‘ನವೀ ಮುಂಬೈನ ಕಾರ್ಮಿಕ ಗಣೇಶ್, ಠಾಣೆಯ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ. 2019ರ ಜೂನ್ 28ರಂದು ಅವರನ್ನು ವಿಚಾರಣೆ ಸಲುವಾಗಿ ಜಿಲ್ಲಾ ಮತ್ತು ಹೆಚ್ಚುವರಿ ಸೆಷನ್ ನ್ಯಾಯಾಧೀಶರಾದ ಆರ್.ಎಸ್. ಗುಪ್ತಾ ಅವರ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ತನಗೆ ಒದಗಿಸಿದ ವಕೀಲರು ವಿಚಾರಣೆಗೆ ಹಾಜರಾಗುತ್ತಿಲ್ಲ ಎಂಬುದನ್ನು ಈ ವೇಳೆ ಆರೋಪಿ ನ್ಯಾಯಾಧೀಶರ ಗಮನಕ್ಕೆ ತಂದಿದ್ದರು. ಆಗ ನ್ಯಾಯಾಧೀಶರು, ತಮಗೆ ಇನ್ನೊಬ್ಬರು ವಕೀಲರನ್ನು ನಿಯೋಜಿಸುತ್ತೇವೆ ಮತ್ತು ವಿಚಾರಣೆಯನ್ನು ಇನ್ನೊಂದು ದಿನ ಮಾಡುತ್ತೇವೆ ಎಂದು ಹೇಳಿದರು. ಆಗ ಈ ಆರೋಪಿ ತನ್ನ ಚಪ್ಪಲಿಯನ್ನು ನ್ಯಾಯಾಧೀಶರ ಮೇಲೆ ಎಸೆದು, ಅವಾಚ್ಯ ಪದಗಳಿಂದ ನಿಂದಿಸಿದರು’ ಎಂದು ಸರ್ಕಾರಿ ವಕೀಲರಾದ ಎಸ್.ಎಂ. ದಾಂಡೇಕರ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.