ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
17/03/2024 - 23/03/2024
ವಾರ ಭವಿಷ್ಯ: ಈ ರಾಶಿಯವರು ಇಷ್ಟಪಟ್ಟ ಆಸ್ತಿಯನ್ನು ಕೊಳ್ಳಲು ಸಕಾಲ
Published 23 ಮಾರ್ಚ್ 2024, 23:32 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಧರ್ಮಶ್ರದ್ಧೆ ಮತ್ತು ಹಿರಿಯರ ಮೇಲೆ ಗೌರವ ಹೆಚ್ಚುತ್ತದೆ. ಧನಾದಾಯವು ಸಾಮಾನ್ಯ ಗತಿಯಲ್ಲಿರುತ್ತದೆ. ನಿಮ್ಮದೇ ಆದ ಕೆಲವೊಂದು ನಡವಳಿಕೆಗಳು ನಿಮಗೆ ಸಮಸ್ಯೆಯನ್ನು ತರಬಹುದು. ಇಷ್ಟಪಟ್ಟ ಆಸ್ತಿಯನ್ನುಕೊಳ್ಳಲು ಸಕಾಲ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶವಿರುತ್ತದೆ. ಉದರ ಸಂಬಂಧಿ ಖಾಯಿಲೆಗಳು ಕಾಣಿಸಬಹುದು. ವ್ಯಾಪಾರ ವ್ಯವಹಾರಗಳಲ್ಲಿ ನಿಮ್ಮ ಮೈಯೆಲ್ಲಾ ಕಣ್ಣಾಗಿರಲಿ, ಇಲ್ಲವಾದಲ್ಲಿ ಲಾಭದಲ್ಲಿ ಮೋಸವಾಗುವ ಸಾಧ್ಯತೆಗಳಿವೆ. ಸಂಗಾತಿಯ ಸಲಹೆ ಗಳಿಂದ ಕೆಲವೊಂದುವಿಷಯಗಳಲ್ಲಿ ಅನುಕೂಲ ಆಗುತ್ತದೆ. ಭೂಮಿಯಿಂದ ಅದಿರನ್ನು ತೆಗೆಯುವ ಕೆಲಸಗಾರರಿಗೆ ಹೆಚ್ಚು ಬೇಡಿಕೆ ಬಂದು ಹೆಚ್ಚು ಕೆಲಸ ದೊರೆಯುತ್ತದೆ. ಮಾನಸಿಕ ವೈದ್ಯರುಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಸಂಗಾತಿ ದೆಸೆಯಿಂದ ಆಸ್ತಿವಿವಾದಗಳು ಆಗಬಹುದು. ಹಿರಿಯರ ಆಸ್ತಿಯಿಂದ ನಿಮಗೆ ಆದಾಯಗಳು ಬರುತ್ತಿರುತ್ತದೆ.
ವೃಷಭ
ನಿಮ್ಮ ಪ್ರತಿ ಕೆಲಸದ ಮೇಲು ಗಮನವಿಟ್ಟು ಅದರ ಒಳಿತು ಕೆಡಕುಗಳನ್ನು ಲೆಕ್ಕ ಹಾಕುವಿರಿ. ವಾಗ್ಮಿ ಗಳಿಗೆ ಚಿಂತಕರಿಗೆ ಉತ್ತನ ವೇದಿಕೆ ದೊರೆತು ಅವರ ವಿಚಾರಗಳನ್ನು ಮಂಡಿಸಲು ಅನುಕೂಲವಾಗುತ್ತದೆ. ವ್ಯವಹಾರಗಳ ಬಗ್ಗೆ ತಿಳುವಳಿಕೆ ಕೊಡುವವರಿಗೆ ಹೆಚ್ಚು ಮಾರುಕಟ್ಟೆ ದೊರೆಯುತ್ತದೆ. ನಿಮ್ಮ ನಡವಳಿಕೆಯಲ್ಲಿ ಚುರುಕುತನವನ್ನು ಕಾಣಬಹುದು. ತಾಯಿಯಿಂದ ಹಿರಿಯ ಸ್ತ್ರೀಯರಿಂದ ನಿಮಗೆ ಸಹಕಾರಗಳು ದೊರೆಯುತ್ತವೆ. ಸಂಸಾರದಲ್ಲಿ ಸಾಕಷ್ಟು ಸುಖ ಸಂತೋಷ ಇರುತ್ತದೆ. ಮೂತ್ರ ಸಂಬಂಧಿ ಕಾಯಿಲೆಗಳು ಮತ್ತು ಗರ್ಭಿಣಿಯರು ಎಚ್ಚರ ವಹಿಸಿರಿ.ಸಂಗಾತಿಗೆ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಸಂಗಾತಿಯ ಸಹಾಯದಿಂದ ವೃತ್ತಿಯಲ್ಲಿ ಹೆಚ್ಚಿನ ಸ್ಥಾನ ಪಡೆಯಬಹುದು. ಒಡವೆಗಳ ಮೇಲೆ ಕುಸರಿ ಕೆಲಸ ಮಾಡುವವರಿಗೆ ಬೇಡಿಕೆ ಸ್ವಲ್ಪ ಕಡಿಮೆಯಾಗಬಹುದು.
