<p> <strong>ಪತ್ತನ್ನಂತಿಟ್ಟ (ಕೇರಳ):</strong> ಶಬರಿಮಲೆ ದೇವಸ್ಥಾನದಿಂದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ದೇಗುಲದ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಸುಧೀಶ್ಕುಮಾರ್ ಅವರನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಬಂಧಿಸಿದೆ.</p><p>2019 ದೇವಾಲಯದ ಅಧಿಕಾರಿಯಾಗಿದ್ದ ಸುಧೀಶ್ ಅವರನ್ನು  ವಿಚಾರಣೆ ನಡೆಸಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.</p><p>ದೇಗುಲದ ದ್ವಾರಪಾಲಕ ಮೂರ್ತಿಗಳು ಚಿನ್ನಲೇಪಿತವಾಗಿದ್ದರೂ, ಅದು ತಾಮ್ರದ ಹಾಳೆಗಳು ಎಂದು ಸುಧೀಶ್ ಅವರು ದೇಗುಲದ ದಾಖಲೆಗಳಲ್ಲಿ ದಾಖಲಿಸಿದ್ದರು.</p><p>1990ರಿಂದಲೂ ಸುಧೀಶ್ ಅವರು ಶಬರಿಮಲೆ ದೇಗುಲದೊಂದಿಗೆ ನಂಟು ಹೊಂದಿದ್ದರು. ಗರ್ಭಗುಡಿಯ ಚಾವಣಿ ಮತ್ತು ದ್ವಾರಕಪಾಲಕ ಮೂರ್ತಿಗಳಿಗೆ 1998–99ರ ಅವಧಿಯಲ್ಲಿ ಚಿನ್ನಲೇಪನ ಮಾಡಿರುವ ಬಗ್ಗೆ ಅವರಿಗೆ ತಿಳಿದಿತ್ತು ಎಂದು ಮೂಲಗಳು ಹೇಳಿವೆ.</p><p>ಚಿನ್ನಲೇಪನ ಮಾಡಿಸುವ ಸಲುವಾಗಿ ಪ್ರಕರಣದ ಪ್ರಮುಖ ಆರೋಪಿ ಉಣ್ಣಿಕೃಷ್ಣನ್ ಪೋಟಿ ಅವರಿಗೆ ದ್ವಾರಪಾಲಕ ಮೂರ್ತಿಗಳ ಕವಚಗಳನ್ನು 2019ರಲ್ಲಿ ಹಸ್ತಾಂತರಿಸಲಾಗಿತ್ತು. ಈ ಸಂದರ್ಭದಲ್ಲಿ ಸುಧೀಶ್ ಅವರು ಚಿನ್ನದ ಕವಚಗಳನ್ನು ತಾಮ್ರದ ಕವಚಗಳೆಂದು ದಾಖಲಿಸಿದ್ದರು. ಇದರಿಂದಾಗಿ ಆರೋಪಿಗಳು ಚಿನ್ನದ ಕವಚಗಳನ್ನು ಕಳವು ಮಾಡಲು ಸಾಧ್ಯವಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p><p>ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಪೋಟಿ ಮತ್ತು ದೇಗುಲದ ಮಾಜಿ ಆಡಳಿತಾಧಿಕಾರಿ ಬಿ. ಮುರಾರಿಬಾಬು ಅವರು ಬಂಧನದಲ್ಲಿದ್ದಾರೆ.</p><p>ಪೋಟಿ ಆಪ್ತ ವಾಸುದೇವನ್ ಅವರನ್ನೂ ಎಸ್ಐಟಿ ವಿಚಾರಣೆ ನಡೆಸುತ್ತಿದೆ. ದ್ವಾರಪಾಲಕ ಮೂರ್ತಿಗಳನ್ನು ಇರಿಸಲು ಬಳಕೆಯಾಗುತ್ತಿದ್ದ ಹೆಚ್ಚುವರಿ ಪೀಠವು ವಾಸುದೇವನ್ ಅವರ ಸುಪರ್ದಿಯಲ್ಲಿತ್ತು. ಅದನ್ನು ಪೋಟಿ ಅವರ ಸಂಬಂಧಿಕರ ಮನೆಯಿಂದ ಎಸ್ಐಟಿ ಕಳೆದ ತಿಂಗಳು ಜಪ್ತಿ ಮಾಡಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.