ಇದಕ್ಕೆ ಈ ಹಿಂದೆಯೇ ತಿರುಗೇಟು ನೀಡಿರುವ ಪಿಣರಾಯಿ ವಿಜಯನ್, ಉತ್ತರದ ರಾಜ್ಯಗಳು ಕೇರಳದಂತೆ ಅಭಿವೃದ್ಧಿ ಹೊಂದಿದರೆ ಜನರು ಶಾಂತಿಯಿಂದ ಮತ್ತು ಉತ್ತಮ ಜೀವನ ನಡೆಸಬಹುದು. ಉತ್ತರ ಪ್ರದೇಶವು ಕೇರಳದಂತೆ ಆದರೆ ಉತ್ತಮ ಶಿಕ್ಷಣ, ಆರೋಗ್ಯ ಸೇವೆ ದೊರೆಯಲಿದೆ. ಸಾಮಾಜಿಕ ಕಲ್ಯಾಣ, ಜನರ ಜೀವನ ಮಟ್ಟ ಸುಧಾರಣೆಯಾಗಲಿದೆ. ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಹತ್ಯೆಗಳು ನಡೆಯದ ಸಾಮರಸ್ಯದ ಸಮಾಜ ನಿರ್ಮಾಣವಾಗಲಿದೆ. ಇಂಥ ಸ್ಥಿತಿ ಉತ್ತರ ಪ್ರದೇಶದ ಜನರಿಗೆ ಬೇಕಾಗಿದೆ. ಇದು ಯೋಗಿ ಆದಿತ್ಯನಾಥ್ ಹೆದರಿಕೆಗೆ ಕಾರಣವಾಗಿದೆ ಎಂದು ಹೇಳಿದ್ದರು.