ಮಿಥುನ
ಬುದ್ಧಿವಂತಿಕೆಯಿಂದ ಹಿರಿಯರ ಒಲವನ್ನು ಗಳಿಸುವಿರಿ. ಉತ್ತಮವಾಗಿ ಮಾತನಾಡಿ ಎಲ್ಲರ ಬೆಂಬಲವನ್ನು ಗಳಿಸುವಿರಿ. ನಿಮ್ಮನ್ನು ಮಾತು ಮತ್ತು ನಡವಳಿಕೆಗಳಿಗೆ ಹೆಚ್ಚು ಸಾಮ್ಯವಿರುತ್ತದೆ. ಆಸ್ತಿಕೊಳ್ಳುವ ವಿಚಾರದಲ್ಲಿ ಹೆಚ್ಚು ಆತುರತೆ ಬೇಡ. ವಿದ್ಯಾರ್ಥಿಗಳಿಗೆ ಮಧ್ಯಮ ಗತಿಯ ಫಲಿತಾಂಶವಿರುತ್ತದೆ. ಶಸ್ತ್ರಚಿಕಿತ್ಸಕ ವೈದ್ಯರಿಗೆ ಹೆಚ್ಚುಬೇಡಿಕೆ ಬರುತ್ತದೆ. ಉಷ್ಣಪ್ರಕೃತಿ ದೇಹ ಇರುವವರು ಹೆಚ್ಚು ಎಚ್ಚರ ವಹಿಸಿರಿ. ಸಂಗಾತಿಯಿಂದ ನಿಮಗೆ ಹೆಚ್ಚು ಧನಲಾಭವಾಗುವ ಸಾಧ್ಯತೆಗಳಿವೆ. ಕೆಲವೊಂದು ಅನಿರೀಕ್ಷಿತ ಖರ್ಚುಗಳು ಈಗ ಬರುವ ಸಾಧ್ಯತೆಗಳಿವೆ. ಪಿತ್ರಾರ್ಜಿತ ಆಸ್ತಿಗಳು ನಿಮಗೆ ಸೇರುವ ಲಭ್ಯತೆಗಳು ಇದೆ. ವೃತ್ತಿಯಲ್ಲಿ ಕೆಲಸದ ಒತ್ತಡಗಳಿದ್ದರೂ ಸಹ ಅದನ್ನು ಮಾಡಿ ಮುಗಿಸುವಿರಿ. ವಾಹನ ತಯಾರಿಕಾ ಘಟಕಗಳಿಗೆ ಅಭಿವೃದ್ಧಿ ಇರುತ್ತದೆ. ವೃತ್ತಿಯಲ್ಲಿ ಕಾರ್ಯ ಕ್ಷೇತ್ರ ಬದಲಾವಣೆಯಾಗುವ ಸಾಧ್ಯತೆಗಳಿವೆ. ವಿದೇಶಿ ವ್ಯವಹಾರ ಮಾಡುವವರಿಗೆ ಲಾಭ ಹೆಚ್ಚುತ್ತದೆ.
