ದೆಹಲಿ ಅಬಕಾರಿ ನೀತಿ ಪ್ರಕರಣದಿಂದ ಖುಲಾಸೆಗೊಂಡ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ಶುಕ್ರವಾರ ಮೆರವಣಿಗೆಯಲ್ಲಿ ಗದೆ ಪ್ರದರ್ಶಿಸಿದರು –ಪಿಟಿಐ ಚಿತ್ರ
- ನಕಲಿ ಅಬಕಾರಿ ನೀತಿ ಪ್ರಕರಣದ ಮೂಲಕ ನನ್ನ ಪ್ರಾಮಾಣಿಕತೆ ಮತ್ತು ಪ್ರತಿಷ್ಠೆಯ ಮೇಲೆ ದಾಳಿ ನಡೆಸಲಾಯಿತು
ಅರವಿಂದ ಕೇಜ್ರಿವಾಲ್, ಎಎಪಿ ಮುಖ್ಯಸ್ಥ
ದೆಹಲಿ ಅಬಕಾರಿ ನೀತಿ ಪ್ರಕರಣವು ಸುಳ್ಳಿನ ಜಾಲವಾಗಿತ್ತು. ನ್ಯಾಯಾಂಗ ಅದನ್ನು ಭೇದಿಸಿದೆ. ಸತ್ಯಮೇವ ಜಯತೇ
ಕೆ. ಕವಿತಾ, ತೆಲಂಗಾಣ ಜಾಗೃತಿ ಅಧ್ಯಕ್ಷೆ
ಕೇಜ್ರಿವಾಲ್ ಸಿಸೋಡಿಯಾ ಅವರ ಖುಲಾಸೆಯು ಗುಜರಾತ್ ಚುನಾವಣೆ ಸಮೀಪಿಸುತ್ತಿರುವ ಕಾರಣ ನಡೆದಿದೆಯೇ ಎಂಬ ಪ್ರಶ್ನೆ ಹುಟ್ಟುಹಾಕುತ್ತದೆ
ದೇವೇಂದರ್ ಯಾದವ್, ದೆಹಲಿ ಕಾಂಗ್ರೆಸ್ ಮುಖ್ಯಸ್ಥ
ನಕಲಿ ಪ್ರಕರಣ
‘ಅವರು ನಮ್ಮ ವಿರುದ್ಧ ನಕಲಿ ಪ್ರಕರಣ ದಾಖಲಿಸಿದ್ದರು. ನಾನು ಪ್ರಾಮಾಣಿಕನಾಗಿದ್ದು ಪ್ರಾಮಾಣಿಕತೆಯನ್ನಷ್ಟೇ ಗಳಿಸಿದ್ದೇನೆ. ಅದೀಗ ಸಾಬೀತಾಗಿದೆ’ ಎಂದರು. ‘ಅಧಿಕಾರಕ್ಕಾಗಿ ದೇಶ ಮತ್ತು ಸಂವಿಧಾನದ ಜತೆ ಆಟವಾಡಬೇಡಿ ಎಂದು ಪ್ರಧಾನಿ ಮೋದಿ ಅವರಿಗೆ ಹೇಳಬಯಸುತ್ತೇನೆ’ ಎಂದು ಕೇಜ್ರಿವಾಲ್ ಹೇಳಿದರು.