<p>ಅಯೋಧ್ಯೆ (ಉತ್ತರ ಪ್ರದೇಶ): ‘ಕರಸೇವಕರಿಗೆ ಗುಂಡಿಕ್ಕಲು ಸಮಾಜವಾದಿ ಪಕ್ಷದ ಸರ್ಕಾರವು ಆದೇಶಿಸಿತ್ತು. ರಾಮನನ್ನು ಹಲವು ವರ್ಷಗಳ ಕಾಲ ಟೆಂಟ್ನಲ್ಲಿ ಇರುವಂತೆ ಮಾಡಲಾಗಿತ್ತು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ಇಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಅಯೋಧ್ಯೆಯಲ್ಲಿ ಕರಸೇವಕರಿಗೆ ಗುಂಡಿಕ್ಕಲಾ<br />ಗಿತ್ತು. ಅವರ ಶವಗಳನ್ನು ಸರಯೂ ನದಿಯಲ್ಲಿ ಬಿಸಾಡಲಾಗಿತ್ತು. ಇದು ನಿಮಗೆ ನೆನಪಿದೆಯೇ? ಎಸ್ಪಿ ಮತ್ತು ಬಿಎಸ್ಪಿ ಆಡಳಿತದಲ್ಲಿ ಜನರ ನಂಬಿಕೆಯನ್ನು ಗೌರವಿಸುವ ಪರಿಪಾಠವೇ ಇರಲಿಲ್ಲ’ ಎಂದು ಅವರು ಹರಿಹಾಯ್ದಿದ್ದಾರೆ.</p>.<p>‘ಅಖಿಲೇಶ್ ಯಾದವ್ ಅವರು ಮತ ಕೇಳಲು ಇಲ್ಲಿಗೆ ಬರುತ್ತಾರೆ. ಆಗ, ಕರಸೇವಕರು ಏನು ಅನ್ಯಾಯ ಮಾಡಿದ್ದರೆಂದು ಅವರನ್ನು ಗುಂಡಿಟ್ಟು ಕೊಂದಿರಿ ಎಂದು ಪ್ರಶ್ನಿಸಿ’ ಎಂದು ಶಾ ಕರೆ ನೀಡಿದ್ದಾರೆ.</p>.<p>‘ರಾಮ ಮಂದಿರ ನಿರ್ಮಾಣವನ್ನು ತಡೆಯಲು ಎಸ್ಪಿ, ಬಿಎಸ್ಪಿ ಮತ್ತು ಕಾಂಗ್ರೆಸ್ ತಡೆ ಒಡ್ಡುತ್ತಲೇ ಇದ್ದವು. ಹೀಗಾಗಿಯೇ ರಾಮಲಲ್ಲಾ ದಶಕಗಳ ಕಾಲ ಟೆಂಟ್ನಲ್ಲಿಯೇ ಕಳೆಯಬೇಕಾಯಿತು. ಈಗ ಅದನ್ನು ತಡೆಯಲು ಯಾರಾದರೂ ಬಯಸಿದರೆ, ತಡೆಯಲು ಯತ್ನಿಸಲಿ’ ಎಂದು ಅವರು ಸವಾಲು ಹಾಕಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಯೋಧ್ಯೆ (ಉತ್ತರ ಪ್ರದೇಶ): ‘ಕರಸೇವಕರಿಗೆ ಗುಂಡಿಕ್ಕಲು ಸಮಾಜವಾದಿ ಪಕ್ಷದ ಸರ್ಕಾರವು ಆದೇಶಿಸಿತ್ತು. ರಾಮನನ್ನು ಹಲವು ವರ್ಷಗಳ ಕಾಲ ಟೆಂಟ್ನಲ್ಲಿ ಇರುವಂತೆ ಮಾಡಲಾಗಿತ್ತು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ಇಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಅಯೋಧ್ಯೆಯಲ್ಲಿ ಕರಸೇವಕರಿಗೆ ಗುಂಡಿಕ್ಕಲಾ<br />ಗಿತ್ತು. ಅವರ ಶವಗಳನ್ನು ಸರಯೂ ನದಿಯಲ್ಲಿ ಬಿಸಾಡಲಾಗಿತ್ತು. ಇದು ನಿಮಗೆ ನೆನಪಿದೆಯೇ? ಎಸ್ಪಿ ಮತ್ತು ಬಿಎಸ್ಪಿ ಆಡಳಿತದಲ್ಲಿ ಜನರ ನಂಬಿಕೆಯನ್ನು ಗೌರವಿಸುವ ಪರಿಪಾಠವೇ ಇರಲಿಲ್ಲ’ ಎಂದು ಅವರು ಹರಿಹಾಯ್ದಿದ್ದಾರೆ.</p>.<p>‘ಅಖಿಲೇಶ್ ಯಾದವ್ ಅವರು ಮತ ಕೇಳಲು ಇಲ್ಲಿಗೆ ಬರುತ್ತಾರೆ. ಆಗ, ಕರಸೇವಕರು ಏನು ಅನ್ಯಾಯ ಮಾಡಿದ್ದರೆಂದು ಅವರನ್ನು ಗುಂಡಿಟ್ಟು ಕೊಂದಿರಿ ಎಂದು ಪ್ರಶ್ನಿಸಿ’ ಎಂದು ಶಾ ಕರೆ ನೀಡಿದ್ದಾರೆ.</p>.<p>‘ರಾಮ ಮಂದಿರ ನಿರ್ಮಾಣವನ್ನು ತಡೆಯಲು ಎಸ್ಪಿ, ಬಿಎಸ್ಪಿ ಮತ್ತು ಕಾಂಗ್ರೆಸ್ ತಡೆ ಒಡ್ಡುತ್ತಲೇ ಇದ್ದವು. ಹೀಗಾಗಿಯೇ ರಾಮಲಲ್ಲಾ ದಶಕಗಳ ಕಾಲ ಟೆಂಟ್ನಲ್ಲಿಯೇ ಕಳೆಯಬೇಕಾಯಿತು. ಈಗ ಅದನ್ನು ತಡೆಯಲು ಯಾರಾದರೂ ಬಯಸಿದರೆ, ತಡೆಯಲು ಯತ್ನಿಸಲಿ’ ಎಂದು ಅವರು ಸವಾಲು ಹಾಕಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>