ಕರ್ಕಾಟಕ
ವಾರದ ಆರಂಭ ಸಂತೋಷದಾಯಕವಾಗಿರುತ್ತದೆ. ಧನಾದಾಯವು ನಿಮ್ಮ ನಿರೀಕ್ಷೆಯನ್ನು ತಲುಪಬಹುದು. ಉತ್ತಮವಾಗಿ ಮಾತನಾಡಿ ಜನ ಬೆಂಬಲ ಪಡೆಯುವಿರಿ. ನಿಮ್ಮ ಆಲಸಿ ನಡವಳಿಕೆಗಳೆ ನಿಮ್ಮ ಪ್ರಯತ್ನಗಳಿಗೆ ಅಡ್ಡಿಯಾಗಬಹುದು. ಆಸ್ತಿಯ ಮೇಲೆ ಹಣಹೂಡುವ ಮುಂಚೆ ಅದರಬಗ್ಗೆ ಸರಿಯಾಗಿ ತಿಳಿಯಿರಿ. ವಿದ್ಯಾರ್ಥಿಗಳಿಗೆ ಮಧ್ಯಮ ಗತಿಯ ಫಲಿತಾಂಶವಿರುತ್ತದೆ. ವೃತ್ತಿಯಲ್ಲಿ ಸ್ವಲ್ಪ ಗೊಂದಲಗಳಾಗಬಹುದು. ಪಿತ್ತ ವಿಕಾರಗಳಿರುವವರು ಹೆಚ್ಚು ಎಚ್ಚರ ವಹಿಸಿರಿ. ಸಂಗಾತಿಯ ಕಠಿಣ ನಿಲುವುಗಳು ನಿಮಗೆ ಬೇಸರ ತರಿಸಬಹುದು. ತೆರಿಗೆ ತಜ್ಞರಿಗೆ ಆದಾಯ ಸ್ವಲ್ಪ ಕಡಿಮೆಯಾಗಬಹುದು. ರಾಜಕೀಯ ನಾಯಕರುಗಳಿಗೆ ಅನಿರೀಕ್ಷಿತವಾಗಿ ಜನಬೆಂಬಲದ ಜೊತೆಗೆ ಅಧಿಕಾರಿಗಳ ಬೆಂಬಲ ದೊರೆಯುತ್ತದೆ. ಹಿರಿಯರು ತಮ್ಮ ಮಕ್ಕಳನ್ನು ನೋಡಿ ಬರಲು ವಿದೇಶಕ್ಕೆ ಹೋಗಿ ಬರಬಹುದು.
ಸಿಂಹ
ಅಲಂಕಾರದ ಕಡೆಗೆ ಹೆಚ್ಚು ಗಮನ ಕೊಡುವಿರಿ. ಮಾತನಾಡುವಾಗ ಆಡಿದ ಸಣ್ಣ ಮಾತುಗಳು ನಿಮ್ಮ ಗೌರವವನ್ನು ಹಾಳು ಮಾಡುತ್ತವೆ. ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿ ಮಾಡುತ್ತಿದ್ದ ಸಂಬಂಧಿಕರನ್ನು ಸಂಗಾತಿಯ ಕಡೆಯವರು ಸಮಾಧಾನ ಮಾಡುವರು. ಹಿರಿಯರ ಆಸ್ತಿಯ ದಾಖಲೆಗಳಲ್ಲಿ ಆಗಿದ್ದ ವ್ಯತ್ಯಾಸಗಳನ್ನು ಸರಿಪಡಿಸಿಕೊಳ್ಳಲು ಪ್ರಯತ್ನ ಪಡುವಿರಿ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚು ಹಣ ಖರ್ಚಾಗುತ್ತದೆ. ಉಷ್ಣ ಮತ್ತು ವಾಯು ಪ್ರಕೋಪಗಳು ಸ್ವಲ್ಪ ಕಾಡಬಹುದು. ಸಂಗಾತಿಯ ಕಡೆಯಿಂದ ನೀವು ಕೊಳ್ಳುವ ಜಮೀನಿಗೆ ಹಣ ಸಹಾಯ ದೊರೆಯುತ್ತದೆ. ಮೂಳೆ ತಜ್ಞರಿಗೆ ಹೆಚ್ಚು ಬೇಡಿಕೆ ಬರುತ್ತದೆ ತನ್ಮೂಲಕ ಹೆಚ್ಚು ಸಂಪಾದನೆಯಾಗುತ್ತದೆ. ಶಿಕ್ಷಣ ತಜ್ಞರಿಗೆ ಹೆಚ್ಚು ಬೇಡಿಕೆ ಬರುತ್ತದೆ. ಇದರಲ್ಲಿ ಕೆಲವರಿಗೆ ಪ್ರಮುಖ ಸ್ಥಾನಗಳು ದೊರೆಯಬಹುದು. ಉದ್ಯೋಗದಲ್ಲಿದ್ದ ಗೊಂದಲಗಳು ದೂರವಾಗುತ್ತದೆ.
