'ನಿತೀಶ್ ಅವರೇ ನಿಮಗೆ ಆಯಾಸವಾಗಿದೆ. ಬಿಹಾರ ನೋಡಿಕೊಳ್ಳಲು ನಿಮಗೆ ಸಾಧ್ಯವಾಗುವುದಿಲ್ಲ' ಎಂದು ನಿತೀಶ್ (69) ಅವರನ್ನು 30 ವರ್ಷ ವಯಸ್ಸಿನ ತೇಜಸ್ವಿ ಮೂದಲಿಸಿದ್ದಾರೆ. ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ನಿತೀಶ್ ನೇತೃತ್ವದ ಸರ್ಕಾರ ಭ್ರಷ್ಟಾಚಾರ ತೊಡೆದು ಹಾಕಲು ವಿಫಲವಾಗಿದೆ, ಕೈಗಾರಿಕೆಗಳನ್ನು ಸ್ಥಾಪಿಸಲು ಅನುವು ಮಾಡಿಕೊಡುವುದು ಹಾಗೂ ಉದ್ಯೋಗ ನೀಡುವುದು, ಜೀವನಾಂಶಗಳಿಗಾಗಿ ವಲಸೆ ನಡೆಯುತ್ತಿರುವ ಬಗ್ಗೆ ಪರಿಶೀಲನೆ ನಡೆಸಿಲ್ಲ ಎಂದು ಆರೋಪಿಸಿದ್ದಾರೆ.