿದ ಮಾತುಗಳಾಗಬಹುದು. ಹಿರಿಯರ ವ್ಯವಹಾರಗಳಲ್ಲಿ ನಿಮಗೆ ಖಂಡಿತ ಪಾಲು ದೊರೆಯುತ್ತದೆ. ಧಾರ್ಮಿಕ ಸಂಸ್ಥೆಗಳನ್ನು ನಡೆಸುತ್ತಿರುವವರಿಗೆ ಮತ್ತು ಧಾರ್ಮಿಕ ಕಾರ್ಯಗಳನ್ನು ಮಾಡುವವರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ಎಲೆಕ್ಟ್ರಾನಿಕ್ಸ್ ಉದ್ಯಮದಾರರಿಗೆ ಸಾಮಾನ್ಯ ಪ್ರಗತಿ ಇರುತ್ತದೆ. ಸರ್ಕಾರಿ ಕೆಲಸದಲ್ಲಿರುವವರಿಗೆ ಅಭಿವೃದ್ಧಿ ಇರುತ್ತದೆ.
ಕುಂಭ
( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3) ಕ್ರೀಡಾಪಟುಗಳಿಗೆ ಬಹಳ ಉತ್ತಮವಾದ ವಾರ, ಅವರಿಗೆ ಬೇಕಾದ ಸೌಲಭ್ಯಗಳು ದೊರೆಯುವುದರ ಜೊತೆಗೆ ಉತ್ತಮ ಸಾಧನೆ ಮಾಡುವ ಯೋಗವಿದೆ. ನಿಮ್ಮ ಮಾತು ನಡವಳಿಕೆಯಿಂದ ಜನರನ್ನು ಗೆಲ್ಲುವಿರಿ. ಧನಾದಾಯವು ಸಾಮಾನ್ಯವಾಗಿರುತ್ತದೆ. ಆಸ್ತಿ ವ್ಯವಹಾರ ಮಾಡುವವರಿಗೆ ಉತ್ತಮ ಅಭಿವೃದ್ಧಿ ಇರುತ್ತದೆ. ಹೆಂಗಸರ ಅಲಂಕಾರಿಕ ವಸ್ತುಗಳನ್ನು ತಯಾರಿಸುವವರಿಗೆ ಹಾಗೂ ಮಾರಾಟ ಮಾಡುವವರಿಗೆ ಉತ್ತಮ ಸಂಪಾದನೆ ಇರುತ್ತದೆ. ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಾಧನೆಮಾಡುವ ಯೋಗವಿದೆ. ಎಲೆಕ್ಟ್ರಾನಿಕ್ಸ್ ಉಪಕರಣಗಳ ಮಾರಾಟಮಾಡುವವರಿಗೆ ವ್ಯವಹಾರ ವಿಸ್ತರಣೆಯ ಯೋಗವಿದೆ. ಮುನಿಸಿಕೊಂಡಿದ್ದ ನಿಮ್ಮ ಸಂಗಾತಿ ಪುನಃ ಬಂದು ಸೇರುವರು. ತಾಯಿಯಿಂದ ವ್ಯವಹಾರದ ಬಗ್ಗೆ ತಿಳುವಳಿಕೆ ಮತ್ತು ಸಹಾಯ ದೊರೆಯುತ್ತದೆ.
ಮೀನ
( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ) ಸಂಗೀತಗಾರರಿಗೆ ಉತ್ತಮ ವೇದಿಕೆ ದೊರೆಯುವ ಸಾಧ್ಯತೆ ಇದೆ. ಕೆಲವು ಕಲಾವಿದರುಗಳಿಗೆ ವಿದೇಶದಲ್ಲಿ ಕಲಾ ಪ್ರದರ್ಶನ ಮಾಡುವ ಅವಕಾಶ ದೊರೆಯುತ್ತದೆ. ಸಹೋದರಿಯರ ಬಾಂಧವ್ಯ ಅಭಿವೃದ್ಧಿಗೊಳ್ಳುತ್ತದೆ. ಕೃಷಿಮಾಡುವ ಇಚ್ಛೆ ಆಗುತ್ತದೆ, ಅದಕ್ಕಾಗಿ ಕೃಷಿಭೂಮಿ ಖರೀದಿ ಮಾಡಲು ಮುಂದಾಗುವಿರಿ. ಮಕ್ಕಳ ಬಗ್ಗೆ ಅಗೌರವಯುತವಾದ ಸುದ್ದಿಯೊಂದು ಕೇಳಿ ಬರುವ ಸಾಧ್ಯತೆ ಇದೆ. ತಾಯಿಯೊಡನೆ ಕೋಪೋದ್ರಿಕ್ತ ಮಾತುಗಳಾಗಬಹುದು. ಸಂಗಾತಿಯಾದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ನಿಮ್ಮ ಸಂಸಾರದ ಒಳಿತಿಗಾಗಿ ಮನೆಯಲ್ಲಿ ದೈವ ಕಾರ್ಯಗಳನ್ನು ಹಮ್ಮಿಕೊಳ್ಳುವಿರಿ. ತಂದೆಯಿಂದ ನಿಮಗೆ ಆರ್ಥಿಕ ಸಹಾಯ ದೊರೆಯುತ್ತದೆ. ವೃತ್ತಿಯಲ್ಲಿ ಅತಿಯಾದ ಗೊಂದಲಗಳನ್ನು ಮಾಡಿಕೊಳ್ಳಬೇಡಿರಿ. ಕಬ್ಬಿಣದ ವಸ್ತುಗಳನ್ನು ತಯಾರಿಸುವವರಿಗೆ ಬೇಡಿಕೆ ಹೆಚ್ಚಾಗುತ್ತದೆ.