ಛತ್ತರ್ಪುರ: ‘ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯ ಗ್ರಾಮವೊಂದರಲ್ಲಿ ನಿರ್ಮಾಣ ಕಾರ್ಯದ ವೇಳೆ ವಿದ್ಯುತ್ ಸ್ಪರ್ಶದಿಂದ ಒಂದೇ ಕುಟುಂಬ ಆರು ಮಂದಿ ಮೃತಪಟ್ಟಿದ್ಧಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಮಹುವಾ ಜ್ಹಾಲಾ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಸೆಪ್ಟಿಕ್ ಟ್ಯಾಂಕ್ ನಿರ್ಮಾಣದ ವೇಳೆ ಈ ದುರಂತ ಸಂಭವಿಸಿದೆ’ ಎಂದು ಬಿಜಾವರ್ ಪೊಲೀಸ್ ಠಾಣಾ ಉಸ್ತುವಾರಿ ಮುಕೇಶ್ ಸಿಂಗ್ ಠಾಕೂರ್ ಹೇಳಿದರು.
‘ಶಟರ್ ಪ್ಲೇಟ್ಗಳನ್ನು ತೆಗೆಯಲು ವ್ಯಕ್ತಿಯೊಬ್ಬ ಟ್ಯಾಂಕ್ನೊಳಗೆ ಇಳಿದಿದ್ದ. ಆಗ ಟ್ಯಾಂಕ್ನಲ್ಲಿ ಮಾಡಲಾಗಿದ್ದ ಬೆಳಕಿನ ವ್ಯವಸ್ಥೆಯಲ್ಲಿ ವಿದ್ಯುತ್ ಸೋರಿಕೆ ಉಂಟಾಗಿ ಪ್ಲೇಟ್ಗಳಿಗೆ ವಿದ್ಯುತ್ ಸ್ಪರ್ಶಿಸಿ ಆಘಾತ ಸಂಭವಿಸಿತು. ಆತನನ್ನು ರಕ್ಷಿಸಲು ಕುಟುಂಬದ ಇತರ ಸದಸ್ಯರು ಕೂಡ ಟ್ಯಾಂಕಿಗೆ ಇಳಿದಾಗ ಎಲ್ಲರೂ ವಿದ್ಯುತ್ ಆಘಾತಕ್ಕೆ ಒಳಗಾದರು. ಆದರೆ ಆಸ್ಪತ್ರೆ ತಲುಪುವ ಮೊದಲೇ ಅವರು ಮೃತಪಟ್ಟಿದ್ದರು’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.