ಕನ್ಯಾ
ಮಾಡಿದ ಕೆಲವು ಕೆಲಸಗಳ ಬಗ್ಗೆ ನಿಮಗೆ ಪಶ್ಚಾತಾಪ ಉಂಟಾಗುತ್ತದೆ. ಧನಾದಾಯವು ಮಂದ ಗತಿಯಲ್ಲಿರುತ್ತದೆ. ನೀವಾಡಿದ ಕೆಲವು ಮಾತುಗಳೇ ನಿಮಗೆ ಮುಳುವಾಗುತ್ತದೆ. ಸಂಗಾತಿ ಕಡೆಯವರ ತೀವ್ರ ವಿರೋಧವನ್ನು ಎದುರಿಸಬೇಕಾಗಬಹುದು. ಸಂಸಾರದಲ್ಲಿ ಸುಖವಿದ್ದರೂ ಅಷ್ಟೇ ಕ್ಲೇಷಗಳು ಇರುತ್ತವೆ. ಈಗ ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹಿನ್ನಡೆಯನ್ನು ಕಾಣಬಹುದು. ಕೆಲವರಿಗೆ ಅನಿವಾರ್ಯವಾಗಿ ಶಸ್ತ್ರಚಿಕಿತ್ಸೆ ಆಗುವ ಪರಿಸ್ಥಿತಿ ಇದೆ. ಸಂಗಾತಿಗೆ ಅವರ ಹಿರಿಯರು ಸಹಾಯ ಮಾಡುವರು. ಕೆಲವರಿಗೆ ಅನಿರೀಕ್ಷಿತ ಧನ ಲಾಭವಾಗಬಹುದು ಇಲ್ಲವೇ ಹಣ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಸಂಸ್ಥೆಗಳನ್ನು ನಡೆಸುವವರಿಗೆ ಸ್ವಲ್ಪ ತೊಂದರೆಗಳು ಎದುರಾಗುತ್ತವೆ. ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸವನ್ನು ಕಾಣಬಹುದು. ತಂದೆಯ ಮನೆಯಿಂದ ದವಸ ಧಾನ್ಯಗಳು ದೊರೆಯಬಹುದು.
ತುಲಾ
ಅತಿಯಾದ ಆತ್ಮ ಗೌರವ ನಿಮ್ಮಲ್ಲಿ ಇರುತ್ತದೆ. ಧನದಾಯವು ಚೇತರಿಕೆಯ ಹಾದಿಯಲ್ಲಿರುತ್ತದೆ. ನಿಮ್ಮೆಲ್ಲಾ ಕೆಲಸಕಾರ್ಯಗಳಿಗೆ ಸಂಗಾತಿಯ ಸಹಕಾರ ದೊರೆಯುತ್ತದೆ. ಆಸ್ತಿ ಮಾಡುವ ವಿಚಾರದಲ್ಲಿ ಬಹಳ ದ್ವಂದ್ವ ನಿರ್ಧಾರಗಳಿರುತ್ತವೆ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲವಿರುತ್ತದೆ. ಕಣ್ಣಿನ ತೊಂದರೆ ಅಥವಾ ಚರ್ಮ ರೋಗಗಳಿರುವವರು ಹೆಚ್ಚು ಎಚ್ಚರ ವಹಿಸಬೇಕಾಗಿದೆ. ಸಂಗಾತಿಯಿಂದ ಧನಸಹಾಯಗಳಾಗುವ ಸಾಧ್ಯತೆಗಳಿವೆ. ಸಂಗಾತಿಯ ಆದಾಯವು ಸಹ ಹೆಚ್ಚಾಗುವುದು. ಉದ್ಯೋಗದಲ್ಲಿ ಸೂಕ್ತ ಸಹಕಾರಗಳು ದೊರೆತು ನಿಮ್ಮ ಕೆಲಸಗಳು ನಡೆಯುತ್ತವೆ. ಹಾಲಿನ ಉತ್ಪನ್ನಗಳನ್ನು ಮಾರುವವರಿಗೆ ಹೆಚ್ಚು ಲಾಭ ದೊರೆಯುವ ಸಾಧ್ಯತೆ ಇದೆ. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಸ್ವಲ್ಪ ಧನ ನಷ್ಟದ ಸಾಧ್ಯತೆ ಇದೆ. ತಂದೆಯಿಂದ ನಿಮ್ಮ ವ್ಯಾಪಾರಕ್ಕೆ ಸೂಕ್ತ ಸಲಹೆ ಮತ್ತು ಧನಸಹಾಯವು ದೊರೆಯುತ್ತದೆ. ವೃತ್ತಿಯಲ್ಲಿ ಜಿಜ್ಞಾಸೆಗಳಿರುತ್ತವೆ.
