ನಿರಾಲಾ ನಗರದಲ್ಲಿ ರಾಮ ಮಹೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಹಿಂದೂ ಮಹಿಳೆಯರು ‘ನಾವಿಬ್ಬರು ನಮಗಿಬ್ಬರು’ (ಹಮ್ ದೋ, ಹಮಾರೆ ದೋ) ಎನ್ನುವ ತತ್ವವನ್ನು ಅನುಸರಿಸುತ್ತಿದ್ದಾರೆ. ಆದರೆ, ನಾನು ವಿನಂತಿಸಿಕೊಳ್ಳುವುದೇನೆಂದರೆ, ಎಲ್ಲ ಹಿಂದೂ ದಂಪತಿ ನಾಲ್ವರು ಮಕ್ಕಳನ್ನು ಹೆತ್ತು, ಅವರಲ್ಲಿ ಇಬ್ಬರನ್ನು ದೇಶಕ್ಕೆ ಅರ್ಪಿಸಬೇಕು. ಉಳಿದ ಇಬ್ಬರನ್ನು ಕುಟುಂಬಕ್ಕೆ ಮೀಸಲಿಡಬೇಕು’ ಎಂದರು.