ನವದೆಹಲಿ: ‘ಬಡವರ ಹಿತಾಸಕ್ತಿಯನ್ನು ಕೇಂದ್ರೀಕರಿಸಿ ಪ್ರತಿ ಬಜೆಟ್ ಅನ್ನು ಬಿಜೆಪಿ ಸರ್ಕಾರವು ಮಂಡಿಸಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಬಣ್ಣಿಸಿದ್ದಾರೆ.
ಇಲ್ಲಿ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ಲೋಕಸಭಾ ಚುನಾವಣೆಗೂ ಮುನ್ನ ಮಂಡನೆಯಾದ ಪೂರ್ಣ ಪ್ರಮಾಣದ ಬಜೆಟ್ ಈ ಬಾರಿಯದ್ದಾಗಿದ್ದರೂ ಯಾರೂ ಇದನ್ನು ‘ಚುನಾವಣಾ ಬಜೆಟ್’ ಎಂದು ಕರೆಯುತ್ತಿಲ್ಲ ಎಂದೂ ಹೇಳಿದ್ದಾರೆ.
‘ಸಮಗ್ರ ಅಭಿವೃದ್ಧಿ ಮತ್ತು ಸಮಾಜದ ಎಲ್ಲಾ ವಿಭಾಗಗಳ ಹಿತಾಸಕ್ತಿಗೆ ಬಜೆಟ್ನಲ್ಲಿ ಆದ್ಯತೆ ನೀಡಲಾಗಿತ್ತು’ ಎಂದು ಪ್ರತಿಪಾದಿಸಿದ್ದಾರೆ.