ವೃಶ್ಚಿಕ
ಧರ್ಮ ಮತ್ತು ಸಂಪ್ರದಾಯದ ಬಗ್ಗೆ ಸಾಕಷ್ಟು ಆಸಕ್ತಿ ವಹಿಸುವಿರಿ. ಧನದಾಯವು ಮಂದಗತಿಯಲ್ಲಿರುತ್ತದೆ. ಶತ್ರುಗಳ ತಂತ್ರಗಳನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕನಾದ ಪ್ರತ್ಯುತ್ತರ ನೀಡುವಿರಿ. ಬಂಧುಗಳ ನಡುವೆ ಒಮ್ಮತತರಲು ಸಾಕಷ್ಟುಪ್ರಯತ್ನಮಾಡುವಿರಿ. ಕೃಷಿಯಿಂದ ಲಾಭವಿರುತ್ತದೆ. ಸಾಂಪ್ರದಾಯಿಕ ಸಸ್ಯಗಳ ಸಸಿ ಅಭಿವೃದ್ಧಿ ಮಾಡುವವರಿಗೆ ಹೆಚ್ಚು ಆದಾಯ ಇರುತ್ತದೆ. ಭೂಮಿಯನ್ನುವ್ಯಾಪಾರಮಾಡಿಸುವವರಿಗೆ ಆದಾಯಇರುತ್ತದೆ. ಸಂಗಾತಿಯಿಂದ ನಿಮಗೆ ಬಳುವಳಿ ದೊರೆಯುವಸಾಧ್ಯತೆ ಇದೆ. ಉದ್ಯೋಗದಲ್ಲಿ ಕಿರಿಕಿರಿ ಇದ್ದರೂ ಸಹ ಕಿರಿಯ ಅಧಿಕಾರಿಗಳ ಕೃಪಾಶೀರ್ವಾದ ನಿಮಗೆ ದೊರೆಯುತ್ತದೆ. ಧಾರ್ಮಿಕ ಸಂಸ್ಥೆಗಳನ್ನು ನಡೆ ಸುತ್ತಿರುವವರಿಗೆ ನಿರೀಕ್ಷಿತ ಸಹಾಯ ದೊರೆಯುತ್ತದೆ. ವಿದೇಶಿ ಕಂಪೆನಿಗಳಿಗಾಗಿ ಭೂಮಿಯನ್ನು ಮಾರುವವರಿಗೆ ಹೆಚ್ಚು ಆದಾಯ ದೊರೆಯುತ್ತದೆ.
