ಬಾಂದಾಕ್ಕೆ ಬರುವ ಮಾರ್ಗಮಧ್ಯೆ, ಅನ್ಸಾರಿ ಇದ್ದ ವಾಹನ, ಭದ್ರತೆಗೆ ನಿಯೋಜನೆಗೊಂಡಿದ್ದ ವಾಹನಗಳು ರಾತ್ರಿ 1.30ರ ವೇಳೆ ಸತ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೆಲ ಕಾಲ ತಂಗಿದ್ದವು. ಇದು ಊಹಾಪೋಹಗಳಿಗೆ ಕಾರಣವಾಗಿತ್ತು. ನಂತರ, ‘ಮೂತ್ರ ವಿಸರ್ಜನೆಗಾಗಿ ಅನ್ಸಾರಿ ಕೇಳಿದ್ದರಿಂದ ಇಲ್ಲಿ ಕೆಲ ಹೊತ್ತು ವಾಹನಗಳು ತಂಗಿದ್ದವು’ ಎಂದು ಸತ್ತಿ ಠಾಣೆ ಅಧಿಕಾರಿ ಕಪಿಲ್ ದುಬೆ ಸ್ಪಷ್ಟನೆ ನೀಡಿದರು.