ತ್ರಿಲೋಕಚಂದ್ ಶರ್ಮಾ ಬಂಧಿತ ಆರೋಪಿ. ಆತನ ವಿರುದ್ಧ ‘ನೆಗೋಷಿಯಬಲ್ ಇನ್ಸ್ಟ್ರುಮೆಂಟ್ ಕಾಯ್ದೆ’ಯ ಅಡಿ ಪ್ರಕರಣ ದಾಖಲಾಗಿ, ವಿಚಾರಣೆ ನಡೆಯುತ್ತಿತ್ತು. ಆದೇಶ ತನ್ನ ವಿರುದ್ಧ ಬರಬಹುದು ಎಂಬ ಭಯದಲ್ಲಿ ಆತ ನ್ಯಾಯಾಧೀಶರಿಗೆ ಅನಾಮಧೇಯ ಪತ್ರ ಬರೆದಿದ್ದ. ಪತ್ರದಲ್ಲಿ ನ್ಯಾಯಾಧೀಶರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ.