‘ನ್ಯಾಯಾಲಯದ ಹೊರಗೆ ಮಹಿಳೆ ಮತ್ತು ಪುರುಷರೊಬ್ಬರು ಮೈಮೇಲೆ ಸೀಮೆ ಎಣ್ಣೆ ಸುರಿದು, ಬೆಂಕಿ ಹಚ್ಚಿಕೊಂಡಿದ್ದಾರೆ. ಇದನ್ನು ಗಮನಿಸಿದ ನ್ಯಾಯಾಲಯದ ಪೊಲೀಸ್ ಪಡೆ ಕೂಡಲೇ ಅವರಿಬ್ಬರಿಗೆ ಕಂಬಳಿ ಸುತ್ತಿ, ಬೆಂಕಿಯನ್ನು ನಂದಿಸಿದೆ. ಬಳಿಕ ಅವರನ್ನು ರಾಮ್ ಮನೋಹರ್ ಲೊಹಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು’ ಎಂದು ನವದೆಹಲಿಯ ಪೊಲೀಸ್ ಉಪ ಆಯುಕ್ತ ದೀಪಕ್ ಯಾದವ್ ಅವರು ಮಾಹಿತಿ ನೀಡಿದರು.