</p><p>ಶಬರಿಮಲೆ ದೇಗುಲದ ದ್ವಾರಪಾಲಕ ಮೂರ್ತಿಗಳಿಂದ ಚಿನ್ನ ಕಳವು ಪ್ರಕರಣ ಮತ್ತು ಶ್ರೀಕೋವಿಲ್(ಗರ್ಭಗುಡಿ) ಬಾಗಿಲಿನ ಚೌಕಟ್ಟಿನಿಂದ ಚಿನ್ನ ಕಳವು ಪ್ರಕರಣದ ತನಿಖೆಯನ್ನು ಎಸ್ಐಟಿ ನಡೆಸುತ್ತಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p> <strong>ಪತ್ತನ್ನಂತಿಟ್ಟ (ಕೇರಳ):</strong> ಶಬರಿಮಲೆ ದೇವಸ್ಥಾನದಿಂದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ದೇಗುಲದ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಸುಧೀಶ್ಕುಮಾರ್ ಅವರನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಬಂಧಿಸಿದೆ.</p><p>2019 ದೇವಾಲಯದ ಅಧಿಕಾರಿಯಾಗಿದ್ದ ಸುಧೀಶ್ ಅವರನ್ನು  ವಿಚಾರಣೆ ನಡೆಸಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.</p><p>ದೇಗುಲದ ದ್ವಾರಪಾಲಕ ಮೂರ್ತಿಗಳು ಚಿನ್ನಲೇಪಿತವಾಗಿದ್ದರೂ, ಅದು ತಾಮ್ರದ ಹಾಳೆಗಳು ಎಂದು ಸುಧೀಶ್ ಅವರು ದೇಗುಲದ ದಾಖಲೆಗಳಲ್ಲಿ ದಾಖಲಿಸಿದ್ದರು.</p><p>1990ರಿಂದಲೂ ಸುಧೀಶ್ ಅವರು ಶಬರಿಮಲೆ ದೇಗುಲದೊಂದಿಗೆ ನಂಟು ಹೊಂದಿದ್ದರು. ಗರ್ಭಗುಡಿಯ ಚಾವಣಿ ಮತ್ತು ದ್ವಾರಕಪಾಲಕ ಮೂರ್ತಿಗಳಿಗೆ 1998–99ರ ಅವಧಿಯಲ್ಲಿ ಚಿನ್ನಲೇಪನ ಮಾಡಿರುವ ಬಗ್ಗೆ ಅವರಿಗೆ ತಿಳಿದಿತ್ತು ಎಂದು ಮೂಲಗಳು ಹೇಳಿವೆ.</p><p>ಚಿನ್ನಲೇಪನ ಮಾಡಿಸುವ ಸಲುವಾಗಿ ಪ್ರಕರಣದ ಪ್ರಮುಖ ಆರೋಪಿ ಉಣ್ಣಿಕೃಷ್ಣನ್ ಪೋಟಿ ಅವರಿಗೆ ದ್ವಾರಪಾಲಕ ಮೂರ್ತಿಗಳ ಕವಚಗಳನ್ನು 2019ರಲ್ಲಿ ಹಸ್ತಾಂತರಿಸಲಾಗಿತ್ತು. ಈ ಸಂದರ್ಭದಲ್ಲಿ ಸುಧೀಶ್ ಅವರು ಚಿನ್ನದ ಕವಚಗಳನ್ನು ತಾಮ್ರದ ಕವಚಗಳೆಂದು ದಾಖಲಿಸಿದ್ದರು. ಇದರಿಂದಾಗಿ ಆರೋಪಿಗಳು ಚಿನ್ನದ ಕವಚಗಳನ್ನು ಕಳವು ಮಾಡಲು ಸಾಧ್ಯವಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p><p>ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಪೋಟಿ ಮತ್ತು ದೇಗುಲದ ಮಾಜಿ ಆಡಳಿತಾಧಿಕಾರಿ ಬಿ. ಮುರಾರಿಬಾಬು ಅವರು ಬಂಧನದಲ್ಲಿದ್ದಾರೆ.</p><p>ಪೋಟಿ ಆಪ್ತ ವಾಸುದೇವನ್ ಅವರನ್ನೂ ಎಸ್ಐಟಿ ವಿಚಾರಣೆ ನಡೆಸುತ್ತಿದೆ. ದ್ವಾರಪಾಲಕ ಮೂರ್ತಿಗಳನ್ನು ಇರಿಸಲು ಬಳಕೆಯಾಗುತ್ತಿದ್ದ ಹೆಚ್ಚುವರಿ ಪೀಠವು ವಾಸುದೇವನ್ ಅವರ ಸುಪರ್ದಿಯಲ್ಲಿತ್ತು. ಅದನ್ನು ಪೋಟಿ ಅವರ ಸಂಬಂಧಿಕರ ಮನೆಯಿಂದ ಎಸ್ಐಟಿ ಕಳೆದ ತಿಂಗಳು ಜಪ್ತಿ ಮಾಡಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.</p><p>ಶಬರಿಮಲೆ ದೇಗುಲದ ದ್ವಾರಪಾಲಕ ಮೂರ್ತಿಗಳಿಂದ ಚಿನ್ನ ಕಳವು ಪ್ರಕರಣ ಮತ್ತು ಶ್ರೀಕೋವಿಲ್(ಗರ್ಭಗುಡಿ) ಬಾಗಿಲಿನ ಚೌಕಟ್ಟಿನಿಂದ ಚಿನ್ನ ಕಳವು ಪ್ರಕರಣದ ತನಿಖೆಯನ್ನು ಎಸ್ಐಟಿ ನಡೆಸುತ್ತಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>