ಘಟನೆಯ ಕುರಿತು ಬುಧವಾರ ಸಭೆ ನಡೆಸಿದ ಚೌಹಾಣ್, ಉನ್ನತ ಮಟ್ಟದ ತನಿಖೆಗೂ ಇದೇ ವೇಳೆ ಆದೇಶಿಸಿದ್ದಾರೆ. ಗೃಹ ಇಲಾಖೆಯಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಶ್ ರಜೋರ ಅವರ ನೇತೃತ್ವದಲ್ಲಿ ಮೂರು ಸದಸ್ಯರಿರುವ ಸಮಿತಿಯನ್ನು ತನಿಖೆಗಾಗಿ ರಚಿಸಲಾಗಿದೆ. ಸಮಿತಿಯಲ್ಲಿ ಸಿಐಡಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎ.ಸಾಯಿ ಮನೋಹರ್, ಡಿಐಜಿ ಮಿತಿಲೇಷ್ ಶುಕ್ಲಾ ಇದ್ದಾರೆ. ಮೊರೆನಾ ಹಾಗೂ ಗ್ವಾಲಿಯರ್ನಲ್ಲಿ ಪ್ರಸ್ತುತ 21 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.