<p><strong>ಬೆತಿಯಾ (ಬಿಹಾರ)</strong>: ‘ದೇಶಕ್ಕಾಗಿ ನಮ್ಮ ಕುಟುಂಬದ ಪೂರ್ವಿಕರು ಮಾಡಿರುವ ತ್ಯಾಗವನ್ನು ಎಂದಿಗೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.</p><p>ಪಶ್ಚಿಮ ಚಂಪಾರಣ ಜಿಲ್ಲೆಯ ವಾಲ್ಮೀಕಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ನಮ್ಮ ಕುಟುಂಬದ ವಂಶಪಾರಂಪರ್ಯ ರಾಜಕಾರಣದ ಬಗ್ಗೆ ಟೀಕಿಸುವವರು, ಒಮ್ಮೆಯೂ ನಮ್ಮ ಪೂರ್ವಜರ ತ್ಯಾಗವನ್ನು ಪ್ರಶಂಸಿಸಲು ಸಾಧ್ಯವಾಗಿಲ್ಲ’ ಎಂದು ಹೇಳಿದರು.</p>.<p>‘ನಾವು ನಿಮಗೆ ಸೇವೆ ಸಲ್ಲಿಸಲು ಬಯಸುತ್ತೇವೆ. ದೇಶದಲ್ಲಿನ ಸಂಪತ್ತು ನಿಮಗೆ ಸೇರಿದ್ದು ಎಂದು ತಿಳಿದಿದ್ದೇವೆ. ಇಲ್ಲಿನ ಮಣ್ಣು ನಿಮ್ಮ ರಕ್ತ ಹಾಗೂ ನಮ್ಮ ಪೂರ್ವಿಕರ ರಕ್ತದಿಂದ ತೋಯ್ದಿದೆ. ವಂಶಪಾರಂಪರ್ಯ ರಾಜಕಾರಣದ ಕುರಿತು ಟೀಕಿಸುವವರು ಈ ತ್ಯಾಗವನ್ನು ಎಂದಿಗೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ’ ಎಂದರು.</p>.<p>‘ಮುಂಜಾನೆಯಿಂದ ಮುಸ್ಸಂಜೆವರೆಗೂ ಬಿಜೆಪಿಯ ನಾಯಕರು ನೆಹರೂ ಅವರನ್ನು ಟೀಕಿಸುವುದರಲ್ಲೇ ತಲ್ಲೀನರಾಗಿದ್ದಾರೆ. ದೇಶದ ಎಲ್ಲ ಸಮಸ್ಯೆಗೂ ಅವರನ್ನೇ ದೂಷಿಸುತ್ತಾರೆ. ಆದರೆ, ಅಮೆರಿಕದ ನ್ಯೂಯಾರ್ಕ್ ನಗರದ ನೂತನ ಮೇಯರ್ ಆಗಿ ಆಯ್ಕೆಯಾದ ಜೊಹ್ರಾನ್ ಮಮ್ದಾನಿ ಅವರು ನಮ್ಮ ಮುತ್ತಜ್ಜನನ್ನು ಪ್ರಂಶಸಿದ್ದಾರೆ’ ಎಂದು ಹೇಳಿದರು.</p>.<p>‘ದೇಶದ ಮೊದಲ ಪ್ರಧಾನಿಯು ದಿವಂಗತರಾದ ಬಳಿಕ, ತವರಿನಲ್ಲೇ ನಿತ್ಯವೂ ಅವಮಾನ ಎದುರಿಸುತ್ತಿದ್ದಾರೆ’ ಎಂದು ನೋವಿನಿಂದ ನುಡಿದರು.</p>.<p>‘ನಾವು ನುಸುಳುಕೋರರಿಗಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಪ್ರಧಾನಿ ದೂರುತ್ತಿದ್ದಾರೆ. ನೀವು ನಮ್ಮನ್ನು ಹಾಗೆಯೇ ನೋಡುತ್ತೀರಾ’ ಎಂದು ನೆರೆದಿದ್ದ ಜನಸ್ತೋಮವನ್ನು ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆತಿಯಾ (ಬಿಹಾರ)</strong>: ‘ದೇಶಕ್ಕಾಗಿ ನಮ್ಮ ಕುಟುಂಬದ ಪೂರ್ವಿಕರು ಮಾಡಿರುವ ತ್ಯಾಗವನ್ನು ಎಂದಿಗೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.