ನವದೆಹಲಿ: ಫೆ. 14ರಂದು ಚೆನ್ನೈನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಅರ್ಜುನ್’ ಟ್ಯಾಂಕ್ ಅನ್ನು (ಎಂಕೆ–1ಎ) ಸೇನೆಗೆ ಹಸ್ತಾಂತರಿಸುವರು.
ತಮಿಳುನಾಡು ಹಾಗೂ ಕೇರಳದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವರು. ಹಲವು ಯೋಜನೆಗಳನ್ನು ಉದ್ಘಾಟಿಸುವರು ಎಂದು ಪಿಎಂಒ ಪ್ರಕಟಣೆ ತಿಳಿಸಿದೆ.
ಚೆನ್ನೈ ಮೆಟ್ರೊ ಪ್ರಾಜೆಕ್ಟ್, ಕೇರಳದಲ್ಲಿ ಪೆಟ್ರೊಕೆಮಿಕಲ್ ಕಾಂಪ್ಲೆಕ್ಸ್ನ ಉದ್ಘಾಟನೆ ನೆರವೇರಿಸುವರು.
ಡಿಆರ್ಡಿಒ ಅಂಗಸಂಸ್ಥೆ ‘ಕಂಬ್ಯಾಟ್ ವೆಹಿಕಲ್ಸ್ ರಿಸರ್ಚ್ ಆ್ಯಂಡ್ ಡೆವಲೆಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್’, 15 ಶೈಕ್ಷಣಿಕ ಸಂಸ್ಥೆಗಳು, 8 ಲ್ಯಾಬ್ಗಳು ಹಾಗೂ ಹಲವಾರು ಎಂಎಸ್ಎಂಇಗಳು ‘ಅರ್ಜುನ್’ ಯುದ್ಧ ಟ್ಯಾಂಕ್ ಅನ್ನು ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿವೆ.