ಇದಕ್ಕೆ ಮೊದಲ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, ಅಪಾರ ಆಕಾಂಕ್ಷೆ ಹೊಂದಿರುವ ಸಮಾಜ, ಕೃಷಿಕರು ಮತ್ತು ಮಧ್ಯಮ ವರ್ಗದ ಜನರ ಕನಸುಗಳನ್ನು ಸಾಕಾರಗೊಳಿಸಲಿದೆ ಎಂದು ಹೇಳಿದರು.
ದೇಶದ ಮಧ್ಯಮ ವರ್ಗವು ಸಮೃದ್ಧ ಹಾಗೂ ಅಭಿವೃದ್ಧಿ ಹೊಂದಿದ ಭಾರತದ ಕನಸುಗಳನ್ನು ನನಸಾಗಿಸುವ ಶಕ್ತಿಯಾಗಿದೆ. ಅದನ್ನು ಸಾಕಾರಗೊಳಿಸಲು ನಮ್ಮ ಸರ್ಕಾರವು ಹಲವು ನಿರ್ಣಯಗಳನ್ನು ಕೈಗೊಂಡಿದೆ ಎಂದು ಹೇಳಿದರು.
ಸಮಾಜದ ವಿವಿಧ ಇಲಾಖೆಗಳನ್ನು ಬಜೆಟ್ ತಲುಪಿದೆ. ಡಿಜಿಟಲ್ ಪಾವತಿಯ ಯಶಸ್ಸನ್ನು ಕೃಷಿ ವಲಯದಲ್ಲಿ ಪುನರಾವರ್ತಿಸಬೇಕು. ಅದಕ್ಕಾಗಿ ಡಿಜಿಟಲ್ ಮೂಲಸೌಕರ್ಯಗಳನ್ನು ಹಾಕುವ ಯೋಜನೆ ತರಲಾಗಿದೆ ಎಂದು ಹೇಳಿದರು.
ಮೂಲಸೌಕರ್ಯಕ್ಕೆ ₹10 ಲಕ್ಷ ಕೋಟಿ ಹೂಡಿಕೆಯು ಅಭಿವೃದ್ಧಿಗೆ ಆವೇಗ ಮತ್ತು ಹೊಸ ಚೈತನ್ಯವನ್ನು ತುಂಬಲಿವೆ ಎಂದು ಹೇಳಿದರು.