ಧನು
ನಿಮ್ಮ ವಯೋ ಧರ್ಮ ಮತ್ತು ಗೌರವಕ್ಕೆ ತಕ್ಕಂತೆ ವರ್ತಿಸುವಿರಿ. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿದ್ದರೂ ಸಹ ಹಣದ ನಿರ್ವಹಣೆಯನ್ನು ಸರಿಯಾಗಿ ಮಾಡುವಿರಿ. ಶತ್ರುಗಳ ತಂತ್ರಕ್ಕೆ ಪ್ರತಿ ತಂತ್ರ ಹೂಡಿ ಅವರಿಗೆ ಅಚ್ಚರಿ ಮೂಡಿಸುವಿರಿ. ವಿದೇಶದಲ್ಲಿರುವವರು ತಮ್ಮ ಪ್ರದೇಶದಲ್ಲಿ ಸ್ಥಿರಾಸ್ತಿಯನ್ನು ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ನಿರೀಕ್ಷೆಗೆ ಮೀರಿದ ಯಶಸ್ಸು ಇರುತ್ತದೆ. ಬಂಧುಗಳಿಗಾಗಿ ಹಣ ಖರ್ಚು ಮಾಡುವಿರಿ. ಬಂಧುಗಳಿಗೆ ಯಾವುದೇ ರೀತಿಯ ಸಾಲ ಕೊಟ್ಟಲ್ಲಿ ವಾಪಸ್ಸು ಬರುವುದಿಲ್ಲ. ಸಂಗಾತಿಯಿಂದ ಸಂಸಾರ ನಿರ್ವಹಣೆ ಸುಲಭವಾಗಿ ಆಗುತ್ತದೆ. ತೆರಿಗೆ ತಜ್ಞರಿಗೆ ಆದಾಯ ಸಲ್ಪ ಹೆಚ್ಚಬಹುದು. ಹೈನುಗಾರಿಕೆ ಮಾಡುವವರಿಗೆ ಸ್ವಲ್ಪ ಕೈ ಕಚ್ಚಬಹುದು. ತಂದೆಯಿಂದ ಕೌಟುಂಬಿಕ ವ್ಯವಹಾರಗಳ ಬಗ್ಗೆ ಸರಿಯಾಗಿ ತಿಳಿಯಬಹುದು. ನಿಮ್ಮ ವ್ಯಕ್ತಿತ್ವದಿಂದ ಉದ್ಯೋಗದಲ್ಲಿ ಹೆಚ್ಚಿನ ಮನ್ನಣೆಯನ್ನು ಪಡೆಯುವಿರಿ.
ಮಕರ
ಬಹಳ ದೃಢ ಮನಸ್ಸಿನಿಂದ ಕೆಲಸ ಕಾರ್ಯಗಳನ್ನು ಆರಂಭ ಮಾಡುವಿರಿ. ಧನಾದಾಯವು ಸ್ವಲ್ಪ ಏರಿಕೆಯ ಹಾದಿಯನ್ನು ತುಳಿಯುತ್ತದೆ. ಬಂಧುಗಳಲ್ಲಿ ಕೆಲವರು ನಿಮ್ಮನ್ನು ಒಲೈಸಿದರೆ ಕೆಲವರು ವಿರೋಧಿಸುವರು. ಆಸ್ತಿಯನ್ನು ಖರೀದಿ ಮಾಡಲುಬೇಕಾದ ಹಣ ಒಟ್ಟು ಮಾಡುವ ಮಾರ್ಗ ದೊರೆಯುತ್ತದೆ. ವಿದ್ಯಾರ್ಥಿಗಳು ಅತಿ ಹೆಚ್ಚು ಶ್ರಮಹಾಕಿ ಫಲಿತಾಂಶ ಪಡೆಯುವ ಯೋಗವಿದೆ. ಕಣ್ಣಿನ ತೊಂದರೆ ಇರುವವರು ಅಥವಾ ತಲೆ ನೋವಿನಿಂದ ನರಳುತ್ತಿರುವವರು ಅದರ ಬಗ್ಗೆ ಸರಿಯಾಗಿ ಗಮನ ಹರಿಸಿರಿ. ಪ್ರೀತಿ ಪ್ರೇಮಗಳಲ್ಲಿರುವವರಿಗೆ ನಿರಾಸೆಯಾಗಬಹುದು. ಸರ್ಕಾರಿ ಕೆಲಸ ಕಾರ್ಯಗಳು ನಿಧಾನಗತಿಯನ್ನು ಕಾಣಬಹುದು. ಹಿರಿಯರಿಂದ ಧರ್ಮ ವಿದ್ಯೆಯನ್ನು ಕಲಿಯಬಹುದು ಕೃಷಿಕರಿಗೆ ಹೆಚ್ಚಿನ ಲಾಭವಿರುತ್ತದೆ. ಕ್ರೀಡಾ ಪಟುಗಳಿಗೆ ಅವರ ಸಾಧನೆಗಾಗಿ ಬಹುಮಾನಗಳು ದೊರೆಯುತ್ತವೆ.
