ನಂತರ ಜಿಎಂಸಿಎಚ್ನಲ್ಲಿ ಮಂಗಳವಾರ ತಡರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಏಮ್ಸ್ ತಂಡದ ಸದಸ್ಯರೊಬ್ಬರು, ‘ಸಚಿವರ ಉಸಿರಾಟ, ರಕ್ತದೊತ್ತಡ ಮತ್ತು ಇತರ ಆರೋಗ್ಯ ಅಂಶಗಳು ಸಮರ್ಪಕವಾಗಿವೆ. ಹಾಗಾಗಿ ಬುಧವಾರ (ಇಂದು) ಸಚಿವರಿಗೆ ನೀಡಿರುವ ವೆಂಟಿಲೇಟರ್ ತೆಗೆಯುವಂತೆ ಸಲಹೆ ನೀಡಿದ್ದೇವೆ‘ ಎಂದು ತಿಳಿಸಿದರು. ತಂಡ ಭೇಟಿ ನೀಡಿದ ವೇಳೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕೂಡ ಹಾಜರಿದ್ದರು.