‘ವಾರಕ್ಕೆ ಎರಡು ಬಾರಿಯಾದರೂ ಚಹ ನೀಡುತ್ತಿದ್ದ, ತಮ್ಮ ಪ್ರವಾಸದ ಕಥೆಗಳನ್ನು ಹೇಳುತ್ತಿದ್ದ, ಯುವ ಮನಸ್ಸಿನ ಗೆಳೆಯ ಎರ್ನಾಕುಲಂನ ಚಹ ಮಾರಾಟಗಾರ ವಿಜಯನ್ ಅಗಲಿದ್ದಾರೆ. ಅವರು ಈಗಷ್ಟೆ ರಷ್ಯಾದಿಂದ ಮರಳಿದ್ದರು. ಅವರು ಅಧ್ಯಕ್ಷ ಪುಟಿನ್ ಅವರನ್ನು ಭೇಟಿ ಮಾಡಲು ಬಯಸಿದ್ದರು’ ಎಂದು ಪ್ರಸಿದ್ಧ ಬರಹಗಾರ ಎನ್.ಎಸ್.ಮಾಧವನ್ ಟ್ವೀಟ್ ಮಾಡಿದ್ದಾರೆ.