ಕುಂಭ
ಬಹಳ ತಾಳ್ಮೆಯಿಂದ ಇರುವುದು ಒಳ್ಳೆಯದು. ಮಾತಿನಲ್ಲಿ ವ್ಯವಹಾರಿಕತೆ ಇರುತ್ತದೆ. ಈ ರಾಶಿಯ ಹಿರಿಯರನ್ನು ನಿಂದಿಸಿದವರು ಬಂದು ಕ್ಷಮೆಯನ್ನು ಕೇಳುವ ಸಾಧ್ಯತೆಗಳಿವೆ. ಯುವಕರು ಮಾತಿನಲ್ಲಿ ಸ್ವಲ್ಪ ಎಚ್ಚರವಾಗಿರುವುದು ಬಹಳ ಒಳ್ಳೆಯದು. ಸರ್ಕಾರಿ ಸಹಾಯಧನಗಳು ಬಂದರೂ ಸಲ್ಪ ಗೊಂದಲಗಳು ಉಂಟಾಗಿ ನಂತರ ಕೈ ಸೇರುತ್ತದೆ. ಹಿರಿಯರಿಗೆ ಅವರ ಸಮಾಜದಿಂದ ಗೌರವ ದೊರೆಯಬಹುದು ಅಥವಾ ಸಮಾಜದವರನ್ನು ಹಿರಿಯರು ಗೌರವಿಸಬಹುದು. ಆಸ್ತಿ ಸಂಬಂಧಿಸಿದ ವಿಚಾರದಲ್ಲಿ ಪ್ರಯತ್ನಗಳು ಬಹಳ ಮುಂದುವರೆಯುತ್ತವೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ನಿರೀಕ್ಷೆಗೆ ತಕ್ಕ ಫಲಿತಾಂಶ ದೊರೆಯುತ್ತದೆ. ಸಂಗಾತಿಯು ನಿಮ್ಮ ಚಿಂತೆಗೆ ಪರಿಹಾರವನ್ನು ಹುಡುಕಿಕೊಡುವರು. ಅನಿರೀಕ್ಷಿತವಾಗಿ ಧಾರ್ಮಿಕ ವಿದ್ಯೆಯನ್ನು ಕಲಿಯುವ ಆಸಕ್ತಿ ಮೂಡುತ್ತದೆ. ತಂದೆಗಾಗಿ ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ.
ಮೀನ
ಸರ್ಕಾರಿ ಮಟ್ಟದ ವ್ಯವಹಾರಗಳಲ್ಲಿ ಸಾಕಷ್ಟು ಪ್ರಭಾವ ಬೀರುವಿರಿ. ಧನದಾಯು ನಿಮ್ಮ ನಿರೀಕ್ಷೆಯನ್ನು ಖಂಡಿತ ತಲುಪುತ್ತದೆ. ಬಂಧುಗಳಲ್ಲಿ ನಿಮ್ಮ ಬಗ್ಗೆ ವಿಭಿನ್ನ ರೀತಿ ಅಭಿಪ್ರಾಯಗಳಿರುತ್ತವೆ. ಕಡಿಮೆ ದುಡ್ಡಿಗೆ ಆಸ್ತಿ ವಶಪಡಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಡುವಿರಿ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಅಷ್ಟು ಯಶಸ್ಸು ಇರುವುದಿಲ್ಲ. ಸಂಗಾತಿಯ ಅತಿಧರ್ಮ ಆಚರಣೆ ನಿಮಗೆ ಬೇಸರ ಹುಟ್ಟಿಸುತ್ತದೆ. ಶೀತ ಸಂಭಂದಿ ಕಾಯಿಲೆಗಳು ತಹ ಬಂದಿಗೆ ಬರಬಹುದು. ತಾಯಿಯಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಸಂಪೂರ್ಣ ಸಹಕಾರ ಸಿಗುತ್ತದೆ. ವೃತ್ತಿಯಿಂದ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ನವೀನ ರೀತಿಯ ಹಣ್ಣು ತರಕಾರಿಗಳಿಗೆ ಹೆಚ್ಚು ಬೇಡಿಕೆ ಬರುತ್ತದೆ. ಕೆಲವು ರಾಜಕಾರಣಿಗಳಿಗೆ ಸ್ಥಾನ ಭ್ರಷ್ಟತೆ ಒದಗುವ ಸಾಧ್ಯತೆ ಇದೆ. ಸರ್ಕಾರಿ ಕೆಲಸ ಕಾರ್ಯಗಳು ಸರಾಗತೆಯನ್ನು ಕಾಣಬಹುದು. ಸರ್ಕಾರಿ ಸಾಲಗಳು ಅಥವಾ ಸಹಾಯ ಧನಗಳು ಸುಲಭವಾಗಿ ದೊರೆಯುತ್ತವೆ.