ಒಡಿಶಾ 480 ಕಿ.ಮೀ ಉದ್ದದ ಕರಾವಳಿಯನ್ನು ಹೊಂದಿದ್ದು, ಇದರಲ್ಲಿ ಬಹುತೇಕ ಭಾಗ ಚಂಡಮಾರುತಕ್ಕೆ ಗುರಿಯಾಗಿ ಹಾನಿಯಾಗಿದೆ ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು, ‘ಯಸ್’ ಚಂಡಮಾರುತದ ಹಾನಿಯ ಪರಿಶೀಲನೆಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿದ್ದರು. ‘ಯಸ್’ ಚಂಡಮಾರುತದಿಂದ 125 ಗ್ರಾಮಗಳಿಗೆ ಸಮುದ್ರ ನೀರು ನುಗ್ಗಿ ಕೃಷಿ ಭೂಮಿಗೆ ಹಾನಿ ಉಂಟಾಗಿದೆ.