ಜ್ಞಾನವಾಪಿ ಮಸೀದಿಯು ಕಾಶಿ ವಿಶ್ವನಾಥದೇವಾಲಯದ ಒಂದು ಭಾಗ. ಪ್ರಸ್ತುತ ಮಸೀದಿಯ ಸ್ಥಳದಲ್ಲಿ ಪ್ರಾಚೀನ ದೇಗುಲವನ್ನು ಪುನರ್ ಸ್ಥಾಪಿಸುವಂತೆ ಕೋರಿ 1991ರಲ್ಲಿ ವಾರಾಣಸಿ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಈ ಮೂಲ ಅರ್ಜಿಯನ್ನುಅಂಜುಮನ್ ಇಂತಿಜಾಮಿಯಾ ಮಸೀದಿ, ವಾರಾಣಸಿ ಮಸೀದಿ ನಿರ್ವಹಣಾ ಸಮಿತಿ ಮತ್ತು ಇತರರು ಪ್ರಶ್ನಿಸಿದ್ದಾರೆ.