ನವದೆಹಲಿ:ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸದೃಢತೆ ಮತ್ತು ಆರೋಗ್ಯ ಪ್ರಜ್ಞೆಯನ್ನು ಜಾಗೃತಿಗೊಳಿಸಲು ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರು ಭಾನುವಾರ ರಾಷ್ಟ್ರಪತಿ ಭವನ ಆವರಣದಲ್ಲಿ ಓಟ ಆಯೋಜಿಸಿದ್ದರು.
ರಾಷ್ಟ್ರಪತಿ ಅವರಪತ್ನಿ ಸವಿತಾ ಕೋವಿಂದ್ ಅವರು ಓಟಕ್ಕೆ ಚಾಲನೆ ನೀಡಿದರು. ಐದು ಕಿ.ಮೀ ಓಟವು ರಾಷ್ಟ್ರಪತಿ ಭವನ ಮುಂಭಾಗದಿಂದ ಆರಂಭವಾಗಿ ಕ್ರೀಡಾ ಸಂಕೀರ್ಣದಲ್ಲಿ ಮುಕ್ತಾಯವಾಯಿತು. ರಾಷ್ಟ್ರಪತಿ ಜೊತೆ ಅವರ ಕಾರ್ಯದರ್ಶಿಗಳು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.