</p><p>ಪಶ್ಚಿಮ ಚಂಪಾರಣ ಜಿಲ್ಲೆಯ ವಾಲ್ಮೀಕಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ನಮ್ಮ ಕುಟುಂಬದ ವಂಶಪಾರಂಪರ್ಯ ರಾಜಕಾರಣದ ಬಗ್ಗೆ ಟೀಕಿಸುವವರು, ಒಮ್ಮೆಯೂ ನಮ್ಮ ಪೂರ್ವಜರ ತ್ಯಾಗವನ್ನು ಪ್ರಶಂಸಿಸಲು ಸಾಧ್ಯವಾಗಿಲ್ಲ’ ಎಂದು ಹೇಳಿದರು.</p>.<p>‘ನಾವು ನಿಮಗೆ ಸೇವೆ ಸಲ್ಲಿಸಲು ಬಯಸುತ್ತೇವೆ. ದೇಶದಲ್ಲಿನ ಸಂಪತ್ತು ನಿಮಗೆ ಸೇರಿದ್ದು ಎಂದು ತಿಳಿದಿದ್ದೇವೆ. ಇಲ್ಲಿನ ಮಣ್ಣು ನಿಮ್ಮ ರಕ್ತ ಹಾಗೂ ನಮ್ಮ ಪೂರ್ವಿಕರ ರಕ್ತದಿಂದ ತೋಯ್ದಿದೆ. ವಂಶಪಾರಂಪರ್ಯ ರಾಜಕಾರಣದ ಕುರಿತು ಟೀಕಿಸುವವರು ಈ ತ್ಯಾಗವನ್ನು ಎಂದಿಗೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ’ ಎಂದರು.</p>.<p>‘ಮುಂಜಾನೆಯಿಂದ ಮುಸ್ಸಂಜೆವರೆಗೂ ಬಿಜೆಪಿಯ ನಾಯಕರು ನೆಹರೂ ಅವರನ್ನು ಟೀಕಿಸುವುದರಲ್ಲೇ ತಲ್ಲೀನರಾಗಿದ್ದಾರೆ. ದೇಶದ ಎಲ್ಲ ಸಮಸ್ಯೆಗೂ ಅವರನ್ನೇ ದೂಷಿಸುತ್ತಾರೆ. ಆದರೆ, ಅಮೆರಿಕದ ನ್ಯೂಯಾರ್ಕ್ ನಗರದ ನೂತನ ಮೇಯರ್ ಆಗಿ ಆಯ್ಕೆಯಾದ ಜೊಹ್ರಾನ್ ಮಮ್ದಾನಿ ಅವರು ನಮ್ಮ ಮುತ್ತಜ್ಜನನ್ನು ಪ್ರಂಶಸಿದ್ದಾರೆ’ ಎಂದು ಹೇಳಿದರು.</p>.<p>‘ದೇಶದ ಮೊದಲ ಪ್ರಧಾನಿಯು ದಿವಂಗತರಾದ ಬಳಿಕ, ತವರಿನಲ್ಲೇ ನಿತ್ಯವೂ ಅವಮಾನ ಎದುರಿಸುತ್ತಿದ್ದಾರೆ’ ಎಂದು ನೋವಿನಿಂದ ನುಡಿದರು.</p>.<p>‘ನಾವು ನುಸುಳುಕೋರರಿಗಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಪ್ರಧಾನಿ ದೂರುತ್ತಿದ್ದಾರೆ. ನೀವು ನಮ್ಮನ್ನು ಹಾಗೆಯೇ ನೋಡುತ್ತೀರಾ’ ಎಂದು ನೆರೆದಿದ್ದ ಜನಸ್ತೋಮವನ್ನು ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>